ಚಿಕ್ಕಮಗಳೂರು: ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪ್ರಾಮಾಣಿಕ ಸೇವೆ ಸ್ಮರಿಸುವಂತದ್ದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಬಣ್ಣಿಸಿದರು.
ಇದನ್ನೂ ಓದಿ: Omikron panic: ಒಮಿಕ್ರಾನ್ ಭೀತಿ: ತಜ್ಞರ ಸಲಹೆಯಂತೆ ಮುಂದುವರಿಯುವೆ ಎಂದ ಸಿಎಂ ಬೊಮ್ಮಾಯಿ
ಅವರು ನಗರದ ರಾಮನಹಳ್ಳಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ತಾತ್ಕಲಿಕ ಪೊಲೀಸ್ ತರಬೇತಿ ಶಾಲೆಯ ೧೪ ನೇ ತಂಡದ ೫ನೇ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದನ್ನೂ ಓದಿ: Indian Army: ಭಾರತೀಯ ಸೇನೆಯಲ್ಲಿ ಖಾಲಿಯಿದೆ 1 ಲಕ್ಷಕ್ಕೂ ಅಧಿಕ ಹುದ್ದೆಗಳು
ದೇಶದಲ್ಲಿ ಪೊಲೀಸ್ ವ್ಯವಸ್ಥೆ ಧೈರ್ಯ, ತ್ಯಾಗ, ಸಮರ್ಪಣಾ ಮನೋಭಾವದ ಸಂಕೇತ. ಅದು ಸಮರ್ಥವಾಗಿದ್ದಾಗ ಮಾತ್ರ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಸಾಧ್ಯವಾಗಲಿದೆ. ಸಮಾಜದಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜನಹಿತಕ್ಕಾಗಿ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಬೇಕು, ಸಮಸ್ಯೆಗಳನ್ನು ಆಲಿಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ತಿಳಿಸಿದರು.
ಇದನ್ನೂ ಓದಿ: Dowry: ವರದಕ್ಷಿಣೆ ಅನಿಷ್ಟ ಕೊನೆಗೊಳಿಸಲು ಕಾನೂನುಗಳಿದ್ದರೂ ಕೂಡ, ಜನರು ತಮ್ಮೊಳಗೆ ಬದಲಾಗಬೇಕು: ಸುಪ್ರೀಂಕೋರ್ಟ್
ಸಮಾಜ ಸೇವೆ ಮಾಡಬೇಕು ಎಂಬ ಹಂಬಲದೊಂದಿಗೆ ಹಲವಾರು ಮಂದಿ ಪೊಲೀಸ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು ಭವಿಷ್ಯದಲ್ಲಿ ಹಲವಾರು ಯೋಜನೆಗಳನ್ನು ಇಟ್ಟುಕೊಳ್ಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಯಾಗಿ ಮುಂದೆ ಮಾಡಬೇಕಾದ ಕಾರ್ಯ, ಗುರಿ, ರೂಪುರೇಷೆ, ಬಗ್ಗೆ ದಿನಚರಿಯನ್ನು ಬರೆದಿಟ್ಟುಕೊಂಡು ಹಲವು ವರ್ಷದ ಬಳಿಕ ಪುನರ್ ಪರಿಶೀಲಿಸಿದಾಗ ನಮ್ಮ ಸಾಧನೆ ಕಾರ್ಯಗಳ ಅರಿವು ಗೊತ್ತಾಗಲಿದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಎರಡು ಡೋಸ್ ಕೊರೋನಾ ಲಸಿಕೆ ತೆಗೆದುಕೊಂಡಿದ್ದರೆ ಒಮಿಕ್ರಾನ್ ತೀವ್ರತೆ ಕಡಿಮೆ
ಪುರುಷ ಪೊಲೀಸರಿಗೆ ಹೋಲಿಕೆ ಮಾಡಿದ್ದಲ್ಲಿ ಮಹಿಳಾ ಪೊಲೀಸರಿಗೆ ಹಲವು ವಿಭಿನ್ನ ಸವಾಲುಗಳಿವೆ, ಕುಟುಂಬ, ವೃತ್ತಿ ಸೇರಿದಂತೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಮಾನಸಿಕ ಸಿದ್ದತೆ ಅವಶ್ಯಕ, ವಾಕ್ಚಾತುರ್ಯ, ಹಿರಿಯ ಅಧಿಕಾರಿಗಳೊಂದಿಗೆ ಸಲಹೆ, ಮಾರ್ಗದರ್ಶನದ ಮೂಲಕ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವ ಉತ್ತಮ ಅಧಿಕಾರಿಯಾಗಿ ರೂಪುಗೊಳ್ಳಬೇಕು ಈ ಮೂಲಕ ಕುಟುಂಬ, ಹಾಗೂ ಇಲಾಖೆಗೆ ಗೌರವ ತರುವ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ: ದೇಶದಲ್ಲಿ ಒಮಿಕ್ರಾನ್ ಭೀತಿ: ಷೇರುಪೇಟೆಯಲ್ಲಿ ಸೆನ್ಸೆಕ್ಸ್ 949 ಅಂಕ ಕುಸಿತ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಸೂಕ್ಷ್ಮತೆ ಮತ್ತು ಕಾಳಜಿಯಿಂದ ಕೆಲಸ ನಿರ್ವಹಿಸಬೇಕು, ನಾವು ಮಾಡುವ ಕೆಲಸ ಗಾಜಿನ ಮನೆಯಂತೆ ಪಾರದರ್ಶಕವಾಗಿರಬೇಕು ಎಂದರು.
