ಚಿಕ್ಕಮಗಳೂರು: ದೇಶಭಕ್ತಿಯನ್ನೇ ಮೈಗೂಡಿಸಿಕೊಂಡು, ಎದುರಾಳಿಯ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ತಂತ್ರಗಾರಿಕೆ ನಡೆಸುತ್ತಿದ್ದ ಅವರನ್ನು ಮಣಿಸುವ ಸಾಮರ್ಥ್ಯ ಹೊಂದಿದ್ದವರು ಬಿಪಿನ್ ರಾವತ್ ಎಂದು ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಹೆಲಿಕಾಪ್ಟರ್ ಅಪಘಾದಲ್ಲಿ ನಿಧನರಾದ ಬಿಪಿನ್ ರಾವತ್ ಸೇರಿದಂತೆ ಇತರೆ ೧೩ ಮಂದಿಗೆ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಸೈನ್ಯಕ್ಕೆ ಸೇರುವುದು ವೃತ್ತಿಯಲ್ಲ. ಅದೊಂದು ದೇಶಭಕ್ತಿಯಾಗಿರುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭಾವಿಸಿದ್ದರು, ಸೈನ್ಯಕ್ಕೆ ಸೇರುವುದನ್ನು ವೃತ್ತಿ ಎಂದು ಭಾವಿಸುವವನಿಗೆ ಶತೃವಿನ ಎದೆಗೆ ಬಂದೂಕಿನ ಗುರಿ ಇಡಲು ಆಗುವುದಿಲ್ಲ ಎಂದರು.
ಬಿಜೆಪಿ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಸೀತಾರಾಂ ಭರಣ್ಯ ಮಾತನಾಡಿ, ಸೇನಾ ವರಿಷ್ಠ ಬಿಪಿನ್ ರಾವತ್ ಸೇರಿದಂತೆ ಇತರೆ ಸೈನಿಕರ ಸಾವು ತುಂಬಲಾರದ ನಷ್ಟ. ಪುಲ್ವಾಮಾ ದಾಳಿ ನಂತರ ನೆಡೆದ ಸರ್ಜಿಕಲ್ ಸ್ಟೃಕ್, ಮ್ಯಾನ್ಮಾರ್ ಒಳನುಗ್ಗಿ ಉಗ್ರರನ್ನು ಸದೆಬಡಿದದ್ದು ಎಲ್ಲವೂ ಬಿಪಿನ್ ರಾವತ್ ನೇತೃತ್ವದಲ್ಲಿ ನಡೆದಿದೆ. ನಮ್ಮ ದೇಶದ ಸೈನ್ಯಕ್ಕೆ ಬಲ ತಂದುಕೊಟ್ಟವರು ಅವರಾಗಿದ್ದರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಗ್ರಾಮಾಂತರ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಹೆಚ್.ಡಿ.ತಮ್ಮಯ್ಯ ಇದ್ದರು.
Rawat was capable of subduing the opponent
Discussion about this post