ಚಿಕ್ಕಮಗಳೂರು: ನವೆಂಬರ್ 21 ರಿಂದ 23 ರವರೆಗೆ ಮಹಾರಾ?ದ ಚಿಂಚೋನಿ ಸಮುದ್ರ ತೀರದಲ್ಲಿ ನಡೆದ 34 ರಾಷ್ಟ್ರೀಯ ಟಗ್ ಆಫ್ ವಾರ್ (ಬೀಚ್) ಚಾಂಪಿಯನ್ ಶಿಪ್ನ 480 ಕೆಜಿ ವಿಭಾಗದಲ್ಲಿ ರಾಜ್ಯ ಮಹಿಳಾ ತಂಡ ಭಾಗವಹಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದು ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದ ಹಿನ್ನೆಲೆ ನಗರಸಭೆ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ನಗರಸಭೆ ಪೌರಾಯುಕ್ತ ಬಸವರಾಜ್ ಮಾತನಾಡಿ ಜಿಲ್ಲೆಯ ಮಹಿಳಾ ಕ್ರೀಡಾಪಟುಗಳಿಗೆ ಪದಕ ನೀಡಿ ಅಭಿನಂದಿಸಿ ಮಾತನಾಡಿ ಈ ಹಿಂದೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಯುವ ರಾಷ್ಟ್ರೀಯ ಆಟಗಾರ ಹಾಗೂ ನಗರದ ಕ್ರೀಡಾ ತರಬೇತುದಾರ ಗುರುಮೂರ್ತಿ ಅವರ ಮಾರ್ಗದರ್ಶನದಲ್ಲಿ ತಂಡವು ಉತ್ತಮವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ಸು ತಂದಿದೆ. ಈ ರೀತಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಂಡದ ಕೋರ್ಚ್ ಗುರುಮೂರ್ತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ನವೆಂಬರ್ ೯ ರಂದು ಬೆಂಗಳೂರಿನಲ್ಲಿ ಅಮೆಚೂರ್ ಟಗ್ ಆಫ್ ವಾರ್ ಅಸೋಸಿಯೇ?ನ್ ಆಫ್ ಕರ್ನಾಟಕ ನಡೆಸಿದ ರಾಜ್ಯ ಮಟ್ಟದ ಟಗ್ಆಫ್ವಾರ್ ಶಿಬಿರದಲ್ಲಿ ಭಾಗವಹಿಸಿ ಸಮಗ್ರ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ೪೮೦ ಕೆಜಿ ವಿಭಾಗಕ್ಕೆ ಬಲಿಷ್ಟವಾದ ೧೦ ಮಹಿಳಾ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಯಿತು ಈ ವೇಳೆ ಜಿಲ್ಲೆಯ ೬ ಜನ ಕ್ರೀಡಾಪಟುಗಳು ರಾಜ್ಯದಿಂದ ಆಯ್ಕೆಯಾಗಿರುವುದು ವಿಶೇಷ ಎಂದರು.
ಮಹಾರಾಷ್ಟ್ರದಲ್ಲಿ ನಡೆದ ಮೊದಲ ಹಂತದಲ್ಲಿ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಬಡ್ತಿ(ಬೈ) ಪಡೆದ ನಿಮಿತ್ತ ಸೆಮಿಫೈನಲ್ಗೆ ಲಗ್ಗೆ ಇಟ್ಟು ಬಲಿಷ್ಟ ತಮಿಳುನಾಡು ತಂಡದೊಂದಿಗೆ ಸೆಣೆಸಾಡದಿರಲು ಸಾಧ್ಯವಾದದ್ದು ಅದೃ?ವಾಗಿ ಪರಿಣಮಿಸಿತು. ಈ ಮೂಲಕ ಈ ಹಿಂದೆ ಚಾಂಪಿಯನ್ ಆಗಿದ್ದ ರಾಜಸ್ಥಾನ ತಂಡದೊಂದಿಗೆ ನಡೆದ ಹೋರಾಟ ಅತ್ಯಂತ ದೊಡ್ಡ ಸಾವಾಲಿನ ವಿ?ಯವಾಗಿತ್ತು ಆದರೂ ಚಲಬಿಡದೆ ೨ ಸುತ್ತುಗಳಲ್ಲಿ ಆಡಿ ತಂಡವು ಯಾವುದೇ ಫೌಲ್ ಮಾಡಿಕೊಳ್ಳದೆ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ತಂಡದ ಪ್ರಮುಖ ಇಬ್ಬರೂ ಕ್ರೀಡಾಪಟುಗಳು ತೀವ್ರ ಅನಾರೋಗ್ಯದವಿದ್ದ ಕಾರಣ ಕರ್ನಾಟಕ ತಂಡ ರಾಜಸ್ಥಾನ ಎದುರು ಮಣಿದು ದ್ವಿತೀಯ ಸ್ಥಾನದ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು ಎಂದು ತಂಡದ ಕೋಚ್ ಗುರು ವಿವರಿಸಿದರು .
ಕ್ರೀಡಾಪಟುಗಳಿಗೆ ನಗರಸಭೆ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರೂಪ ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಂಡದ ನಾಯಕಿ ವಂದನ ಎಸ್.ನಾಯಕ್, ಸಾನಿಯ ತಸ್ಲೀಮಾ, ವರ್ಷೀತ ರಾತೊಡ್, ಅನನ್ಯ ಹಾಗೂ ಸ್ನೇಹ ಎಸ್. ನಾಯಕ್ . ಹಾಗೂ ನಗರಸಭಾ ಇಂಜಿನಿಯರ್ ಚಂದನ್, ಕಂದಾಯ ಅಧಿಕಾರಿಗಳು ಬಸವರಾಜ್, ಅಣ್ಣಯ್ಯ, ನಗರಸಭೆ ಮಾಜಿ ಸದಸ್ಯ ರೂಬೆನ್ ಮೊಸಸ್ ಮಾಜಿ ಅಧ್ಯಕ್ಷ ಪು?ರಾಜ್ ಸೇರಿದಂತೆ ಮತ್ತಿತರರು ಇದ್ದರು.
Discussion about this post