ಬೆಂಗಳೂರು: ವಿದೇಶದಿಂದ ಕರ್ನಾಟಕಕ್ಕೆ ಬಂದವರು ತಮ್ಮ ಮೊಬೈಲ್ಗಳನ್ನು ಸ್ವಿಚ್ಆಫ್ ಮಾಡಿಕೊಂಡರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
Complaint against Aaraga Gyanendra: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕೊಪ್ಪ ಠಾಣೆಯಲ್ಲಿ ದೂರು
ಓಮಿಕ್ರಾನ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ವಿದೇಶದಿಂದ ಬಂದವರು ನಮಗೆ ಏನೋ ಆಗಿಬಿಡುತ್ತದೆ ಎಂಬ ಭಯದಿಂದ ಮೊಬೈಲ್ಗಳನ್ನು ಸ್ವಿಚ್ಆಫ್ ಮಾಡಿಕೊಳ್ಳುವುದು ಸರಿಯಲ್ಲ. ಹಾಗೊಂದು ವೇಳೆ ಯಾರಾದರೂ ಸ್ವಿಚ್ ಆಫ್ ಮಾಡಿದರೆ ಕಾನೂನು ತರಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
actor Shivaram passes away: ಹಿರಿಯ ನಟ ಶಿವರಾಂ ನಿಧನ
ಆರೋಗ್ಯ ಸೌಧದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾದಿಂದ ಬಂದವರಲ್ಲಿ 10 ಜನ ಕಣ್ತಪ್ಪಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಅವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು. ಯಾವುದೇ ಒಬ್ಬ ಜವಾಬ್ದಾರಿಯುತ ನಾಗರಿಕ ಹೀಗೆ ಮಾಡುವುದು ಸರಿಯಲ್ಲ. ವಿದೇಶದಿಂದ ಬಂದವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
Road accident: ಲಾರಿ – ಟ್ಯಾಂಕರ್ ನಡುವೆ ರಸ್ತೆ ಅಪಘಾತ- ಸ್ಥಳದಲ್ಲಿ ನಾಲ್ವರ ಸಾವು
ನಿಮಗೆ ಅಗತ್ಯವಿದ್ದರೆ ಮಾತ್ರ ಚಿಕಿತ್ಸೆ ನೀಡುತ್ತೇವೆ. ಅನಗತ್ಯವಾಗಿ ಮೊಬೈಲ್ಗಳನ್ನು ಏಕೆ ಸ್ವಿಚ್ಆಫ್ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಒಂದು ಮತ್ತು ಎರಡನೆ ಅಲೆ ಸಂದರ್ಭದಲ್ಲೇ ಕೆಲವರು ಈ ರೀತಿ ಮೊಬೈಲ್ಗಳನ್ನು ಸ್ವಿಚ್ಆಫ್ ಮಾಡಿಕೊಂಡಾಗಲೇ ನಾವು ಪತ್ತೆ ಮಾಡಿದ್ದೆವು. ಈಗ ಸ್ವಿಚ್ಆಫ್ ಮಾಡಿಕೊಂಡ ತಕ್ಷಣ ಇವರನ್ನು ಬಿಟ್ಟುಬಿಡುತ್ತೇವೆಂದು ಅರ್ಥವಲ್ಲ. ನೀವು ಎಲ್ಲೇ ಇದ್ದರೂ ಪತ್ತೆಹಚ್ಚುತ್ತೇವೆ ಎಂದರು.
Road accident: ಲಾರಿ – ಟ್ಯಾಂಕರ್ ನಡುವೆ ರಸ್ತೆ ಅಪಘಾತ- ಸ್ಥಳದಲ್ಲಿ ನಾಲ್ವರ ಸಾವು
Legal action if mobile switched off
Discussion about this post