ದೆಹಲಿ: ಬ್ರಾಹ್ಮಣ ಹಾಗೂ ಬನಿಯಾ ಸಮುದಾಯದವರು” ನನ್ನ ಜೇಬಿನಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಮಹಾರಾಷ್ಟ್ರದ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ಬಿಜೆಪಿ ಪಕ್ಷ ಹಾಗೂ ಎಲ್ಲೆಲ್ಲಿ ಬಿಜೆಪಿ ಸರ್ಕಾರ ಇದೆಯೋ ಅಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಹಲವು ಯೋಜನೆ ಕೂಡ ರೂಪಿಸಿದೆ. ಇದರ ಜೊತೆಗೆ ಹಿಂದುಳಿದ ವರ್ಗವದವರ ಅಭಿವೃದ್ಧಿಗೂ ಗಮನ ಹರಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
ಈ ವೇಳೆ ಪ್ರಶ್ನೆಯೊಂದನ್ನು ಕೇಳಿದ ಪತ್ರಕರ್ತನೊಬ್ಬ, “ಬಿಜೆಪಿಯನ್ನು ಬ್ರಾಹ್ಮಣರು ಮತ್ತು ಬನಿಯಾ ಸಮುದಾಯವನ್ನೊಳಗೊಂಡ ಪಕ್ಷ ಎಂದು ನಂಬಲಾಗಿದೆ. ಆದರೆ ಈಗ ನೀವು ಎಸ್ ಸಿ ಮತ್ತು ಎಸ್ ಟಿ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದೇಳುತ್ತಿದ್ದೀರಲ್ಲಾ” ಅಂತ ಕೇಳಿದರು.
ಇದಕ್ಕೆ ಉತ್ತರ ನೀಡವಾಗ ತಮ್ಮ ಕುರ್ತಾ ಜೇಬನ್ನು ತೋರಿಸಿದ ಮುರುಳೀಧರ ರಾವ್ ಅವರು, “ಬ್ರಾಹ್ಮಣರು ಹಾಗೂ ಬನಿಯಾ ಸಮುದಾಯ ನನ್ನ ಜೇಬಿನಲ್ಲಿಯೆ ಇದ್ದಾರೆ. ಇವರೆ ನಮ್ಮ ಓಟ್ ಬ್ಯಾಂಕ್ ಎಂದು ಹೇಳಿದರು. ಆದರೆ ಬಿಜೆಪಿ ಎಲ್ಲಾ ಸಮುದಾಯದ ಪಕ್ಷವಾಗಿದೆ” ಎಂದು ಮುರಳೀಧರ ರಾವ್ ಹೇಳಿದರು.
ಮುರುಳೀಧರ ರಾವ್ ಅವರ ಈ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡಿರುವ ಕಾಂಗ್ರೆಸ್, ಮುರುಳೀಧರ ರಾವ್ ಅವರ ಕ್ಷಮೆಗೆ ಆಗ್ರಹಿಸಿದೆ.
Discussion about this post