ಚಿಕ್ಕಮಗಳೂರು ನಗರಸಭೆಗೆ ೧೧೩ ವರ್ಷದ ಇತಿಹಾಸವಿದ್ದು ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿದೆ, ಪ್ರಸ್ತುತ ೩೫ ವಾರ್ಡ್ಗಳಿದ್ದು ೧,೦೦,೦೦೦ ಕ್ಕೂ ಅಧಿಕ ಮತದಾರರಿದ್ದು, ಜನತಂತ್ರದ ವ್ಯವಸ್ಥೆಯಲ್ಲಿ ಪ್ರತಿ ೫ ವರ್ಷಕ್ಕೊಮ್ಮೆ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಬರಬೇಕಾಗಿದ್ದು, ಕಾನೂನು, ತಾಂತ್ರಿಕ ಕಾರಣ ಹಾಗೂ ಸರಕಾರದ ನಿರ್ಲಕ್ಷದಿಂದ ೭.೫ ವರ್ಷದ ನಂತರ ಚುನಾವಣೆ ನಡೆದಿದ್ದು ಈ ಚುನಾವಣೆಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಐ, ಬಿಎಸ್ಪಿ ಹಾಗೂ ಆಮ್ಆದ್ಮಿ ಪಕ್ಷಗಳಿಂದ ಪಕ್ಷೇತರರು ಸೇರಿದಂತೆ ೧೪೬ ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣೆ ಬಿರುಸಾಗಿ ನಡೆದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.
ಪ್ರಮುಖರಿಂದ ಪ್ರಚಾರ:
ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಆಡಳಿತ ಪಕ್ಷ ಬಿಜೆಪಿ ಸಚಿವರು, ಶಾಸಕರು ಸೇರಿದಂತೆ ಶಾಸಕ ಸಿ.ಟಿ.ರವಿ. ಅಬ್ಬರದ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಅಳಿವು ಉಳಿವಿನ ಹೋರಾಟವಾಸಿಕೊಂಡಿದ್ದು ಮಾಜಿ ಸಚಿವರು ಹಾಗೂ ಶಾಸಕರು ಸೇರಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಪ್ರಚಾರಕ್ಕೆ ಬಂದಿದ್ದು, ಜೆಡಿಎಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ೧೨ ವಾರ್ಡ್ಗಳಲ್ಲಿ ಏಕಾಂಗಿ ಹೋರಾಟ ನಡೆಸಿದ್ದಾರೆ.
ಆಡಳಿತ ವಿರೋಧಿ ಅಲೆ ಗೋಚರ:
ಕನ್ನಡನಾಡಿ ಮತಗಟ್ಟೆ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಆಡಳಿತ ವಿರೋಧಿ ಅಲೆ ಗೋಚರವಾಗಿದ್ದು ೪ನೇ ಬಾರಿ ಶಾಸಕರಾಗಿರುವ ಸಿ.ಟಿ.ರವಿ ನಗರದ ಅಭಿವೃದ್ಧಿಯಲ್ಲಿ ಹಿಂದೇಟು ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿರುವುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ ಸತತ ೧೫ ವರ್ಷಗಳಿಂದ ನಗರಸಭೆ ಬಿಜೆಪಿ ವಶದಲ್ಲಿದ್ದು ಜನರ ನಿರೀಕ್ಷೆ ತಲುಪುವಲ್ಲಿ ಪಕ್ಷ ವಿಫಲವಾಗಿದ್ದು ಫಲಿತಾಂಶದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಏನಾಗಬಹುದು ನಗರಸಭೆ ಫಲಿತಾಂಶ ? : ಆತಂತ್ರ ನಗರಸಭೆ ಸಾಧ್ಯತೆ
ನಗರದ ೩೫ ವಾರ್ಡ್ಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ೩೩ ವಾರ್ಡಗಳಲ್ಲಿ ಸ್ಪರ್ಧಿಸಿದರೆ, ಜೆಡಿಎಸ್ ೧೨ ವಾರ್ಡ್ಗಳಲ್ಲಿ ಸ್ಪರ್ಧೆ ಮಾಡಿದೆ ಉಳಿದಂತೆ ಬಿಎಸ್ಪಿ. ಸಿಪಿಐ, ಆಮ್ಆದ್ಮಿ ಸೇರಿದಂತೆ ೧೪೬ ಮಂದಿ ಕಣದಲ್ಲಿದ್ದರು
ಚುನಾವಣಾ ಫಲಿತಾಂಶ ಗಮನಿಸಿದಾಗ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ೧೫ ಸ್ಥಾನಗಳ ಆಸುಪಾಸಿನಲ್ಲಿದ್ದು ಗದ್ದುಗೆಗಾಗಿ ಜೆಡಿಎಸ್ ಹಾಗೂ ಪಕ್ಷೇತರ ಸೇರಿದಂತೆ ಇತರರ ಮೂರೆ ಹೂಗುವ ಸಾಧ್ಯತೆ ಇದೆ. ಪತ್ರಿಕೆ ೩೫ ವಾಡ್ ಸಮೀಕ್ಷೆ ಮಾಡಿದಾಗ ದೂರೆತ ಚಿತ್ರಣ ಈ ರೀತಿ ಇದೆ.
