ರಶ್ಮಿಕಾ ಮಂದಣ್ಣ ಬಹಳ ಖುಷಿಯಲ್ಲಿದ್ದಾರೆ. ತೆಲುಗಿನ ನಟ ಅಲ್ಲು ಅರ್ಜುನ್ ತಾವು ಕಳುಹಿಸಿದ ಉಡುಗೊರೆ ಸ್ವೀಕರಿಸಿದರು ಅಂತಲ್ಲ. ಅವರು ಖುಷಿಗೆ ಕಾರಣ ಪುಷ್ಪ ಎಂಬ ತೆಲುಗಿನ ಚಿತ್ರ. ಇದರಲ್ಲಿ ರಶ್ಮಿಕಾ ಅಲ್ಲು ಅರ್ಜುನ್ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಅವರದ್ದು ಭಿನ್ನವಿಭಿನ್ನ ಪಾತ್ರವಂತೆ. ಜನ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ಕೌತುಕ ರಶ್ಮಿಕಾ ಅವರಿಗೆ ಇದೆ. ‘ನನಗೆ ಕುತೂಹಲ, ಭಯ ಎಲ್ಲವೂ ಇದೆ’ ಅಂತ ಸಮ್ಮಿಶ್ರ ಭಾವದಲ್ಲೇ ರಶ್ಮಿಕಾ ಮಾತನಾಡುತ್ತಾರೆ.
ರಶ್ಮಿಕಾ ಈ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಕಚ್ಚಾ ತೆಲುಗು ಭಾಷೆಯನ್ನು ಕಲಿತಿದ್ದಾರೆ. ಅದೂ ನಲ್ಲೂರಿನ ಭಾಷೆ. ಅದು ತೆಲುಗೇ ಆದರೂ, ಅದೇ ಶಬ್ದಗಳಿದ್ದರೂ ಭಾಷೆಯ ನಿರೂಪಣೆ, ಉಚ್ಚಾರಗಳು ಬೇರೆ ಬೇರೆ. ‘ಕಲಾವಿದರ ಭಾಷೆಯ ಉಚ್ಚಾರವೂ ಕೂಡ ಸಿನಿಮಾದ ಗೆಲುವಿಗೆ ಕಾರಣವಾಗಬಹುದು. ಹೀಗಾಗಿ, ಚಿತ್ತೂರಿನ ಭಾಷೆ ಬಲ್ಲವರನ್ನೇ ಮುಂದೆ ನಿಲ್ಲಿಸಿಕೊಂಡು ಡಬ್ಬಿಂಗ್ ಮಾಡಿದ್ದೇನೆ. ತಪ್ಪಾದಾಗೆಲ್ಲ ಅವರು ತಿದ್ದಿ ತೀಡಿದ್ದಾರೆ’ ಎನ್ನುತ್ತಾರೆ ರಶ್ಮಿಕಾ.
ರಶ್ಮಿಕಾ ಸಿನಿಬದುಕಿನ ಬಹಳ ನಿರೀಕ್ಷಿತ ಚಿತ್ರ ಪುಷ್ಪ, ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
‘ನನಗೆ ಶ್ರೀವಲ್ಲಿಯ ಪಾತ್ರ ಬಹಳ ಶಾಕ್ ನೀಡಿತ್ತು. ನಾನು ಅದರ ಪಾತ್ರವಾಗಿಯೇ ಹೋಗಿದ್ದೇನೆ. ಶ್ರೀವಲ್ಲಿಯನ್ನು ಮೈ ಮೇಲೆ ಆಹ್ವಾನಿಸಿಕೊಂಡೇ ಡಬ್ಬಿಂಗ್ ಮಾಡಿದ್ದೇನೆ. ಹೀಗಾಗಿ, ಚಿತ್ರದ ಬಗ್ಗೆ ನನಗೇ ಕುತೂಹಲವಿದೆ. ಜನ ಹೇಗೆ ಸ್ವೀಕರಿಸುತ್ತಾರೆ’ ಅಂತ ಎನ್ನುತ್ತಾರೆ ಮಂದಣ್ಣ.
