ದೆಹಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ತೈಲ ಬೆಲೆಯಲ್ಲಿ ಇಳಿಕೆ ಮಾಡಿದೆ. ಇದರ ಜೊತೆಗೆ ಅಡುಗೆ ಎಣ್ಣೆ ಬೆಲೆ ಕೂಡ ಇಳಿಕೆ ಮಾಡುವಂತ ನಿರ್ಧಾರ ಕೈಗೊಂಡಿದೆ ಆದರೂ ಹೊಟೇಲ್ ಮಾಲೀಕರ ಸಂಘವು ಊಟ-ತಿಂಡಿ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ತೈಲಗಳ ಮೇಲಿನ ವ್ಯಾಟ್ ತೆರಿಗೆಯನ್ನು ಇಳಿಕೆ ಮಾಡುವ ಮೂಲಕ, ಪೆಟ್ರೋಲ್-ಡಿಸೇಲ್ ಬೆಲೆ 100ರ ಒಳಗೆ ಇಳಿಸೋ ನಿರ್ಧಾರವನ್ನು ಕೈಗೊಂಡು ವಾಹನ ಸವಾರರಿಗೆ ಸಿಹಿಸುದ್ದಿ ನೀಡಲಾಗಿತ್ತು. ಆದ್ರೇ ಕಮರ್ಷಿಯಲ್ ಸಿಲಿಂಡರ್ ಬೆಲೆ ಮಾತ್ರ ಇಳಿಕೆ ಕಂಡಿಲ್ಲ. ಪ್ರತಿ ಸಿಲಿಂಡರ್ ಬೆಲೆ 2 ಸಾವಿರಕ್ಕೆ ಏರಿಕೆ ಕಂಡಿದೆ. ಇದರಿಂದ ಹೊಟೇಲ್ ಉದ್ಯಮ ದುಬಾರಿಯಾಗಿದೆ.
ಹೊಟೇಲ್ ಮಾಲೀಕರ ಸಂಘವು ನಾಳೆಯಿಂದ ಹೊಟೇಲ್ ಖಾದ್ಯಗಳ ಬೆಲೆ ಏರಿಕೆಯನ್ನು ಮಾಡೋದಕ್ಕೆ ಮುಂದಾಗಿದೆ. ಇದಕ್ಕೆ ಕಾರಣ ಒಂದೆಡೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾದ್ರೇ. ಮತ್ತೊಂದೆಡೆ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ. ಮಗದೊಂದೆಡೆ ಅಡುಗೆ ಎಣ್ಣೆ ದುಬಾರಿ. ಈ ಎಲ್ಲಾ ಕಾರಣದಿಂದಾಗಿ ನಾಳೆಯಿಂದ ಹೊಟೇಲ್ ತಿಂಡಿ-ಊಟದ ಬೆಲೆ ಏರಿಕೆಯಾಗಿ, ಗ್ರಾಹಕರ ಜೇಬಿಗೆ ಬರೆ ಬೀಳಲಿದೆ.
ಪ್ರತೀ ಆಹಾರ ಪದಾರ್ಥಗಳ ಮೇಲೂ 10 ರಿಂದ 15 ರೂ. ರಷ್ಟು ಹೆಚ್ಚಿಸಲು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.ಹೊಟೇಲ್ಗಳಲ್ಲಿ ಆಹಾರ ಪದಾರ್ಥ ಏರಿಕೆ ಮಾಡದೆ ಬೇರೆ ವಿಧಿ ಇಲ್ಲ, ನಷ್ಟದಲ್ಲಿ ಉದ್ಯಮ ನಡೆಸಲು ಸಾಧ್ಯವಿಲ್ಲ. ಮೊದಲೇ ಕೊರೊನಾ ಲಾಕ್ಡೌನ್ನಿಂದ ಹೊಟೇಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
Discussion about this post