ವಾರ್ಡ್ ನಂಬರ್ ೧: ಗೃಹಮಂಡಳಿ ಬಡಾವಣೆ
ಗೃಹಮಂಡಳಿ ಬಡಾವಣೆಯಾಗಿರುವ ಈ ವಾರ್ಡ್ನಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಹಾಲಿ ಸದಸ್ಯೆ ಬಿಜೆಪಿಯ ಕವಿತಾಶೇಖರ್, ಮಾಜಿ ನಗರಸಭಾ ಸದಸ್ಯ ಚಂದ್ರಪ್ಪ ಅವರ ಪತ್ನಿ ಗಿರೀಜಾ ಚಂದ್ರಪ್ಪ ಜೆಡಿಎಸ್ನಿಂದ ಕಾಂಗ್ರೆಸ್ನಿಂದ ದಿವ್ಯಕೀರ್ತಿ ಸ್ಪರ್ಧೆ ಮಾಡಿದ್ದು. ಕವಿತಾಶೇಖರ್ ವಾರ್ಡ್ನ್ನು ಕಡಗಣಸಿದ್ದಾರೆ ಎಂದಿದ್ದು, ಚಂದ್ರಪ್ಪನವರ ಹೋರಾಟದ ತೀವ್ರತೆ ಕಾಣಲಿಲ್ಲ ಚಂದ್ರಪ್ಪ ಹಾಗೂ ಕವಿತಾ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ದಿವ್ಯಾ ಲಿಂಗಾಯಿತ ಸಮುದಾಯಕ್ಕೆ ಸೇರಿದ್ದಾರೆ, ಒಕ್ಕಲಿಗ ಸಮುದಾಯದ ಮತಗಳ ಹಂಚಿಕೆಯಾಗಲಿದ್ದು, ಕಾಂಗ್ರೆಸ್ ನ ದಿವ್ಯಾಗೆ ಲಾಭವಾಗುವ ಲಕ್ಷಣಗಳು ಗೋಚರಿಸುತ್ತಿದೆ.
ವಾರ್ಡ್ ನಂಬರ್ ೨: ಗೃಹಮಂಡಳಿ, ನರಿಗುಡ್ಡನಹಳ್ಳಿ
ಎರಡನೇ ವಾರ್ಡಿನಲ್ಲಿ ಬಿಜೆಪಿಯ ಯಶೋಧ ರಾಮು ಹಾಗೂ ಕಾಂಗ್ರೆಸ್ನಿಂದ ಇಂದಿರಾ ನಡುವೆ ನೇರ ಸ್ಪರ್ಧೆಇದ್ದು ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಶ್ರೀಮತಿ ರವಿ ಇದ್ದು, ರವಿ ತೆಗೆದುಕೊಳ್ಳುವ ಮತ ನಿರ್ಣಾಯಕವಾಗಲಿದೆ. ರವಿ ಗಣನೀಯ ಮತಗಳನ್ನು ಪಡೆದಲ್ಲಿ ಕಾಂಗ್ರೆಸ್ ಇಂದಿರಾಗೆ ಗೆಲುವಿಗೆ ಅಡ್ಡಿಆಗಲಿದೆ.
ವಾರ್ಡ್ ನಂಬರ್ ೩: ನರಿಗುಡ್ಡನಹಳ್ಳಿ, ಸಿಡಿಎಬಡಾವಣೆ
ಇಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರಸ್ಪರ್ಧೆ ಇದ್ದು ತೀವ್ರ ಹಣಾಹಣಿ ಇದೆ, ಬಿಜೆಪಿಯ ಅರುಣ್ಕುಮಾರ್, ಕಾಂಗ್ರೆಸ್ ಓಂಕಾರೇಶ್ ಯಾರೆ ಗೆದ್ದರು ಕೂದಲೆಳೆಯ ಅಂತರದಲ್ಲಿ ಗೆಲುವು.
ವಾರ್ಡ್ ನಂಬರ್ ೪: ಹೀರೆಮಗಳೂರು,
ಕಾಂಗ್ರೆಸ್ ನ ಆಶಾ ಸುರೇಶ್ ಹಾಗೂ ಬಿಜೆಪಿ ಅಭ್ಯರ್ಥಿ ವಿದ್ಯಾಶ್ರೀಬಸವರಾಜ್ ನಡುವೆ ಸಮ ಬಲದ ಹೋರಾಟ ವಿದೆ.
