ಚಿಕ್ಕಮಗಳೂರು : ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢವಾಗಿ ಕಟ್ಟುವ ಮೂಲಕ ಕನ್ನಡದ ಸಮಗ್ರ ಏಳಿಗೆಗೆ ಶ್ರಮಿಸುವ ದಿಟ್ಟ ಆಶಯ ಹೊಂದಿದ್ದು ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಜಯಶೀಲರನ್ನಾಗಿ ಮಾಡುವಂತೆ ಜಿಲ್ಲಾ ಕಸಾಪ ಅಧ್ಯಕ್ಷಕಾಂಕ್ಷಿ ಹಳೇಕೋಟೆ ಸುಂದರ ಬಂಗೇರಾ ಮನವಿ ಮಾಡಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡುವುದು, ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದು, ಸಾಹಿತ್ಯ, ಬರವಣಿಗೆ ಚಟುವಟಿಕೆಗಳಲ್ಲಿ ಯುವ ಸಾಹಿತಿಗಳಿಗೆ ಆದ್ಯತೆ ನೀಡುವುದರ ಜತೆಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢವಾಗಿ ಕಟ್ಟುವ ಮಹಾದಶಯ ಹೊಂದಿದ್ದು ಆ ನಿಟ್ಟಿನಲ್ಲಿ ಈ ಬಾರಿಯ ಕಸಾಪದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಆಜೀವ ಸದಸ್ಯರು ತಮ್ಮನ್ನು ಬೆಂಬಲಿಸುವAತೆ ಕೇಳಿಕೊಂಡರು.
ನವೆಂಬರ್ ೨೧ ರ ಭಾನುವಾರ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕಸಾಪ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ೮೬೦೦ ಮಂದಿ ಸದಸ್ಯರುಗಳಿದ್ದು ಚುನಾವಣೆಯಲ್ಲಿ ಬಹುಮತದ ಮೂಲಕ ತಮ್ಮನ್ನು ಜಯಶೀಲರನ್ನಾಗಿಸುವಂತೆ ವಿನಂತಿಕೊಂಡರು, ಕಸಾಪ ಅಧ್ಯಕ್ಷನಾಗಿ ಆಯ್ಕೆಗೊಂಡಲ್ಲಿ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕನ್ನಡ ಭವನ ನಿರ್ಮಾಣ, ಜಿಲ್ಲೆಯಲ್ಲಿ ಆಜೀವ ಸದಸ್ಯರ ಸಂಖ್ಯೆ ಹೆಚ್ಚಳ, ಯುವಬರಹಗಾರರು, ಹಿರಿಯರನ್ನು ಅತ್ಯಂತ ಆದರದಿಂದ ಗೌರವಿಸುವುದು, ಮುಂತಾದ ಕನ್ನಡ ಉಳಿವು, ಬೆಳವಣಿಗೆಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ಬಾರಿಯಲ್ಲೂ ಕಸಾಪ ಅಧ್ಯಕ್ಷ ಆಕಾಂಕ್ಷಿಯಾಗಿದ್ದೆ. ಆದರೆ ಈ ಬಾರಿ ಗೆದ್ದರು ಅಥವಾ ಸೋತರು ಇದು ನನ್ನ ಕೊನೆಯ ಸ್ಪರ್ಧೆ, ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೇರಿಸುವ ಮೂಲಕ ಹಲವು ಅಭಿವೃದ್ಧಿ ಹಲವು ದೂರದೃಷ್ಟಿ ಇಟ್ಟುಕೊಂಡಿದ್ದು ಸಾಕಾರಗೊಳಿಸಲು ಚುನಾವಣೆಯಲ್ಲಿ ಬೆಂಬಲಿಸುವAತೆ ಕೇಳಿಕೊಂಡರು.
Discussion about this post