ಚಿಕ್ಕಮಗಳೂರು: ಭೂ ಕಬಳಿಕೆ ಹುನ್ನಾರ ನಡೆಸಿ ರಾತ್ರೋ ರಾತ್ರಿ ಅನಧೀಕೃತವಾಗಿ ನಿರ್ಮಿಸಿದ್ದ ಶೆಡ್ಗಳನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿದೆ.
ಈ ಹಿಂದೆ ನಿವೇಶನ ರಹಿತರ ಸೋಗಿನಲ್ಲಿ ಕೆಲ ವ್ಯಕ್ತಿಗಳು ಭೂಕಬಳೀಕೆ ಹುನ್ನಾರ ನಡೆಸಿ ರಾತ್ರೋ ರಾತ್ರಿ ಫಲ್ಗುಣಿ ಗ್ರಾಮದ ಸರ್ವೆ ನಂಬರ್ ೨೪೯ ರ ಸರ್ಕಾರಿ ಜಾಗದಲ್ಲಿ ಶೆಡ್ ಹಾಕಲಾಗಿತ್ತು. ಸ್ಥಳಕ್ಕೆ ಧಾವಿಸಿದ ಕಂದಾಯ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ಮತ್ತು ಪೊಲೀಸ್ ಇಲಾಖೆ ಸಮ್ಮುಖದಲ್ಲಿ ಹಾಕಿದ್ದ ಎಲ್ಲಾ ಶೆಡ್ಗಳನ್ನು ತೆರವುಗೊಳಿಸಲಾಗಿದೆ.
ಈ ಜಮೀನಿನಲ್ಲಿ ಪ್ರಾಥಮಿಕ ಶಾಲೆ, ಆರೋಗ್ಯ ಕೇಂದ್ರ, ಮತ್ತು ದಾದಿಯರ ವಸತಿ ಗೃಹ ನಿರ್ಮಾಣ ಮಾಡುವ ಉದ್ದೇಶದಿಂದ ಜಾಗ ಮೀಸಲಿರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಉಮೇಶ್, ಸೋಮಶೇಖರ್, ಆನಂದ್, ನಮಿತಾ, ಕಂದಾಯ ಸಹಾಯಕ ಮತ್ತಿತರರು ಇದ್ದರು.
Discussion about this post