ವಾರ್ಡ್ ನಂಬರ್ ೫: ಸುಗ್ಗಿಕಲ್, ಬೇಲೂರು ರಸ್ತೆ
ಬಿಜೆಪಿ ಅಭ್ಯರ್ಥಿಯಾಗಿ ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಹಾಗೂ ಪಕ್ಷೇತರರಾಗಿ ಯುವಕ ವಿನಯ್ ಸ್ಪರ್ಧೆಗಿಳಿದಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದೆ, ಮಧುಕುಮಾರ್ ರಾಜ್ ಅರಸ್ ಸೋಲಿಸಲೇಬೇಕೆಂದು ಬಿಜೆಪಿಯ ಒಂದು ಬಣ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದು ಅಭ್ಯರ್ಥಿ ಗೆಲುವಿಗೆ ವರದಾನವಾಗಲಿದೆ.
ವಾರ್ಡ್ ನಂಬರ್ ೬: ಕುವೆಂಪು ನಗರ
ಈ ವಾರ್ಡಿನಲ್ಲಿ ಬಿಜೆಪಿಯಿಂದ ಸುಜಾತಾ, ಕಾಂಗ್ರೆಸ್ನಿಂದ ರೇವತಿ ಹಾಗೂ ಪಕ್ಷೇತರವಾಗಿ ಶ್ರೀಮತಿ ಭರತ್ ಸ್ಪರ್ಧೆಯಲ್ಲಿದ್ದು, ಸ್ಪರ್ದೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ನಡುವಿದ್ದು, ಬಿಜೆಪಿ ಮುಂದಿರುವಂತೆ ಕಾಣುತ್ತಿದೆ.
ವಾರ್ಡ್ ನಂಬರ್ ೭: ದೋಣಿಖಣ
ಕಾನೂನಿನ ಮೇಲಾಟದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ವಾರ್ಡ್ಗೆ ನಿಗದಿಯಾಗಿದ್ದು ಬಿಜೆಪಿಯಿಂದ ಕುಮಾರ್ ಹಾಗೂ ಕಾಂಗ್ರೆಸ್ನ ಕೃಷ್ಣ ನಾಯಕ್ ನಡುವೆ ಸ್ಪರ್ಧೆ ಇದ್ದು, ಇಲ್ಲಿ ಬಿಜೆಪಿ ಗೆಲುವಿನ ನಗೆ ಬೀರುವ ಸಾಧ್ಯತೆದೆ.
ವಾರ್ಡ್ ನಂಬರ್ ೮: ಜಯನಗರ, ಆದರ್ಶ ನಗರ.
ಬಿಜೆಪಿಯಿಂದ ಮಾಜಿ ನಗರ ಸಭೆ ಅಧ್ಯಕ್ಷ ದೇವರಾಜಶೆಟ್ಟಿ ಕಾಂಗ್ರೆಸ್ನಿಂದ ಮಾಜಿ ನಗರಸಭೆ ಸದಸ್ಯ ಶ್ರೀಧರ್ಉರಾಳ್ ಹಾಗೂ ಜೆಡಿಎಸ್ನಿಂದ ಎ.ಸಿ.ಕುಮಾರ ಹಾಗೂ ಪಕ್ಷೇತರಾಗಿ ವಿನಯ್ ಸ್ಪರ್ಧೆಯಲ್ಲಿದ್ದು ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ಸಮಬಲದ ಸ್ಪರ್ಧೆ ಏರ್ಪಟ್ಟಿದೆ ಬಿಜೆಪಿಯಲ್ಲಿ ಆಂತರಿಕ ಗೊಂದಲಗಳಿದ್ದು, ಸ್ಥಳೀಯ ಪಕ್ಷದ ಮುಖಂಡರಾದ ಪುಷ್ಪಾರಾಜೇಂದ್ರ ಟಿಕೇಟ್ ಆಕಾಂಕ್ಷಿಯಾಗಿದ್ದು ಸ್ಪರ್ಧೆಗೆ ಅವಕಾಶ ನೀಡದಿರುವು ಬೇಸರ ತಂದಿದ್ದು, ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲಿಲ್ಲ ಕಾಂಗ್ರೆಸ್ನ ಶ್ರೀಧರ್ಉರಾಳ್ಗೆ ಉತ್ತಮ ಕೆಲಸಗಾರ ಎಂಬ ಹೆಸರಿದ್ದು ಜೆಡಿಎಸ್ನ ಕುಮಾರ್ಗೆ ವಿಧಾನ ಪರಿಷತ್ ಸದಸ್ಯ ಎಸ್. ಎಲ್.ಭೋಜೇಗೌಡರ ಬೆಂಬಲವಿದ್ದು ಚುನಾವಣೆಯನ್ನು ಪ್ರತಿಷ್ಠೆಯಾಗಿಸಿಕೊಂಡು ಪ್ರಚಾರ ಮಾಡಿದ್ದು, ತ್ರಿಕೋನ ಸ್ಪರ್ಧೆಯಲ್ಲಿ ಫಲಿತಾಂಶ ಕಡಿಮೆ ಅಂತರದಲ್ಲಿ ಬರುವ ನೀರಿಕ್ಷಯಿದೆ.
ವಾರ್ಡ್ ನಂಬರ್ ೯: ಗವನಹಳ್ಳಿ.
