ಬಾಲಿವುಡ್ನ ನಟ ಶಾರುಕ್ ಖಾನ್ ಮಗನ ವಿರುದ್ಧದ ಡ್ರಗ್ಸ್ ಪ್ರಕರಣದ ತನಿಖೆ ನಡಸುತ್ತಿದ್ದ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಯನ್ನು ಎತ್ತಂಗಡಿ ಮಾಡಲಾಗಿದ್ದು, ಅವರ ಬದಲಿಗೆ ಸಂಜಯ್ ಸಿಂಗ್ ಎಂಬುವರನ್ನು ನೇಮಿಸಲಾಗಿದೆ.
ಮುಂಬೈ: ಮುಂಬೈನಿಂದ ಗೋವಾಕ್ಕೆ ಅ.2ರಂದು ಹೋಗುತ್ತಿದ್ದ ಐಷಾರಾಮಿ ನೌಕೆಯಲ್ಲಿ ರೇವ್ ಪಾರ್ಟಿ ನಡೆಸಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯಿಂದ ಮಾದಕವಸ್ತು ನಿಯಂತ್ರಣ ದಳದ (ಎನ್ಸಿಬಿ) ಮುಂಬೈ ವಲಯದ ನಿರ್ದೇಶಕ ಸಮೀರ್ ವಾಂಖೆಡೆಯನ್ನು ಎತ್ತಂಗಡಿ ಮಾಡಲಾಗಿದೆ.
ಇದು ಮಾತ್ರವಲ್ಲದೆ ಅವರು ತನಿಖೆ ನಡೆಸುತ್ತಿರುವ ಇನ್ನೂ ಐದು ಕೇಸ್ಗಳನ್ನು ಹಿಂಪಡೆಯಲಾಗಿದೆ. ವಾಂಖೆಡೆ ಜಾಗಕ್ಕೆ ದೆಹಲಿಯಲ್ಲಿ ಎನ್ಸಿಬಿಯ ಉಪಮಹಾನಿರ್ದೇಶಕರಾಗಿರುವ ಸಂಜಯ್ ಸಿಂಗ್ ಅವರನ್ನು ನೇಮಿಸಲಾಗಿದೆ. ಡ್ರಗ್ಸ್ ಕೇಸ್ನ ಮುಂದಿನ ತನಿಖೆಯನ್ನು ದೆಹಲಿಯ ತಂಡ ನಡೆಸಲಿದೆ. ಅದಕ್ಕೆ ಮುಂಬೈನ ತಂಡ ಅಗತ್ಯ ಸಹಕಾರ ನೀಡಲಿದೆ ಎಂದು ವಾಂಖೆಡೆ ಸುದ್ದಿವಾಹಿನಿ ಎಎನ್ಐಗೆ ತಿಳಿಸಿದ್ದಾರೆ.
ಸಿಂಗ್ ಒಡಿಶಾ ಬ್ಯಾಚ್ನ ಅಧಿಕಾರಿ:
ಸಜಯ್ ಸಿಂಗ್ 1996ನೇ ಒಡಿಶಾ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಹಿಂದೆ ಒಡಿಶಾ ಡ್ರಗ್ಸ್ ತಡೆ ಕಾರ್ಯಪಡೆಯ ಕಮಿಷನರ್ ಆಗಿದ್ದರು. ಅದಕ್ಕೂ ಪೂರ್ವದಲ್ಲಿ ಸಿಬಿಐನಲ್ಲಿದ್ದ ಅವರು, 2010ರ ಕಾಮನ್ವೆಲ್ತ್ ಕ್ರೀಡಾಕೂಟದ ನಿರ್ಮಾಣ ಕಾಮಗಾರಿ ಹಗರಣದ ತನಿಖೆ ನಡೆಸಿದ ತಂಡದಲ್ಲಿ ಇದ್ದರು.
ಪ್ರಕರಣದ ಹಿನ್ನೆಲೆ:
ಐಷಾರಾಮಿ ನೌಕೆಗೆ ಸಾಮಾನ್ಯ ಪ್ರಯಾಣಿಕರ ಸೋಗಿನಲ್ಲಿ ಹೋಗಿದ್ದ ಎನ್ಸಿಬಿ ತಂಡ,ರೇವ್ ಪಾರ್ಟಿ ನಡೆಸಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ 8 ಮಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿತ್ತು. ಇವರಲ್ಲಿ ಆರ್ಯನ್ ಖಾನ್ ಪ್ರಥಮ ಆರೋಪಿಯಾದರೆ, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಇನ್ನಿತರರು ಆರೋಪಿಗಳಾಗಿದ್ದರು.
ನಂತರದಲ್ಲಿ ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ 12 ಮಂದಿಯನ್ನು ಎನ್ಸಿಬಿ ಬಂಧಿಸಿತು. ಈ ಮಧ್ಯೆ, ತನಿಖಾಧಿಕಾರಿಗಳು ಶಾರುಕ್ ಖಾನ್ ಮಗನನ್ನು ಬಿಟ್ಟುಬಿಡಲು 25 ಕೋಟಿ ರೂ. ಲಂಚದ ಬೇಡಿಕೆಯ ಇಟ್ಟಿದ್ದರು. ಇದರಲ್ಲಿ ವಾಂಖೆಡೆಯೆ 8 ಕೋಟಿ ರೂಪಾಯಿಯನ್ನು ಕೇಳಿದ್ದಾರೆಂದು ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾದ ಪ್ರಭಾಕರ ಸೈಲ್ ಆರೋಪವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಾಂಖೆಡೆ ದೆಹಲಿಯಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಈ ಬೆಳವಣಿಗೆಯ ನಂತರ ವಾಂಖೆಡೆಯವರನ್ನು ಎತ್ತಂಗಡಿ ಮಾಡಲಾಗಿದೆ.
ಮಹಾರಾಷ್ಟ್ರದ ಅಹಮದ್ನಗರದ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡಕ್ಕೆ 11 ರೋಗಿಗಳು ಬಲಿ
Entry Start: ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಪ್ರವೇಶಾತಿ ಆರಂಭ
Corona case decreases: ದೇಶದಲ್ಲಿ ಕೊರೋನಾ ಪ್ರಕರಣ ಇಳಿಕೆ
Sameer Lifted From Investigation Into Drugs Case Against Aryan Khan
Discussion about this post