ಚಿಕ್ಕಮಗಳೂರು: ರಾಜ್ಯ ಸರ್ಕಾರ ಭೂ ಸುಧಾರಣ ಕಾಯ್ದೆಗೆ ಸುಗ್ರಿವಾeಯ ಮೂಲಕ ತಿದ್ದುಪಡಿ ತಂದಿದೆ. ಇದರ ಪರಿಣಾಮವಾಗಿ ಯಾರು ಬೇಕಾದರೆ ಕೃಷಿ ಭೂಮಿ ತೆಗೆದುಕೊಳ್ಳಲು ಅವಕಾಶ ಇದೆ. ಇದರಿಂದ ಭೂಮಿ ರಿಯಲ್ ಎಸ್ಟೇಟ್ ಪಾಲಾಗಲಿದೆ. ಈ ತಿದ್ದುಪಡಿಯಿಂದಾಗಿ ರೈತರು ಕೆಲವೇ ವರ್ಷಗಳಲ್ಲಿ ತಮ್ಮ ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ತಿಳಿಸಿದರು .
ಅವರು ಕುವೆಂಪು ಕಲಾಮಂದಿರದಲ್ಲಿ ಬುಧವಾರ ಜನಸಂಸ್ಕೃತಿ ವೇದಿಕೆ ವಿವಿಧ ಪಕ್ಷಗಳು-ರೈತ,ದಲಿತ,ಸಾಂಸ್ಕೃತಿಕ ಮತ್ತು ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ’ರೈತರನ್ನು ರಕ್ಷಿಸಿ,ಭಾರತ ಸಂವಿಧಾನ ಉಳಿಸಿ’ ವಿಚಾರ ಸಂಕಿರಣದಲ್ಲಿ ಮಾತನಾಡಿ ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಉದ್ಯೋಗ ನೀಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.
ನಮ್ಮಲ್ಲಿನ ದೋಷವನ್ನು ಮುಚ್ಚಿಟ್ಟುಕೊಂಡು ಸಂವಿಧಾನದ ಮೇಲೆ ಹಾಕುವುದು ಸರಿಯಲ್ಲ ಸಂವಿಧಾನ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ. ಮುಂದಿನಿಂದ ಸಂವಿಧಾನಕ್ಕೆ ನಮಸ್ಕಾರಮಾಡಿ ಹಿಂದಿನಿಂದ ಚೂರಿಹಾಕಲಾಗುತ್ತಿದೆ, ಸಂವಿಧಾನವನ್ನು ಓದಿ, ಅರ್ಥಮಾಡಿಕೊಂಡು ರಕ್ಷಿಸಿಕೊಳ್ಳಬೇಕಿದೆ. ಒಂದುವೇಳೆ ಸಂವಿಧಾನವನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವ ಧ್ವಂಸಗೊಂಡು ಅರಾಜಕತೆ ಸೃಷ್ಠಿಯಾಗುತ್ತಿದೆ. ಕೋಮುವಾದ ವಿಜೃಂಭಿಸುತ್ತದೆ. ಆಗ ನಾವುಗಳೆಲ್ಲ ಬಾಯಿಮುಚ್ಚಿಕೊಂಡು ಕೂರುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ದೇಶದಲ್ಲಿ ಇಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಆರ್ಥಿಕ, ಸಾಮಾಜಿಕ,ನೈತಿಕ, ಸಾಂಸ್ಕೃತಿವಾಗಿ ದಿವಾಳಿಯಾಗಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರಸ್ತೆಗೆ ಎಸೆಯುತ್ತಿದ್ದಾರೆ. ಕೃಷಿಬಿಕ್ಕಟ್ಟು ಪರಿಹಾರಕ್ಕೆ ಮೀಸಲಾತಿ ಪರಿಹಾರವಲ್ಲ, ೪೨ ಜಾತಿಗಳು ಮೀಸಲಾತಿಗೆ ಒತ್ತಾಯಿಸಿವೆ. ಜನರನ್ನು ಮೀಸಲಾತಿಯ ಭ್ರಮೆಯಲ್ಲಿಟ್ಟು ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಎಪಿಎಂಸಿ, ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದರೆ ಸಂಯುಕ್ತ ವ್ಯವಸ್ಥೆಗೆ ಮಾರಕವಾಗಲಿದೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಮಾರಕ. ರೈತರು ಕೂಲಿಕಾರರು, ಕೂಲಿಕಾರರು ಗುಲಾಮರಾಗುತ್ತಾರೆ, ನಿರುದ್ಯೋಗ ಜಾಸ್ತಿಯಾಗಿ ಆಹಾರ ಭದ್ರತೆಗೆ ಧಕ್ಕೆಯಾಗಲಿದೆ. ಇದರ ಜತೆಗೆ ಸಂವಿಧಾನಕ್ಕೆ ಪೆಟ್ಟು ಬೀಳಲಿದೆ. ಸರ್ಕಾರ, ಹೃದಯ ಕೊಟ್ಟು ರೈತರ ಮಾತು ಕೇಳಿದಾಗ ರೈತರ ಸಮಸ್ಯೆ ಪರಿಹಾರವಾಗುತ್ತದೆ. ಸರ್ಕಾರ ಈ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.