ಕನ್ನಡಕ್ಕೆ ಬರ್ತೀನಿ
ರಶ್ಮಿಕಾ ಕಿರಿಕ್ ಪಾರ್ಟಿಯ ಮೂಲಕ ಜಗತ್ತಿಗೆ ಪರಿಚಯವಾದವವರು. ಈಗ ಕನ್ನಡ ಚಿತ್ರರಂಗದ ಗಡಿಯನ್ನು ಹಾರಿ, ಜಗತ್ತಿನಾದ್ಯಂತ ಸುತ್ತುತ್ತಿದ್ದಾರೆ. ರಶ್ಮಿಕಾಗೆ ಭಾಷೆಯ ಬೇಲಿ ಇಲ್ವಂತೆ. ಇಂಥ ಭಾಷೆ ಚಿತ್ರ ಮಾಡಬೇಕು, ಅಂಥ ಭಾಷೆಯಲ್ಲೇ ಹೆಚ್ಚು ತೊಡಗಿಸಿಕೊಳ್ಳಬೇಕು ಅನ್ನೋ ಯೋಚನೆಗಳೇ ಬರುವುದಿಲ್ಲವಂತೆ. ‘ಸಿನಿಮಾನೇ ಒಂದು ಭಾಷೆ. ಹೀಗಾಗಿ, ಕಥೆ ಇಷ್ಟವಾಗುವ ಎಲ್ಲ ಸಿನಿಮಾಗಳಲ್ಲೂ ನಟಿಸುತ್ತೇನೆ. ಹಾಗೇನೇ, ಕನ್ನಡ ಕಥೆಗಳು ಇಷ್ಟವಾದರೆ ಅದರಲ್ಲೂ ನಟಿಸುತ್ತೇನೆ. ಬೇರೆ ಭಾಷೆಯ ಮೂಲಕ ಕನ್ನಡ ಮಾರ್ಕೆಟ್ ಸೃಷ್ಟಿ ಮಾಡಿಕೊಳ್ಳಬೇಕು ಅನ್ನೋದೆಲ್ಲ ನನಗೆ ಇಲ್ಲ’ ಅಂತಾರೆ ರಶ್ಮಿಕಾ.
ಪುಷ್ಪ ಚಿತ್ರದ ಇನ್ನೊಂದು ವಿಶೇಷ ಅಂದರೆ, ಇದರಲ್ಲಿ ಇಬ್ಬರು ಕನ್ನಡಗರಿದ್ದಾರೆ. ಒಂದು ರಶ್ಮಿಕಾ, ಇನ್ನೊಂದು ಡಾಲಿ ಧನಂಜಯ್. ರಶ್ಮಿಕಾ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಡಾಲಿ ಜಾಲಿ ರೆಡ್ಡಿಯ ಪಾತ್ರದಲ್ಲಿದ್ದಾರೆ. ‘ಅಲ್ಲು ಅರ್ಜುನ್, ಸೆಟ್ನಲ್ಲಿ ನಮ್ಮಿಬ್ಬರನ್ನು ಕಂಡಾಗೆಲ್ಲ, ಕನ್ನಡದ ಮಕ್ಕಳು ಅಂತ ಕರೆಯುತ್ತಿದ್ದರು’ ಎಂದು ರಶ್ಮಿಕಾ ಖುಷಿಯಿಂದ ಹೇಳುತ್ತಾರೆ.
ರಾಜಮೌಳಿ
ಬಾಹುಬಲಿ ಖ್ಯಾತಿಯ ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರ ತೆರೆ ಕಾಣಲು ಸಿದ್ಧವಾಗಿರುವುದು ನಿಮಗೇ ಗೊತ್ತೇ ಇದೆ. ಬಹು ದೊಡ್ಡ ಯಶಸ್ಸಿನ ನಂತರ ರಾಜಮೌಳಿಯವರ ಬಗ್ಗೆ ಕುತೂಹಲಗಳು ಹೆಚ್ಚಿವೆ. ಅವರ ಚಿತ್ರ ಹೇಗೆಲ್ಲಾ ನಿರ್ದೇಶಿಸಬಹುದು, ತಂತ್ರಗಳನ್ನು ಬದಲಿಸಿಕೊಂಡಿದ್ದಾರೆಯೇ, ದೊಡ್ಡ ಬಜೆಟ್ ನೋಡಿ ಕತೆ ಮಾಡುತ್ತಾರೆಯೇ ಹೀಗೆ ಹಲವು ಕುತೂಹಲಗಳು ಇದ್ದೇ ಇವೆ.
