ಚಿಕ್ಕಮಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಾನವೀಯ ವರದಿಗಳಿಗಾಗಿ ನೀಡುವ ವಾರ್ಷಿಕ ಪ್ರಶಸ್ತಿಗೆ ಟಿವಿ-̈9 ಸುದ್ದಿವಾಹಿನಿಯ ಜಿಲ್ಲಾ ವರದಿಗಾರ ಪ್ರಶಾಂತ್ ಭಾಜನರಾಗಿದ್ದಾರೆ.
ಈ ಹಿಂದೆ ಕೊಡುಗು ಜಿಲ್ಲೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ೨೦೧೮ರ ಆಗಸ್ಟ್ ಮಾಹೆಯಲ್ಲಿ ಸುರಿದ ಭಾರಿ ಮಳೆಗೆ ಇಡೀ ಕೊಡುಗು ಜಿಲ್ಲೆ ನಲುಗಿಹೋಗಿತ್ತು. ನೂರಾರು ಎಕರೆ ಭೂಮಿ ಮಳೆಯಲ್ಲಿ ಕೊಚ್ಚಿಹೋಗಿತ್ತು. ಸಾವಿರಾರು ಜನರು ನಿರಾಶ್ರಿತರಾಗಿದ್ದರು.
ತಲ ಕಾವೇರಿಯ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದ ಅರ್ಚಕರ ಕುಟುಂಬದ ಸದಸ್ಯರು ಮನೆಯೊಂದಿಗೆ ಕೊಚ್ಚಿಹೋಗಿ ಭೂಮಿಯಡಿ ಸಿಲುಕಿ ಶವವಾಗಿ ಪತ್ತೆಯಾಗಿದ್ದರು. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಓರ್ವ ವರದಿಗಾರರಾಗಿ ತಮ್ಮ ಜೀವದ ಹಂಗನ್ನು ತೊರೆದು ಸಂಕಷ್ಟದಲ್ಲಿದ್ದ ಕುಟುಂಬಗಳನ್ನು ಸ್ಥಳಾಂತರಿಸಲು ನೆರವು ನೀಡಿರುವುದು ಮತ್ತು ನೊಂದವರಿಗೆ ಸಾಂತ್ವನ ಹೇಳುವುದರೊಂದಿಗೆ ಮಾನವೀಯ ಮೌಲ್ಯಾಧಾರಿತ ನೈಜ ವರದಿಗಾರಿಕೆಯನ್ನು ಮಾಡಿದ್ದರು.
ಇವರ ಕರ್ತವ್ಯದೊಂದಿಗೆ ಜನರ ಸಂಕಷ್ಟಗಳಿಗೆ ನೆರವಾಗಿರುವ ಮಾನವೀಯ ಗುಣಗಳನ್ನು ಪರಿಗಣಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಇವರಿಗೆ ಪ್ರಶಸ್ತಿಯನ್ನು ಕಲ್ಬುರ್ಗಿಯಲ್ಲಿ ಜನವರಿ 2 ಮತ್ತು 3 ರಂದು ನಡೆಯಲಿರುವ ರಾಜ್ಯಸಮ್ಮೇಳನದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ಬೊಮ್ಮಾಯಿ ಪ್ರಧಾನ ಮಾಡಲಿದ್ದಾರೆ.
State Award of the Journalists Association
Discussion about this post