ಚಿಕ್ಕಮಗಳೂರು: ರಾಜ್ಯಾದ್ಯಂತ ಇರುವ ವಕ್ಫ್ ಬೋರ್ಡ್ನ ನಿವೇಶನಗಳಲ್ಲಿ ಸರ್ಕಾರ ಮತ್ತು ಸಮುದಾಯದ ನೆರವು ಪಡೆದು ಶಾಲಾ ಕಾಲೇಜುಗಳ ನಿರ್ಮಿಸುವ ಮೂಲಕ ಮುಸಲ್ಮಾನ ಸಮುದಾಯದ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆಯಲು ಸಂಕಲ್ಪಿಸಿದ್ಧೇನೆ ಎಂದು ವಕ್ಫ್ ಮಂಡಳಿಯ ನೂತನ ಅಧ್ಯಕ್ಷ ಹಜರತ್ ಮೌಲಾನ ಎನ್.ಕೆ.ಎಂ ಶಾಫಿ ಸಅದಿ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಮುಸ್ಲೀಂ ಜಮಾತ್ ಸಂಸ್ಥೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಕ್ಫ್ ಮಂಡಳಿಯ ಆಸ್ತಿಗಳನ್ನು ಉಳಿಸಿಕೊಳ್ಳಲು ಸಮುದಾಯದ ಜನರ ಸಹಕಾರ ಅಗತ್ಯ ಎಂದು ಹೇಳಿದ ಅವರು ಉನ್ನತ ಶಿಕ್ಷಣ ಕೊಡಿಸದಿದ್ದರೆ ಉನ್ನತ ಹುದ್ದೆಗಳನ್ನು ಅಲಂಕರಿಸುವುದು ಸಾಧ್ಯವಿಲ್ಲ. ಸಮುದಾಯದ ಜನತೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಹೇಳಿದರು.
ರಾಜ್ಯದ ವಿವಿಧೆಡೆಯಿರುವ ವಕ್ಫ್ ಮಂಡಳಿಯ ಆಸ್ತಿಗಳಲ್ಲಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಆದಾಯ ಬರುವಂತಹ ಕಟ್ಟಡಗಳ ನಿರ್ಮಾಣ ಮಾಡಿ ಅದರಿಂದ ಬರುವ ಆದಾಯದಿಂದ ವಿಧವೆಯರು, ಬಡವರು, ದುರ್ಬಲರಿಗೆ ನೆರವು ನೀಡಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ೩೨ಸಾವಿರ ಸಂಸ್ಥೆಗಳು, ೪೫ಸಾವಿರ ವಕ್ಫ್ ಮಂಡಳಿಯ ಆಸ್ತಿಗಳಿವೆ ಅದರಲ್ಲಿ ಹಲವು ಆಸ್ತಿಗಳು ಒತ್ತುವರಿ ಮತ್ತು ಕಬಳಿಕೆಗೆ ಒಳಗಾಗಿವೆ. ಅವುಗಳನ್ನು ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದು, ಶೀಘ್ರದಲ್ಲಿ ಇತ್ಯರ್ಥಗೊಳಿಸಿ ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ ೫೧೭ ಆಸ್ತಿ, ೧೯೮ ಸಂಸ್ಥೆಗಳಿವೆ, ೨೨ಸಾವಿರ ಎಕರೆ ಜಮೀನು ಇದೆ ಎಂದರು.
ಅದರಲ್ಲಿ ಪ್ರಮುಖವಾಗಿ ತರೀಕೆರೆಯ ಸಾಹುಕಾರ್ ಮಜ್ಜೀದ್ಗೆ ಸೇರಿದ ೧೭೬ ಎಕರೆ ಜಮೀನು ಕಬಳಿಕೆಯಾಗಿದೆ. ಅದನ್ನು ಬಿಡಿಸಿಕೊಳ್ಳಲು ಸರ್ವೋಚ್ಛ ನ್ಯಾಯಾಲಯದ ಮೂಲಕ ತ್ವರಿತಗತಿಯಲ್ಲಿ ಬಿಡಿಸಿಕೊಂಡು ಅದನ್ನು ಸಮುದಾಯದ ಉನ್ನತೀಕರಣಕ್ಕೆ ಬಳಸಿಕೊಳ್ಳಲಾಗುವುದು ಎಂದರು.
