ಚಿಕ್ಕಮಗಳೂರು; ಪ್ರತಿಯೋಬ್ಬರು ಗುರು ಹಿರಿಯರ ಆಶೀರ್ವಾದ ಪಡೆದು ದೇವರ ಕೆಲಸಗಳನ್ನು ಅರ್ಥಪೂರ್ಣವಾಗಿ ಮಾಡಿದಾಗ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಬಿಜೆಪಿ ಮಹಿಳಾ ಮಂಡಲ ಉಪಾಧ್ಯಕ್ಷರಾದ ಪಲ್ಲವಿ. ಸಿ.ಟಿ.ರವಿ ತಿಳಿಸಿದರು.
ಭಾನುವಾರ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿ ವತಿಯಿಂದ ೪೮ ನೇ ವರ್ಷದ ಅನ್ನದಾನ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ನಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು,
ನಾಡಿಗೆ ಬಂದಿರುವ ಬೀಕರ ರೋಗಗಳಾದ ಕೋರೋನಾ ಮತ್ತು ಒಮಿಕ್ರಾನ್ ಕಾಯಿಲೆಯಿಂದ ಮುಕ್ತವಾಗಬೇಕೆಂದು ಅಯ್ಯಪ್ಪಸ್ವಾಮಿಯಲ್ಲಿ ಪ್ರಾರ್ಥಿಸಿಕೊಳ್ಲಲಾಗಿದೆ ಎಂದರು. ದೇಶದಾದ್ಯಂತ ನಗರ ಮತ್ತು ಗ್ರಾಮಗಳಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ಮಾಲೆ ಧರಿಸಿ ಕಠಿಣ ವ್ರತವನ್ನು ಆಚರಿಸಿ ಕುಟುಂಬ ಮತ್ತು ಗ್ರಾಮಕ್ಕೆ ಒಳ್ಳೆಯದಾಗಲೆಂದು ಅತ್ಯಂತ ಶ್ರದ್ದಾ ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯ ಪೂಜೆಯನ್ನು ನೆರೆವೇರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸುದರ್ಶನ್, ನಗರಸಭೆ ಆಯುಕ್ತರಾದ ಬಸವರಾಜ್, ತಹಶಿಲ್ದಾರ್ ಕಾಂತರಾಜ್, ಅಯ್ಯಪ್ಪಸ್ವಾಮಿ ಪೂಜಾ ಸಮಿತಿಯ ಅಧ್ಯಕ್ಷರಾಗಿ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಅಶೋಕ್ಸಚ್ಚಿದೇವ್, ಕನ್ವಿನರ್, ಉಮೇಶ್, ಖಜಾಂಚಿ ಸಾರಥಿಮಂಜುನಾಥ್, ಉಪಾಧ್ಯಕ್ಷರುಗಳಾದ ಜೀವನ್.ಕೆ.ಶೆಟ್ಟಿ, ಟಿ.ವೆಂಕಟೇಶ್, ಅಣ್ಣಯ್ಯ, ಮಹಾದೇವ್, ಕಾರ್ಯದರ್ಶಿಗಳಾದ ಉಮೇಶ್, ಲಕ್ಷ್ಮೀಕಾಂತ್, ನಟರಾಜ್ ಕೋಟೆ, ದಿಲೀಪ್ ರಾಜ್, ಸಹಕಾರ್ಯದರ್ಶಿ ಚೆನ್ನಕೇಶವ, ಮನೋಹರ್, ಜವರಪ್ಪ, ಯಶವಂತ್.ಆರ್.ರಾವ್, ಎಸ್.ಡಿ.ಎಂ.ಮಂಜು, ರಾಜುಶೆಟ್ಟಿ ಇತರರು ಉಪಸ್ಥಿತರಿದ್ದರು.
Discussion about this post