ಉಡುಪಿ: ಮಲ್ಪೆ ಕಡಲ ಕಿನಾರೆಯಿಂದ ರಾಜ್ಯದ ಕರಾವಳಿ ತೀರವಾದ ಉಡುಪಿಯಿಂದ ಹೊರಟ ಮೀನುಗಾರರಿಗೆ ಬಂಪರ್ ಹೊಡೆದಿದೆ. ಉಡುಪಿಯ ಮಲ್ಪೆ ಬಂದರಿನಿಂದ ಹೊರಟ ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದೆ.
ಇದನ್ನೂ ಓದಿ: Bikshuki donates to Anjaneya Temple: ಆಂಜನೇಯ ದೇವಾಲಯಕ್ಕೆ ದೇಣಿಗೆ ಕೊಟ್ಟ ಬಿಕ್ಷುಕಿ
ಮೀನುಗಾರರು ಹಿಡಿದ ಆ ಒಂದು ಮೀನು ಒಂದು ಲಕ್ಷದ ಎಂಭತ್ತು ಸಾವಿರಕ್ಕೆ ಮಾರಾಟವಾಗಿದೆ.ಮೀನುಗಾರಿಕೆಗೆ ತೆರಳಿದ್ದ ಶಾನ್ ರಾಜ್ ತೊಟ್ಟಂ ಎಂಬುವವರ ಬಲರಾಮ್ ಎಂಬ ಹೆಸರಿನ ಬೋಟ್ ಗೆ ಅದೃಷ್ಟದ ಲಕ್ಷ್ಮೀ ಸಿಕ್ಕಿದೆ. ಮೀನುಗಾರರ ಬಲೆಗೆ 18 ಕೆಜಿ ತೂಕದ ಅಪರೂಪದ ಗೋಳಿ ಮೀನು ಸಿಕ್ಕಿದೆ. ಈ ಮೀನು ಬರೋಬ್ಬರಿ ರೂ. 1.81 ಲಕ್ಷಕ್ಕೆ ಮಾರಾಟವಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಈ ಮೀನು ಹರಾಜು ಪ್ರಕ್ರಿಯೆ ನಡೆದಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಸಂಪುಟ ಸಭೆ: 2022ರ ಮಾರ್ಚ್ ವರೆಗೆ ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ವಿಸ್ತರಣೆ
ಈ ಮೀನು ಪ್ರತಿ ಕೆಜಿಗೆ ರೂ. 9060ರಂತೆ ಮಾರಾಟವಾಗಿದೆ. ಈ ಗೋಳಿ ಅಪರೂಪದ ಮೀನಾಗಿದ್ದು, ಅತೀ ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಮಧುಮೇಹ, ಅಸ್ತಮಾದಂತಹ ಖಾಯಿಲೆಗಳ ಔಷಧಿಗೆ ಈ ಮೀನನ್ನು ಬಳಸಲಾಗುತ್ತದೆ. ಇದು ಕಲ್ಲು ಬಂಡಿಗಳ ಅಡಿಯಲ್ಲಿ ವಾಸವಾಗುತ್ತದೆ. ಇದು ಮೀನುಗಾರರ ಬಲೆಗೆ ಬೀಳುವುದು ಬಲು ಅಪರೂಪ. ಮುಂಬಯಿನಲ್ಲಿ ಈ ಮೀನಿನ ದರ ಪ್ರತಿ ಕೆಜಿಗೆ ರೂ. 1500ರ ಆಸುಪಾಸಿನಲ್ಲಿದೆ.
ಇದನ್ನೂ ಓದಿ: Five days of rain likely: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ, ಮುಂದಿನ ಐದು ದಿನ ಮಳೆ ಸಾಧ್ಯತೆ
Rare fish sold for 1.81 lakh
Discussion about this post