ಕಾಂಗ್ರೆಸ್ನ ಪರಮೇಶ್ ರಾಜ್ ಅರಸ್ ಹಾಗೂ ಬಿಜೆಪಿಯ ಮಂಜುನಾಥ್ ನಡುವೆ ಸ್ಪರ್ಧೆ ಇದ್ದು, ಬಿಜೆಪಿಯ ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲವಿದ್ದು, ಇದು ಕಾಂಗ್ರೆಸ್ನ ಪರಮೇಶ ಗೆಲುವಿಗೆ ಸಹಕಾರಿಯಾಗಲಿದೆ.
ವಾರ್ಡ್ ನಂಬರ್ ೧೦: ರಾಮೇಶ್ವರನಗರ, ಉಂಡೆದಾಸರಹಳ್ಳಿ, ಬೆಲ್ಟರೋಡ್
ಈ ವಾರ್ಡ್ನಲ್ಲಿ ಬಿಜೆಪಿಯ ರೂಪಾಕುಮಾರ್ ಹಾಗೂ ಕಾಂಗ್ರೆಸ್ನ ಹೇಮಾವತಿಸದಾಶಿವ ಇಬ್ಬರು ನೇಕಾರ ಸಮುದಾಯಕ್ಕೆ ಸೇರಿದ್ದು ಜೆಡಿಎಸ್ ಅಭ್ಯರ್ಥಿ ಲೆಕ್ಕಕ್ಕಿಲ್ಲ ಬಿಜೆಪಿಯಲ್ಲಿ ಅಭ್ಯರ್ಥಿ ರೂಪಕುಮಾರ್ ಬಗ್ಗೆ ಅಸಮಾಧಾನವಿದ್ದು ಇಲ್ಲಿ ಸ್ಥಳೀಯ ಪಕ್ಷದ ಸಂಘಟನೆಯಲ್ಲಿ ಶೋಭಾ ರಾಜೇಶ್ ಹಾಗೂ ಮಹೇಶ್ ಶೆಟ್ಟಿ ಸಕ್ರೀಯವಾಗಿದ್ದು, ಅವರಿಗೆ ಟಕೇಟ್ ನೀಡದಿರುವುದು ಗೊಂದಲಕ್ಕೆ ಕಾರಣವಾಗಿದೆ. ವಾರ್ಡ್ನಲ್ಲಿ ಕಾಂಗ್ರಸ್ನ ಪ್ರಮುಖ ಮುಖಂಡರಾದ ಗಾಯತ್ರಿಶಾಂತೇಗೌಡ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಜಿ.ಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ವಿಜಯ್ಕುಮಾರ್, ಡಿಸಿಸಿ ಕಾರ್ಯದರ್ಶಿ ಶಿವಾನಂದಸ್ವಾಮಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ಕಾಂಗ್ರೆಸ್ಗೆ ಗೆಲುವಿನ ಲಕ್ಷಣಗಳು ಗೋಚರವಾಗುತ್ತಿವೆ.
ವಾರ್ಡ್ ನಂಬರ್ ೧೧: ಶಂಕರಪುರ
ಇಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಪಿ.ನಿಶ್ಚಿತ ನಗರಸಭೆ ಮಾಜಿ ಸದಸ್ಯ ದೇವಿಪ್ರಸಾದ್ ನಾದನಿ ಯಾಗಿದ್ದು ಬಿಜೆಪಿ ಅಭ್ಯರ್ಥಿ ಕೋಟೆಕೃಷ್ಣರವರ ಪತ್ನಿ ಉಮಾದೇವಿ ಕಣದಲ್ಲಿದ್ದು, ತೀವ್ರಸ್ಪರ್ಧೆಇದ್ದು ವಾರ್ಡ್ನಲ್ಲಿ ಹಣದ ಹೊಳೆಯನ್ನೇ ಹರಿಸಲಾಗಿದೆ ಇಲ್ಲಿ ಸಮಬಲದ ಹೋರಾಟವಿದ್ದು, ಕಾಂಗ್ರೆಸ್ ಅಭ್ಯರ್ಥಿ ಹಾಕದೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿದೆ.
ವಾರ್ಡ್ ನಂಬರ್ ೧೨: ಟಿಪ್ಪುನಗರ
ಕಾಂಗ್ರೆಸ್ ನಿಂದ ಜಾವಿದ್ ಹಾಗೂ ಬಿಜೆಪಿಯಿಂದ ಸಿ.ಪಿ.ಅರುಣ್ ಕಣದಲ್ಲಿದ್ದು ಮುಸ್ಲಿಮರ ಮತದಾರರು ಹೆಚ್ಚಿರುವ ವಾರ್ಡ್ನಲ್ಲಿ ಕಾಂಗ್ರೆಸ್ನ ಜಾವಿದ್ ಗೆಲುವಿಗೆ ಸಹಕಾರಿಯಾಗಲಿದೆ.
