ಮೂಡಿಗೆರೆ : ನಮಗೆ ನಾವು ಏನೆಲ್ಲ ಬೇಕು ಎಂದು ಬಯಸುತ್ತೇವೆಯೋ ಮತ್ತು ನಾವು ಏನೆಲ್ಲ ಪಡೆದುಕೊಂಡಿದ್ದೇವೆಯೋ ಅದರಲ್ಲಿ ಒಂದು ಬಾಗವನ್ನು ನೊಂದವರಿಗೆ ನೀಡಿದಾಗ ಮಾತ್ರ ಈ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ಹೇಳಿದರು
ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಪಟ್ಟಾಭಿಷೇಕೋತ್ಸವ,ಜೀವ-ಭಾವ ಕಾರ್ಯಕ್ರಮದ ಅಂಗವಾಗಿ ಶ್ರೀಮಾತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಸ್ವಾರ್ಥಕ್ಕಾಗಿ ನಾವು ಜೀವಿಸಬಾರದು ನಮ್ಮ ಈ ಬದುಕು ಸಮಾಜಮುಖಿಯಾಗಬೇಕು ಆಗ ನಮ್ಮ ಜೀವನ ದನ್ಯವಾಗುತ್ತದೆ.ನಮ್ಮ ಮನೆಯಲ್ಲಿ ಉತ್ತಮವಾದ ಸಂಸ್ಕಾರ,ಒಳ್ಳೆಯ ವಿಚಾರಗಳು,ಪೂಜೆ ಪುರಸ್ಕಾರಗಳು ದೇವರ ದ್ಯಾನಗಳನ್ನು ಮಾಡಿದಾಗ ಮಾತ್ರ ಆ ಮನೆಯಲ್ಲಿ ಹುಟ್ಟುವ ಮಕ್ಕಳು ಆರೋಗ್ಯವಂತರಾಗಿ ಹುಟ್ಟುತ್ತವೆ ಎಂದರು.
ದೇಶದುದ್ದಕ್ಕೂ ಪ್ರವಾಸ ಮಾಡಿದ ಸಂದರ್ಭದಲ್ಲಿ ಮನುಷ್ಯ ಜೀವಿಯು ಅನುಭವಿಸುತ್ತಿರುವ ಕಷ್ಟಗಳ ಸನ್ನಿವೇಶಗಳನ್ನು ನೋಡಿ ಕಷ್ಟದ ಜೀವಿಗಳಿಗೆ ಭಾವನೆಗಳನ್ನು ತುಂಬುವಂತ ಕಾರ್ಯಕ್ರಮವನ್ನು ಮಾಡುವ ಯೊಚನೆಯ ಫಲವಾಗಿ ಪರರ ಹಿತವಾಗಿ ಸ್ಪಂದಿಸುವ ಸಂಸ್ಥೆಗಳನ್ನು ಗುರುತಿಸಿ ಅದಕ್ಕೆ ಜೀವ-ಭಾವ ಎನ್ನುವ ಕಾರ್ಯಕ್ರಮದಡಿಯಲ್ಲಿ ಪ್ರಶಸ್ತಿ ಪ್ರದಾನ ಮತ್ತು ಒಂದು ಲಕ್ಷ ರೂ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರತೀ ವರ್ಷ ಈ ಕಾರ್ಯಕ್ರಮದ ಜೊತೆಯಲ್ಲಿ ಸರ್ವಧರ್ಮ ಸಮ್ಮೇಳನವೂ ಕೂಡ ಅದ್ದೂರಿಯಾಗಿ ನಡೆಯುತ್ತಿತ್ತು.