೧೫೩ ಇಮಾಮ್, ಮೌಜಿನ್ಗಳಿಗೆ ತಲಾ ೪ಸಾವಿರದಂತೆ ಗೌರವಧನ ನೀಡಲಾಗುತ್ತಿದೆ ಮನವಿ ನೀಡಿದರೆ ಅದನ್ನು ಹೆಚ್ಚಿಸಲು ಸಿದ್ದರಿದ್ದೇವೆ ಎಂದು ಹೇಳಿದರು. ಅದರೊಂದಿಗೆ ೬೫ ವರ್ಷ ಮೇಲ್ಪಟ್ಟ ೨೨ ಮೌಜಿನ್ಗಳಿಗೆ ವೃದ್ದಾಪ್ಯವೇತನವನ್ನು ನೀಡಲಾಗುತ್ತಿದೆ ಅದರ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು. ಜನರ ಸಮಸ್ಯೆಗಳನ್ನು ಪರಿಹರಿಸಲು ವಕ್ಫ್ ಮಂಡಳಿ ಸಿದ್ದವಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಮುಸ್ಲಿಂ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ರಂಗದಲ್ಲಿ ಹಿಂದುಳಿಯಲಿರುವ ಕಾರಣಗಳ ಬಗ್ಗೆ ಅರಿವಿದ್ದರೂನಮ್ಮ ಸಮುದಾಯಕ್ಕೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಿದ್ದವಿಲ್ಲದಿರುವುದು ದುರ್ದೈವದ ಸಂಗತಿ ಎಂದರು.
ಇತರ ಸಮುದಾಯಗಳನ್ನು ಗೌರವಿಸಿ ಸಹಿಷ್ಣತೆ, ಸೌಹಾರ್ಧದ ಸಹಬಾಳ್ವೆ ಮಾಡಬೇಕು ಎಂದು ಹೇಳಿದ ಅವರು ಸಣ್ಣಪುಟ್ಟ ವಿಚಾರಗಳನ್ನು ಬಳಸಿಕೊಂಡು ಕೋಮುಗಲಭೆ ನಡೆಸಲು ಕೋಮುಶಕ್ತಿಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕೆಂದು ಕಿವಿಮಾತು ಹೇಳಿದರು.
ಮೌಲಾನ ಕೆ.ಎಂ ಅಬೂಬಕ್ಕರ್ ಸಿದ್ದಿಕ್ ಮೊಂಟುಗೋಳಿ ಅಭಿನಂದಿಸಿ ಮಾತನಾಡಿ ಬಡತನದ ಹಿನ್ನೆಲೆಯಿಂದ ಬಂದು ಇಸ್ಲಾಂ ಧರ್ಮಗುರು ಒಬ್ಬರು ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಬಂದಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು.ವಚನ ಸಾಹಿತ್ಯ ಪರಿಷತ್ನ ರವೀಶ್ ಬಸಪ್ಪ ಮಾತನಾಡಿ ಹಣ, ಅಧಿಕಾರ ಶಾಶ್ವತವಲ್ಲ, ಇತರರಿಗಾಗಿ ಬದುಕುವವರು ಜನಮಾನಸದಲ್ಲಿ ಉಳಿದುಕೊಳ್ಳುತ್ತಾರೆ ಆ ಸಾಲಿನಲ್ಲಿ ಸನ್ಮಾನಿತ ಸಅದಿಯವರು ಸೇರಿದ್ದಾರೆ ಎಂದರು.
ಈ ವೇದಿಕೆಯಲ್ಲಿ ಡಾ.ಜಮಾತ್ಉಲ್ ಉಲಾಮದ ಅಧ್ಯಕ್ಷ ಹಜರತ್ ಸೈಯದ್ ಹುಸೇನ್ ಅಟಕೋಯ ತಂಞಳ್, ವಕ್ಫ್ ಮಂಡಳಿಯ ಸದಸ್ಯರಾದ ಡಾ.ಅನ್ವರ್ಪಾಷಾ, ರಿಯಾಜ್ಖಾನ್, ಯಾಕೂಬ್ ಅಧ್ಯಕ್ಷ ಮುಸ್ಲೀಂ ಜಮಾತ್ನ ಅಧ್ಯಕ್ಷ ಮೊಹಮ್ಮದ್ಶಾಹಿದ್ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
The Preface to the Education Revolution of the Muslim Community
Discussion about this post