ವಾರ್ಡ್ ನಂಬರ್ ೧೩: ಸ್ವೀಪರ್ ಕಾಲೋನಿ
ಮಾಜಿ ನಗರಸಭಾ ಸದಸ್ಯ ಬಿಜೆಪಿಯ ನರಸಿಂಹ ಹಾಗೂ ಕಾಂಗ್ರೆಸ್ನ ಯುವ ಮುಖಂಡ ಲಾಕೇಶ್ ನಡುವೆ ಸ್ಪರ್ಧೆ ಇದ್ದು ಬಿಜೆಪಿ ಮುಂದಿರುವಂತೆ ಗೋಚರಿಸುತ್ತಿದೆ.
ವಾರ್ಡ್ ನಂಬರ್ ೧೪: ಐ.ಜಿ. ರಸ್ತೆ. ದರ್ಜಿಬೀದಿ
ಮಾಜಿ ನಗರಸಭಾ ಸದಸ್ಯ ಬಿಜೆಪಿಯ ಅನುಮಧುಕರ್ ಹಾಗೂ ಕಾಂಗ್ರೆಸ್ನ ಸೆಲ್ವಿ ನಡುವೆ ಸ್ಪರ್ಧೆ ಇದ್ದು ಕಳೆದ ಬಾರಿ ಕಾಂಗ್ರೆಸ್ನಿಂದ ನಗರಸಭಾ ಸದಸ್ಯರಾಗಿದ್ದ ಅನು ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ನಲ್ಲಿ ಪಕ್ಷದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಕಾರ್ತಿಕ್ ಆಭ್ಯರ್ಥಿ ಅವರ ತಾಯಿ ಯಾಗಿದ್ದು, ಕಾರ್ತಿಕ್ ಜನಾನುರಾಗಿ ಯುವಕರಾಗಿದ್ದಾರೆ, ಅನು ಮಧುಕರ್ ವಾರ್ಡ್ ಪ್ರಮುಖ ದರ್ಜಿ ಸಮುದಾಯಕ್ಕೆ ಸೇರಿದವರಾಗಿದ್ದು, ಬಿಜೆಪಿ ತುಸು ಮುಂದಿರುವಂತೆ ಕಾಣಿಸುತ್ತಿದೆ.
ವಾರ್ಡ್ ನಂಬರ್ ೧೫: ಕ್ರೀಶ್ಚಿಯನ್ ಕಾಲೋನಿ.
ಮೂರು ಬಾರಿ ನಗರಸಭಾ ಸದಸ್ಯರಾಗಿರುವ ದಿನೇಶ್ ಪತ್ನಿ ಶೀಲಾ ಪಕ್ಷೇತರವಾಗಿ ಬಿಜೆಪಿಯಿಂದ ಅಂಕಿತಾ ಹಾಗೂ ಕಾಂಗ್ರೆಸ್ನಿಂದ ವಕೀಲೆ ನಸೀಮ್ತಾಜ್ ಸ್ಪರ್ಧೆಯಲ್ಲಿದ್ದು ಸ್ಪರ್ಧೆ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ಇದೆ, ಕಾಂಗ್ರೆಸ್ ಅಭ್ಯರ್ಥಿಯ ತಂದೆ ಶಬ್ಬೀರ್ ಹಿಂದೆ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದು ಅನುಕಂಪದ ಅಲೆಯ ಕಂಡು ಬಂದಿದೆ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕ್ಷೇತ್ರದಲ್ಲಿ ಸಮಬಲದ ಹೋರಾಟವಿದೆ.
ವಾರ್ಡ್ ನಂಬರ್ ೧೬: ಉಪ್ಪಳ್ಳಿ
ಕಾಂಗ್ರೆಸ್ನ ಖಲಂದರ್ ಬಿಜೆಪಿಯ ಕಬೀರ್ ಪಕ್ಷೇತರವಾಗಿ ಕಾಂಗ್ರೆಸ್ ಬಂಡಾಯ ನೂರ್ ಮಹ್ಮದ್ ಬದ್ರು ಹಾಗು ನಂದೀಶ್ ಕಣದಲ್ಲಿದ್ದು, ಹಾಲಿ ಸದಸ್ಯ ನೂರ್ ಮೊಹಮ್ಮದ್ ಬದ್ರು ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದು, ಕಾಂಗ್ರೆಸ್ನ ಖಲಂದರ್ಗೆ ತೊಂದರೆಯಾಗುವಂತೆ ಕಂಡುಬಂದರೂ ಖಲಂದರ್ ಸಮೀಕ್ಷೆಯಲ್ಲಿ ಮುಂದಿದ್ದಾರೆ.
ವಾರ್ಡ್ ನಂಬರ್ ೧೭: ಶಾಂತಿನಗರ
ಕಾಂಗ್ರೆಸ್ನಿಂದ ಮಾಜಿ ನಗರಸಭಾ ಸದಸ್ಯೆ ಸುರೇಖಾ ಸಂಪತ್ ರಾಜ್ ಬಿಜೆಪಿಯ ಸಗಾಯ್ ದಾಸ್ ಹಾಗೂ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ನ ಬಂಡಾಯ ಮುನೀರ್ ಸ್ಪರ್ಧೆಯಲ್ಲಿದ್ದು. ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ಸ್ಪರ್ದೆ ಪಟ್ಟಿದ್ದು, ಗೆಲುವಿನ ಅಂತರ ಕಡಿಮೆ ಇರಲಿದೆ.
