ಚಿಕ್ಕಮಗಳೂರು: ಪಿಆರ್ಟಿ ಪ್ರತಿಷ್ಠಾನದಿಂದ ನಗರದ ಶಾಂತಿನಿಕೇತನ ಚಿತ್ರಕಲಾಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮದ ಎರಡನೆ ದಿನವಾದ ರಾಜ್ಯದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಆನ್ಲೈನ್ ಚಿತ್ರಕಲಾ ಸ್ಪರ್ಧೆ ನಡೆಯಿತು.
ಇದನ್ನೂ ಓದಿ: President.: ಮೂರು ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ.
ಮರದ ಕೆತ್ತನೆಯಲ್ಲಿ ಪ್ರಸಿದ್ದರಾಗಿರುವ ಬೆಂಗಳೂರಿನ ಕಲಾವಿದ ರಾಮಮೂರ್ತಿ ಅವರು ನಾಟ್ಯರಾಣಿಯ ಕೆತ್ತನೆಯ ಪ್ರಾತ್ಯಕ್ಷತೆಯನ್ನು ವಿದ್ಯಾರ್ಥಿಗಳಿಗೆ ಆನ್ಲೈನ್ ನಲ್ಲೇ ಪ್ರಚುರಪಡಿಸಿದರು. ಮಂಗಳೂರಿನ ಕಲಾವಿದ ಸಯದ್ ಆಸಿಫ್ ಅಲಿ ಅವರು ನಿಸರ್ಗದ ತೈಲವರ್ಣ ಚಿತ್ರ ಬಿಡಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರೆ, ಚಿತ್ರ ಕಲಾವಿದರಾದ ಲಿಂಗರಾಜು, ಎಂ.ಎಸ್.ನಾಗರಾಜು ಅವರು ನಿಸರ್ಗ ಚಿತ್ರ ಪ್ರಾತ್ಯಕ್ಷತೆ ಪ್ರದರ್ಶಿಸಿದರು.
ಇದನ್ನೂ ಓದಿ: Theatre-Mall: ಒಮಿಕ್ರಾನ್ ರೂಪಾಂತರಿ: ಥೇಟರ್ ಮಾಲ್ಗಳಿಗೆ ಆತಂಕ ಸದ್ಯಕ್ಕಿಲ್ಲ
ಪ್ರೌಢಶಾಲೆ ೯ ನೇ ತರಗತಿ ಚಿತ್ರಕಲಾ ವಿಭಾಗದಲ್ಲಿ ತೊಗರಿಹಂಕಲ್ನ ಜಿ.ಆದರ್ಶ, ಕಡೂರಿನ ಕಾಮನಕೆರೆ ಬಿಂದು, ಮೂಡಿಗೆರೆ ಜುಬೇದ ಅವರು ಕ್ರಮವಾಗಿ ಚಿನ್ನ, ಬೆಳ್ಳಿ ,ಕಂಚಿನ ಪದಕ ಪಡೆದರು. ೧೦ ನೇ ತರಗತಿ ವಿಭಾಗದಲ್ಲಿ ಮಾಚಗೊಂಡನಹಳ್ಳಿಯ ಮಾನಸ, ಮೈಲಿಮನೆ ಹಿತಶ್ರೀ, ತರೀಕೆರೆಯ ಮಹಮದ್ ಕ್ರಮವಾಗಿ ಮೂರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: Lovers who committed suicide : ಮದುವೆ ಮಾಡದ ಪೋಷಕರು: ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
ಕಲಾ ಕಾಲೇಜು ವಿಭಾಗದಲ್ಲಿ ಬೆಂಗಳೂರಿನ ವಿವಿ ರಂಗಣ್ಣ ಪ್ರಥಮ, ಮೈಸೂರಿನ ದಿಲೀಪ್ ದ್ವಿತೀಯ ಹಾಗೂ ಚಿಕ್ಕಮಗಳೂರಿನ ಐಶ್ವರ್ಯ ತೃತೀಯ ಸ್ಥಾನ ಪಡೆದು ಪಿಆರ್ಟಿ ಕಲಾ ಪ್ರಶಸ್ತಿಗೆ ಭಾಜನರಾದರು. ಆನ್ಲೈನ್ನಲ್ಲಿ ನಡೆದ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ೫೫೦ ಚಿತ್ರಗಳು, ಕಾಲೇಜು ವಿಭಾಗದಲ್ಲಿ ೧೫೦ ಚಿತ್ರಗಳು ಬಂದಿದ್ದವು. ಎಲ್ಲ ಗುಂಪಿನ ೧೦ ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಇದನ್ನೂ ಓದಿ: e Paper – December 1, 2021
Online Painting Competition
Discussion about this post