ಕೃಷಿ ಕಾಯ್ದೆ ಕೈಬಿಡಬೇಕೆಂದು ಶಾಂತಿಯಿಂದ, ಸಮಾಧಾನದಿಂದ ದೆಹಲಿಯ ಗಡಿಯಲ್ಲಿ ಹೋರಾಟ ಮಾಡುವ ರೈತರನ್ನು ವಿದೇಶಿಯ ಏಜೆಂಟರು, ನಕ್ಸಲೀಯರು, ಉಗ್ರಗಾಮಿಗಳು, ದೇಶದ್ರೋಹಿಗಳೆಂದು ಕರೆದರು. ಶಿಖ್ ಮತ್ತು ಹಿಂದೂಗಳ ನಡುವೆ ವೈಮನಸ್ಸು ಹುಟ್ಟು ಹಾಕುವ ಪ್ರಯತ್ನ ಮಾಡಿದರು. ಇಷ್ಟೆಲ್ಲಾ ಹೇಳಿದರೂ ಕೂಡ ರೈತರು ತಮ್ಮ ತಾಳ್ಮೆಯನ್ನು ಕಳೆದುಕೊಂಡಿಲ್ಲ ಎಂದರು.
ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕಿದೆ. ನ್ಯಾಯಾಂಗದ ಮೇಲೆ ಅಪಾರ ಗೌರವವಿದೆ. ರೈತರು ಹೆದ್ದಾರಿಬಂದ್ ಮಾಡುವುದು ಸರಿಯಲ್ಲವೆಂದು ಹೇಳಲಾಗುತ್ತಿದೆ ಆದರೆ ಸಮಸ್ಯೆ ನಿವಾರಣೆಗೆ ಪ್ರತಿಭಟನೆಗೆ ಮುಂದಾದಾಗ ಸರ್ಕಾರ ಹೆದ್ದಾರಿಯನ್ನೆ ಬಂದ್ಮಾಡಿದಾಗ ಸರ್ಕಾರದ ಕಿವಿಹಿಂಡಬೇಕಾಗಿತ್ತೆಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸಭಾಪತಿ ಡಾ.ಬಿ.ಎಲ್. ಶಂಕರ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್. ದೇವರಾಜ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಎ.ಎನ್. ಮಹೇಶ್, ಎಂ.ಎಲ್. ಮೂರ್ತಿ, ರವೀಶ್ ಕ್ಯಾತನಬೀಡು, ಗುರುಶಾಂತಪ್ಪ, ಬಿ. ಅಮ್ಜದ್, ಮರ್ಲೆ ಅಣ್ಣಯ್ಯ, ರೈತರ ಮುಖಂಡರು, ರೈತ ಸಂಘಟನೆ, ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: Singing: ಇಂದು ‘ಕನ್ನಡಕ್ಕಾಗಿ ನಾವು’ ಸಾಮೂಹಿಕ ಗಾಯನ
ಇದನ್ನೂ ಓದಿ: Polytechnic: ನಿರ್ವಹಣೆ ಕೊರತೆ ಕುಸಿಯುವ ಹಂತದಲ್ಲಿ ಪಾಲಿಟೆಕ್ನಿಕ್?
Farmer to lose land due to Land Reforms Act

























Discussion about this post