ವಾರ್ಡ್ ನಂಬರ್ ೧೮: ಇಂದಿರಾನಗರ, ಕಲ್ದೂಡ್ಡಿ
ಬಿಜೆಪಿಯಿಂದ ಮಣಿಕಂಠ ಹಾಗೂ ಕಾಂಗ್ರೆಸ್ನಿಂದ ಆಶಾಲತಾ ಸ್ಪದೆsಯಲ್ಲಿದ್ದು ಸಮೀಕ್ಷೆಯಲ್ಲಿ ಆಶಾಲತಾಕುಮಾರ್ ಗೆಲುವು ನಿರಾಯಾಸವಾದಂತೆ ಕಂಡುಬಂದಿದೆ.
ವಾರ್ಡ್ ನಂಬರ್ ೧೯: ಪೆನ್ಶನ್ಮಹಲ್ಲಾ, ಅಯ್ಯಪ್ಪನಗರ
ಕಾಂಗ್ರೆಸ್ನಿಂದ ಶಾದಾಬ್ ಅಲಂಖಾನ್, ಬಿಜೆಪಿಯಿಂದ ನವೀನ್ ಕುಮಾರ್ ಪಕ್ಷೇತರವಾಗಿ ಅಕ್ಮಲ್ ಸಹೋದರ ಹಾಗೂ ಸಲೀಂ ಸ್ಪರ್ಧೆಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿಗೆ ಹೋರಾಟ ನಡೆಸಿದ್ದು ತುಸು ಮಂದಿರುವಂತಿದೆ.
ವಾರ್ಡ್ ನಂಬರ್ ೨೦: ಮಾರ್ಕೆಟ್ರಸ್ತೆ, ಶಾಂತಿನಗರ.
ವಾರ್ಡ್ನಲ್ಲಿ ಕಾಂಗ್ರೆಸ್ನಿಂದ ತಬಸುಮ್ ಖಾನ್ ಬಿಜೆಪಿಯಿಂದ ರೂಹಿಅಸ್ಮಾ ಕಣದಲ್ಲಿದ್ದು, ಕಾಂಗ್ರೆಸ್ ಗೆಲುವಿನ ಗೆರೆ ದಾಟುವಂತಿದೆ.
ವಾರ್ಡ್ ನಂಬರ್ ೨೧: ಇಂದಿರಾನಗರ. ಕೊಲ್ಲಾಪುರದಮ್ಮ ಬೀದಿ
ಇಲ್ಲಿ ಕಾಂಗ್ರೆಸ್ಸಿನ ನಗರಸಭಾ ಮಾಜಿ ಸದಸ್ಯ ದಿ.ಷರೀಫ್ ಅವರ ಪುತ್ರ ಮಹಿದ್ದೀನ್ ಶರೀಫ್ ಹಾಗೂ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ನ ಉಚ್ಚಾಟತ ನಾಯಕ ಅಕ್ಮಲ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಸಮಬಲದ ಹೋರಾಟ ಕಾಣಬಹುದು.
ವಾರ್ಡ್ ನಂಬರ್ ೨೨: ಶಾಂತಿನಗರ, ಮಾರ್ಕೆಟ್ ರಸ್ತೆ
ಕಾಂಗ್ರೆಸ್ನಿಂದ ಶ್ರೀಮತಿ ಸೆಲ್ಮಾ ಸಿಪಿಐನಿಂದ ಶ್ರೀಮತಿ ರಘು ಸ್ಪರ್ಧಿಸಿದ್ದು ಕಾಂಗ್ರೆಸ್ಗೆ ಗೆಲುವಿನ ಲಕ್ಷಣಗಳಿವೆ ಇಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ
ವಾರ್ಡ್ ನಂಬರ್ ೨೩: ಸಂತೆ ಮೈದಾನ, ದಂಟರಮಕ್ಕಿ.
ಕಾಂಗ್ರೆಸ್ನಿಂದ ಯಶೋಧ ಮಲ್ಲೇಶ್ಸ್ವಾಮಿ ಪಕ್ಷೇತರ ಅಭ್ಯರ್ಥಿ ಶ್ರೀಮತಿ ಲೋಕೇಶ್ ಹಾಗೂ ಶ್ರೀಮತಿಭದ್ರ ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿ ಹಾಕಿಲ್ಲ. ಕಾಂಗ್ರೆಸ್ನ ಯಶೋಧ ಹಾಗೂ ಪಕ್ಷೇತರ ಅಭ್ಯರ್ಥಿ ಶ್ರೀಮತಿ ಭದ್ರಾ ನಡುವೆ ತೀವ್ರಸ್ಪರ್ಧೆ ಇದೆ.