ರಾಜಮೌಳಿ ಸಿನಿಮಾ ವಿಚಾರದಲ್ಲಿ ಖಚಿತತೆ ಇಲ್ಲದೇ ಕೈ ಹಾಕೋದಿಲ್ಲವಂತೆ. ಕಥೆ ಚಿತ್ರದ ಆತ್ಮ. ಎಮೋಷನ್ಸ್ ಅದರ ಹೃದಯ ಅಂತಾರೆ ಅವರು. ಭಾವನೆಗಳು ಇಲ್ಲದೇ ಸಿನಿಮಾ ಮಾಡೋದೇ ಇಲ್ಲ. ಭಾವವೇ ಸಿನಿಮಾ ನರನಾಡಿ. ಭಾವಗಳು ಕೇವಲ ಪಾತ್ರಗಳಿಗಷ್ಟೇ ಅಲ್ಲ, ಹಾಡಲ್ಲೂ ಇರಬೇಕು ಅನ್ನೋನು ನಾನು. ಹಾಗೇನೇ, ಪ್ರತಿ ಕತೆಗೂ ಒಂದೊಂದು ಗ್ರಾಮರ್ ಅಂತ ಇರುತ್ತೆ. ಅದೇ ಥರ ನವರಸ ಪಾತ್ರಗಳಿಗೂ ಗ್ರಾಮರ್ ಇರುತ್ತದೆ. ರಸಗಳು ಉತ್ಪತ್ತಿಯಾಗುವುದು ಪ್ಲೇಸ್ ಮೆಂಟ್ನಿಂದ. ಯಾವ ರಸದ ಪಾತ್ರ ನಂತರ, ಯಾವ ರಸದ ಪಾತ್ರ ಬರಬೇಕು ಅನ್ನೋ ಕಾಂಬಿನೇಷನ್ ಗೊತ್ತಿರಬೇಕು. ಬೇರೆ ಬೇರೆ ರಸ ಸೇರಿಸಿದರೆ ಸಿನಿಮಾದ ರುಚಿಸುವುದಿಲ್ಲ. ನಾನಂತೂ, ನಾಯಕಿ ಅಂದವಾಗಿದ್ದಾಳೆ ಅಂಥ ಯಾವತ್ತೂ ಪ್ರೇಮ ದೃಶ್ಯಗಳನ್ನು ತುರುಕುವುದಿಲ್ಲ. ನಾನು ಕತೆ ಮಾಡವಾಗಲೇ ಅದು ದೃಶ್ಯಗಳನ್ನು ಡಿಮ್ಯಾಂಡ್ ಮಾಡುತ್ತದೆ. ಆಗ ಅಲ್ಲಿ ನಾಯಕ, ನಾಯಕಿಯ ಪ್ರೀತಿ ಪ್ರೇಮಗಳು ದೃಶ್ಯಗಳನ್ನು ಜೋಡಿಸುತ್ತೇವೆ ಎಂದು ವಿವರವಾಗಿ ಸಿನಿಮಾ ತಯಾರಿಕೆಯ ಗುಟ್ಟನ್ನು ಬಿಚ್ಚಿಡುತ್ತಾರೆ ರಾಜಮೌಳಿ.
ಇದನ್ನೂ ಓದಿ: Brahmastra: ರಣಬೀರ್ ಕಪೂರ್, ಆಲಿಯಾ ಭಟ್ ಜೋಡಿಯ ಬ್ರಹ್ಮಾಸ್ತ್ರ ಮೋಷನ್ ಪೋಸ್ಟರ್ನಲ್ಲಿ ವಿಶೇಷವೇನಿದೆ?
I will Act in Kannada too, If I get good script
Discussion about this post