ಆದರೆ ಕರೋನ ಸೋಂಕು ಹಿನ್ನಲೆಯನ್ನು ಕಳೆದ ಎರಡು ವರ್ಷಗಳಿಂದ ಸರಳವಾಗಿ ಯವುದು ಅಗತ್ಯವಿದೆಯೋ ಅದಕ್ಕೆ ಹೆಚ್ಚಿನ ಒತ್ತು ನೀಡಿ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಹಿರಿಯರು ಸಾಮಾಜಿಕವಾಗಿ,ಧಾರ್ಮಿಕವಾಗಿ,ಶೈಕ್ಷಣಿಕವಾಗಿ ಹಾಕಿದ ಭದ್ರ ಅಡಿಪಾಯದ ನೆಲೆಯಲ್ಲಿ ಈ ಕ್ಷೇತ್ರ ವಿಸ್ತಾರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀ ಕೃಷ್ಣ ಟ್ರಸ್ಟ್ ಬೆಂಗಳೂರು ಇದರ ಆಡಳಿತ ವ್ಯವಸ್ಥಾಪಕ ಸದಾಶಿವಪ್ಪ ಮಾತನಾಡಿ ೨೫ ವರ್ಷಗಳಿಂದ ನಮ್ಮ ಸಂಸ್ಥೆಯು ವಿಕಲಚೇತರ ಶಾಲೆಯನ್ನು ಆರಂಬಿಸಿ ಉಚಿತ ಶಿಕ್ಷಣ ವಸತಿಯನ್ನು ನೀಡುತ್ತಿದ್ದೇವೆ.ಪ್ರಸ್ತುತ ನಮ್ಮ ಶಾಲೆಯಲ್ಲಿ ೫೦ ವಿಕಲಚೇತನ ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆಈಗಾಗಲೇ ನಮ್ಮ ಶಾಲೆಯು ಸರ್ಕಾರದ ಮೆಚ್ಚುಗೆಯನ್ನು ಪಡೆದು ನಮ್ಮ ಶಾಲಾ ಶಿಕ್ಷಕಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದರು.
ನಮ್ಮಲ್ಲಿರುವ ಮಕ್ಕಳನ್ನು ಸಾಮಾಣ್ಯ ಜನರ ರೀತಿ ಜೀವನವನ್ನು ಮಾಡಲು ಕಲಿಸಲಾಗುತ್ತಿದೆ.ಇಷ್ಟು ದಿನ ಕೇವಲ ಶಿಕ್ಷಣ ನೀಡಿ ಮಕ್ಕಳಿಗೆ ೧೮ ವರ್ಷ ತುಂಬಿದಾಗ ಪೋಷಕರ ಜೊತೆ ಕಳುಹಿಸುತ್ತಿದ್ದೆವು.ಆದರೆ ಆ ಸಂದರ್ಭದಲ್ಲಿ ನಮ್ಮ ಜವಬ್ದಾರಿಯನ್ನು ಪೂರ್ತಿಗೊಳಿಸಲಿಲ್ಲ ಅನ್ನುವ ನೋವು ಇರುತ್ತಿತ್ತು.ಹಾಗಾಗಿ ಇನ್ನು ಮುಂದೆ ಮಕ್ಕಳಿಗೆ ವಿವಿದ ರೀತಿ ಡಿಪ್ಲೋಮ ಕೋರ್ಸುಗಳ ತರಭೇತಿಯನ್ನು ನೀಡಿ ನಂತರ ಸರ್ಕಾರಿ ಉದ್ಯೋಗವನ್ನು ತೆಗೆದುಕೊಟ್ಟು ಅವರ ಜೀವನವನ್ನು ರೂಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದ ಮುಂಚಿತವಾಗಿ ಧರ್ಮಕರ್ತ ಡಾ|ಜಿ.ಬೀಮೇಶ್ವರ ಜೋಷಿಯವರ ಪಟ್ಟಾಭಿಷೇಕವಾಗಿ ೩೧ ವರ್ಷ ತುಂಬಿದ ದಿನದ ಅಂಗವಾಗಿ ದೇವಿಗೆ ಅಭಿಷೇಕ,ಪೂಜೆ,ನವಗ್ರಹ ಹೋಮಗಳು ನಡೆಯಿತು. ಈ ಸಂದರ್ಭದಲ್ಲಿ ಹೊರನಾಡು ದೇವಸ್ಥಾನದ ಟ್ರಸ್ಟಿಗಳಾದ ರಾಜಲಕ್ಷ್ಮೀ ಜೋಷಿ,ರಾಮನಾರಾಯಣ ಜೋಷಿ ಇದ್ದರು.

























Discussion about this post