ವಾರ್ಡ್ ನಂಬರ್ ೨೪: ಜ್ಯೋತಿನಗರ, ಕುಪ್ಪೇನಹಳ್ಳಿ, ದಂಟರಮಕ್ಕಿ
ಕಾಂಗ್ರೆಸ್ನಿಂದ ಗುರುಮಲ್ಲಪ್ಪ ಬಿಜೆಪಿಯಿಂದ ಸತೀಶ್ಕುಮಾರ್ ಹಾಗೂ ಪಕ್ಷೇತರವಾಗಿ ಚಂದ್ರಮೌಳಿ ಸ್ಪರ್ಧೆಯಲಿದ್ದು, ಬಿಜೆಪಿಗೆ ಇತ್ತೀಚಿಗೆ ಸೇರ್ಪಡೆಯಾದ ನಗರಸಭಾ ಮಾಜಿ ಸದಸ್ಯ ಡಿ.ಕೆ.ನಟರಾಜ್ ಬಲವಾದರೆ ಕಾಂಗ್ರೆಸ್ಸಿನ ಅಭ್ಯರ್ಥಿ ಪರ ವಕೀಲ ಡಿ.ಸಿ.ಪುಟ್ಟೇಗೌಡ, ಡಿ.ಎಸ್. ಚಂದ್ರೇಗೌಡ ಸೇರಿದಂತೆ ಹಲವು ಮುಖಂಡರಿದ್ದು,ಕಾಂಗ್ರೆಸ್ ಗೆಲ್ಲುವ ವಾತಾವರಣ ವಿದೆ.
ವಾರ್ಡ್ ನಂಬರ್ ೨೫: ವಿಜಯಪುರ.
ಕಾಂಗ್ರೆಸ್ನಿಂದ ನಗರಸಭೆ ಹಿರಿಯ ಸದಸ್ಯ ಸಿ.ಪಿ.ಲಕ್ಷ್ಮಣ್ ಬಿಜೆಪಿಯಿಂದ ಧನಂಜಯಗೌಡ ಪಕ್ಷೇತರವಾಗಿ ಅಲಿಮುಲ್ಲಾ ಶರೀಫ್ ಮತ್ತು ದೀಪು ಸ್ವರ್ಧೆಯಲ್ಲಿದ್ದು ಕಾಂಗ್ರೆಸ್ನ ಸಿ.ಪಿ. ಲಕ್ಷ್ಮಣ್ ಬಗ್ಗೆ ವಾರ್ಡ್ನಲ್ಲಿ ಉತ್ತಮ ಅಭಿಪ್ರಾಯವಿದ್ದು ವಿಜಯಮಾಲೆ ಧರಿಸಬಹುದು.
ವಾರ್ಡ್ ನಂಬರ್ ೨೬: ಬಸವನಹಳ್ಳಿ, ಕುಂಬಾರಬೀದಿ.
ಬಿಜೆಪಿಯ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್ ಹಾಗೂ ಕಾಂಗ್ರೆಸ್ನ ಶ್ರೀನಿವಾಸ್ ನಡುವೆ ತೀವ್ರ ಸ್ಪರ್ಧೆ ಇದ್ದು, ಸಮಬಲದ ಸ್ಪರ್ಧೆ ನಡುವೆ ಯಾರೇ ಗೆದ್ದರೂ ಕಡಿಮೆ ಅಂತರ ಎಂಬಂತಾಗಿದೆ.
ವಾರ್ಡ್ ನಂಬರ್ ೨೭: ಅರವಿಂದ ನಗರ, ನಾರಾಯಣಪುರ.
ಬಿಜೆಪಿಯಿಂದ ನಗರಸಭಾ ಮಾಜಿ ಸದಸ್ಯ ಟಿ.ರಾಜಶೇಖರ್ ಕಾಂಗ್ರೆಸ್ನಿಂದ ತನುಜ್ ಕುಮಾರ್ ನಾಯ್ಡು ಹಾಗೂ ಸಿಪಿಐನಿಂದ ಮಾಜಿ ನಗರಸಭಾ ಸದಸ್ಯ ಮಧು ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಇಲ್ಲಿ ಬಿಜೆಪಿ ಮುಂದಿರುವಂತೆ ಕಾಣುತ್ತಿದೆ.
ವಾರ್ಡ್ ನಂಬರ್ ೨೮: ರಾಘವೇಂದ್ರ ಸ್ವಾಮಿ ಮಠದ ರಸ್ತೆ.
ಬಿಜೆಪಿಯಿಂದ ರಾಜು ಕಾಂಗ್ರೆಸ್ನಿಂದ ವಾಣಿ ಪಕ್ಷೇತರವಾಗಿ ರಘು ಹಾಗೂ ವಿನಯ್ ಸ್ಪರ್ಧಿಸಿದ್ದು ಬಿಜೆಪಿ ಗೆಲುವು ನಿಶ್ಚಿತವಾದಂತಿದೆ.
ವಾರ್ಡ್ ನಂಬರ್: ೨೯ ನೆಹೆರುನಗರ.