ಇದನ್ನೂ ಓದಿ: ದೇಶದಲ್ಲಿ ಒಮಿಕ್ರಾನ್ ಭೀತಿ: ಷೇರುಪೇಟೆಯಲ್ಲಿ ಸೆನ್ಸೆಕ್ಸ್ 949 ಅಂಕ ಕುಸಿತ
ಸಾಮಾನ್ಯವಾಗಿ ನೊಂದವರು, ಅನೇಕ ಸಮಸ್ಯೆಗೆ ಸಿಲುಕಿದವರು, ಬೇರೆಡೆ ನ್ಯಾಯ ಸಿಗದಿದ್ದಾಗ ಠಾಣೆಗಳಿಗೆ ಬರುತ್ತಾರೆ ಆಗ ಅವರೊಂದಿಗೆ ಪ್ರೀತಿ, ಗೌರವದಿಂದ ವರ್ತಿಸಿ ಸಮಸ್ಯೆಗಳನ್ನು ಆಲಿಸಬೇಕು, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳು ಅತ್ಯಂತ ಪರಿಣಾಮಕಾರಿಯಾಗಿದ್ದು ಎಲ್ಲವನ್ನು ಅವಲೋಕನ ಮಾಡಲಾಗುತ್ತದೆ ಉತ್ತಮವಾಗಿ ಕೆಲಸ ಮಾಡಿದಾಗ ಪ್ರಶಂಸೆಯು ಸಿಗುತ್ತದೆ ಲೋಪಗಳಾದಲ್ಲಿ ಟೀಕೆಯನ್ನು ಎದುರಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.
ವೃತ್ತಿ ಜೀನವದಲ್ಲಿ ಪೊಲೀಸ್ ಕವಾಯತು ಅತ್ಯಂತ ಮಹತ್ವದ್ದು, ಅದು ಶಿಸ್ತು, ಸಮನ್ವಯ, ಸಮರ್ಪಣೆಯನ್ನು ಕಲಿಸುತ್ತದೆ. ೮ ತಿಂಗಳ ಕಾಲ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾಯ್ದೆ, ಕಾನೂನು ಸೇರಿದಂತೆ ಎಲ್ಲಾ ವಿಧವಾದ ಶಿಕ್ಷಣ ಪಡೆದಿದ್ದು ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ಸೇವೆ ಮಾಡುವಂತೆ ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧಿಕ್ಷಕಿ ಹಾಗೂ ತರಬೇತಿ ಶಾಲೆಯ ಪ್ರಾಂಶುಪಾಲರಾದ ಶೃತಿ ಮಹಿಳಾ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿ ಪಕ್ಷಿ ನೋಟವನ್ನು ವಿವರಿಸಿದರು ೧೦೦ ಪ್ರಶಿಕ್ಷಣಾರ್ಧಿಗಳು ೨೦೨೧ ರ ಏಪ್ರಿಲ್ ೧೫ ರಿಂದ ಡಿಸೆಂಬರ್ ತಿಂಗಳವರೆಗೂ ಹೊರಾಂಗಣ, ಒಳಾಂಗಣ ಅಧ್ಯಯನ ಸೇರಿದಂತೆ ಪ್ರವಾಸ, ಬಂದೂಕು ತರಬೇತಿ, ಕಾಯ್ದೆ, ಕಾನೂನು, ಶಿಸ್ತು ಮುಂತಾದ ಕೌಶಲಗಳನ್ನು ಬುನಾದಿ ತರಬೇತಿ ವೇಳೆ ಕಲಿತಿದ್ದು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಇದೇ ವೇಳೆ ಮಹಿಳಾ ಪೊಲೀಸರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ನಿರ್ಗಮಿತ ಮಹಿಳಾ ಪೊಲೀಸ್ ತುಕಡಿಗಳಿಂದ ಆಕರ್ಷಕ ನಿರ್ಗಮನ ಪಥ ಸಂಚಲನ ನಡೆಯಿತು. ಇಲಾಖೆಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಹಿಳಾ ಪೊಲೀಸರಿಗೆ ಬಹುಮಾನ ವಿತರಿಸಲಾಯಿತು, ಪೊಲೀಸ್ ವರಿಷ್ಠಾಧಿಕಾರಿಗಳು ಪ್ರೋತ್ಸಾಹಕವಾಗಿ ನಗದು ಬಹುಮಾನ ನೀಡಿದರು.
ಈ ಸಂದರ್ಭದಲ್ಲಿ ಭದ್ರಾ ವನ್ಯ ಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್, ಸರ್ಕಾರಿ ಅಭಿಯೋಜಕ ರಾಘವೇಂದ್ರ ರಾಯ್ಕರ್, ವಕೀಲರ ಸಂಘದ ಅಧ್ಯಕ್ಷ ವಿ.ಟಿ ಥಾಮಸ್, ಬೆಳೆಗಾರ ನರೇಂದ್ರ ಪೈ, ರಾಕೇಶ್ ಕಾಬ್ಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
Discussion about this post