ಚಿಕ್ಕಮಗಳೂರು: ಶ್ರೀ ಗುರುದತ್ತಾತ್ರೇಯ ಪೀಠದಲ್ಲಿ ವಿಎಚ್ಪಿ ಹಾಗೂ ಬಜರಂಗದಳ ಹಮ್ಮಿಕೊಂಡಿರುವ ದತ್ತ ಜಯಂತಿ ಉತ್ಸವ ಹಾಗೂ ದತ್ತಮಾಲಾ ಅಭಿಯಾನಕ್ಕೆ ನಗರ ಸಂಪೂರ್ಣ ಕೇಸರಿ ಮಯವಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡಲು ಖಾಕಿ ಪಡೆಗಳು ಹದ್ದಿನ ಕಣ್ಣಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ಬಾರಿ ಕರೊನಾ ಕಾರಣದಿಂದ ಸಂಘಪರಿವಾರದವರು ಭಕ್ತರಿಗೆ ಕರೆ ನೀಡಿದೆ ಮಂಕಾಗಿದ್ದ ದತ್ತ ಜಯಂತಿ ಉತ್ಸವದಲ್ಲಿ ಕೆಲವರು ಸ್ವಯಂ ಪ್ರೇರಿತರಾಗಿ ಶೋಭಾಯಾತ್ರೆ ಹಾಗೂ ಉತ್ಸವದಲ್ಲಿ ಸಾಂಪ್ರದಾಯದಂತೆ ಪಾಲ್ಗೊಂಡಿದ್ದರು. ಆದರೆ ಈ ಬಾರಿ ಕರೊನಾ ಸಂಖ್ಯೆ ಇಳಿಮುಖವಾಗಿರುವ ಹಿನ್ನಲೆ ವಿಜೃಂಭಣೆಯಿಂದ ನೆರವೇರಿಸುವ ಲಕ್ಷಣಗಳು ಕಂಡು ಬರುತ್ತಿದೆ.
ಜಿಲ್ಲೆಯಲ್ಲಿಯೇ ೩ ಸಾವಿರಕ್ಕೂ ಹೆಚ್ಚು ಭಕ್ತರು ಮಾಲೆ ಹಾಕಿದ್ದಾರೆ. ರಾಜ್ಯದಲ್ಲಿ ಸಹಸ್ರಾರು ಭಕ್ತರು ದತ್ತಮಾಲೆ ಧರಿಸಿದ್ದು ೧೨ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೀಠಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಡಿ.೧೯ ರಂದು ಪೀಠದಲ್ಲಿ ೧೬ ಸಾವಿರ ಮಂದಿಗೆ ಪ್ರಸಾದ ನೀಡಲು ಸಂಘ ಪರಿವಾರ ಸಿದ್ದತೆ ಮಾಡಿಕೊಂಡಿದ್ದಾರೆ.
ಡಿ.೧೭ ರಂದು ಅನಸೂಯಾ ಜಯಂತಿ ಅಂಗವಾಗಿ ನಡೆಯುವ ನಗರ ಸಂಕೀರ್ತನಾ ಯಾತ್ರೆಯಲ್ಲಿ ಜಿಲ್ಲೆಯ ಮಹಿಳೆಯರಾದಿಯಾಗಿ ಪುತ್ತೂರು, ಮಂಗಳೂರಿನ ಮಹಿಳಾ ತಂಡಗಳು ಸೇರಿ ಸಹಸ್ರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಿದ್ದಾರೆ.
ಡಿ.೧೮ ರಂದು ಮಧ್ಯಾಹ್ನ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಆರಂಭವಾಗುವ ಶೋಭಾಯಾತ್ರೆಯಲ್ಲಿ ಬೆಳ್ತಂಗಡಿ ಗೊಂಬೆ, ನಾದಸ್ವರ, ಚಂಡೆ, ಮಹಿಳಾ ಮತ್ತು ಪುರುಷರ ವೀರಗಾಸೆ, ದೇವರ ಕುಣಿತ, ಪುತ್ತೂರು ಭಜನಾ ಮಂಡಳಿ , ಹಳ್ಳಿವಾದ್ಯ ಸೇರಿದಂತೆ ೧೪ ಕಲಾ ತಂಡಗಳು ಭಾಗವಹಿಸಲಿದ್ದು ಶೋಭಾ ಯಾತ್ರೆಗೆ ರಂಗು ತುಂಬಲು ನೂರಾರು ಕೇಸರಿ ಧ್ವಜಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ.
ನಗರದ ಹನುಮಂತಪ್ಪ ವೃತ್ತ, ಆಜಾದ್ ಪಾರ್ಕ್ ವೃತ್ತ, ಬೋಳರಾಮೇಶ್ವರ ದೇವಾಲಯ ವೃತ್ತ, ಮಲ್ಲಂದೂರು ವೃತ್ತ, ಮೆಸ್ಕಾ ವೃತ್ತಗಳು ಸೇರಿದಂತೆ ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ಬಂಟಿಂಗ್ಸ್ಗಳಿಂದ ಅಲಂಕರಿಸಿ ಕೇಸರಿಮಯವಾಗಿ ಈ ಸಾಲಿನ ಉತ್ಸವಕ್ಕೆ ಮರಗು ನೀಡಿದ್ದಾರೆ. ನಗರದ ಬಹುತೇಕ ರಸ್ತೆಗಳಲ್ಲಿ -ಕ್ಸ್ಗಳನ್ನು ಹಾಕಿ, ಅಲ್ಲಲ್ಲಿ ಕಂಬಗಳಿಗೆ ಕೇಸರಿ ಧ್ವಜ ಕಟ್ಟಲಾಗಿದೆ.
೩ ದಿನಗಳ ಕಾಲ ನಡೆಯಲಿರುವ ದತ್ತಜಯಂತಿಯನ್ನು ವಿಜೃಂಭಣೆಯಿಂದ ನಡೆಸಲು ಸಂಘಪರಿವಾರ ಸಜ್ಜಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡಲು ೩೪೪೧ ಪೊಲೀಸರು ಸೇರಿದಂತೆ ೪ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಿ ಶಾಂತಯುವ ಉತ್ಸವಕ್ಕೆ ಜಿಲ್ಲಾಡಳಿತ ಸಜ್ಕಾಗಿದೆ.
Saffron rangu for dattajayanti in the city
Discussion about this post