ಕಾಂಗ್ರೆಸ್ಸಿನಿಂದ ಜಮೀರ್ಅಹ್ಮದ್ ಹಾಗೂ ಬಿಜೆಪಿಯಿಂದ ಅಮೃತೇಶ್ ನಡುವೆ ನೇರ ಸ್ಪರ್ಧೆ ಇದ್ದು ಸಮಬಲದ ಹೋರಾಟವಿದೆ.
ವಾರ್ಡ್ ನಂಬರ್ ೩೦: ನೂರಾನಿ ಮಸೀದಿ.
ಕಾಂಗ್ರೆಸ್ನಿಂದ ಗೌಸಿಯಾಖಾನಂ ಹಾಗೂ ಪಕ್ಷೇತರ ಅಭ್ಯರ್ಥಿ ಲೀಲಾ ನಡುವೆ ನೇರ ಸ್ಪರ್ಧೆ ಇದ್ದು, ಪಕ್ಷೇತರ ಅಭ್ಯರ್ಥಿ ಲೀಲಾ ಉತ್ತಮ ಕೆಲಸಗಾರತಿ ಎಂಬ ಹೆಸರಿದ್ದು, ಮುಸ್ಲಿಮರ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಸಮಬಲದ ಹೋರಾಟ ನಡೆಯುತ್ತಿದ್ದು, ಅಚ್ಚರಿ ಫಲಿತಾಂಶ ನಿರೀಕ್ಷೆಯಲ್ಲಿದೆ.
ವಾರ್ಡ್ ನಂಬರ್ ೩೧: ಅಧಿಭೂತಪ್ಪ ರಸ್ತೆ.
ಇಲ್ಲಿ ಬಿಜೆಪಿಯ ಕಾಯಿರವಿ ಪತ್ನಿ ದೀಪಾ ಕಾಂಗ್ರೆಸ್ ನಿಂದ ಸಿಲ್ವೆಸ್ಸ್ಟಾರ್ ಪತ್ನಿ ಫಿಲೋಮಿನಾ ಹಾಗೂ ಜೆಡಿಎಸ್ನಿಂದ ಶ್ರೀಮತಿಪ್ರೇಮ ನಡುವೆ ಸ್ಪರ್ಧೆ ಇದ್ದು, ಬಿಜೆಪಿ ಮುಂದಿರುವಂತಿದೆ.
ವಾರ್ಡ್ ನಂಬರ್ ೩೨: ಗೌರಿಕಾಲುವೆ
ಕಾಂಗ್ರೆಸ್ನ ಮಾಜಿ ನಗರಸಭಾ ಸದಸ್ಯ ರೂಬಿನ್ ಮೋಸಸ್ ಪತ್ನಿ ಸಹನಾ ರುಬಿನ್ ಬಿಜೆಪಿಯಿಂದ ಭವ್ಯ ಮಂಜುನಾಥ್ ನಡುವೆ ನೇರ ಹಣಾಹಣಿ ಇದ್ದು ಇಲ್ಲಿ ಸಮಬಲದ ಹೋರಾಟವಿದೆ.
ವಾರ್ಡ್ ನಂಬರ್ ೩೩: ರಾಮನಹಳ್ಳಿ, ರತ್ನಗಿರಿ ಬೋರೆ.
ಕಾಂಗ್ರೆಸ್ನಿಂದ ಲಕ್ಷ್ಮಣ್ ಬಿಜೆಪಿಯಿಂದ ನರಸಿಂಹ ಸ್ಪರ್ಧಿಸಿದ್ದು, ಲಕ್ಷ್ಮಣ ಈ ಭಾಗದಲ್ಲಿ ಚಿರಪರಿಚಿತರಗಿದ್ದು ತೀವ್ರ ಹೋರಾಟದ ನಡುವೆ ಗೆಲುವಿನ ಅಂತರ ಕಡಿಮೆಯಾಗಲಿದೆ.
ವಾರ್ಡ್ ನಂಬರ್ ೩೪: ಕೆಂಪನಹಳ್ಳಿ, ಚಂದ್ರನಗರ.
ಕಾಂಗ್ರೆಸ್ನ ಕೆ.ಆರ್.ಮಂಜುಳಾ ಹಾಗೂ ಬಿಜೆಪಿಯ ಸವಿತಾ ನಡುವೆ ಸ್ಪರ್ಧೆ ಇದ್ದು, ಕಾಂಗ್ರೆಸ್ ನ ಕೆ.ಆರ್.ಮಂಜುಳಾ ಗೆಲುವು ನಿರಾಯಾಸ ಎಂಬುವಂತಿದೆ.
ವಾರ್ಡ್ ನಂಬರ್ ೩೫: ಕೆಂಪನಹಳ್ಳಿ
ಬಿಜೆಪಿಯ ಲಲಿತಾಬಾಯಿ ಹಾಗೂ ಕಾಂಗ್ರೆಸ್ನ ಪಾರ್ವತಿ ನಡುವೆ ಸಮಬಲದ ಹೋರಾಟವಿದ್ದು ಅಚ್ಚರಿ ಫಲಿತಾಂಶ ನಿರೀಕ್ಷೆಯಲ್ಲಿದೆ.
Municipal Election Survey
Discussion about this post