ಬಲರಾಮ್ಪುರ, ಛತ್ತೀಸ್ಘಡ: ಬಲರಾಮ್ಪುರ ಜಿಲ್ಲೆಯ ಖಾದಿಯಾ ದಾಮರ್ ಎಂಬ ಹಳ್ಳಿಯ ಸರಕಾರಿ ಶಾಲೆಯು ಬೆಟ್ಟ-ಗುಡ್ಡಗಳ ಪ್ರದೇಶದಲ್ಲಿದ್ದು ಜನವಸತಿಯಿರುವ ಹಳ್ಳಿಯಿಂದ 8 ಕಿ.ಮೀ. ದೂರದಲ್ಲಿದೆ. ಹಳ್ಳಿಯಿಂದ ಶಾಲೆಗೆ ಹೋಗುವ ಮಾರ್ಗವು ತಗ್ಗು-ದಿಣ್ಣೆಗಳಿಂದ ಹಾಗೂ ಹರಿಯುವ ನೀರಿನಿಂದ ಕೂಡಿರುವ ಪ್ರದೇಶವಾಗಿದ್ದು ಹಳ್ಳಿಯಿಂದ ಶಾಲೆಗೆ ಓಡಾಡಲು ವಿದ್ಯಾರ್ಥಿಗಳು ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿದೆ.
ಹಳ್ಳಿಯಿಂದ ಶಾಲೆಗೆ ಸರಿಯಾದ ರಸ್ತೆಯಿಲ್ಲದ ಕಾರಣ ಇಬ್ಬರು ಶಿಕ್ಷಕರು ಶಾಲಾಮಕ್ಕಳ ಪ್ರತಿನಿತ್ಯದ ಬಿಸಿಯೂಟಕ್ಕಾಗಿ ಹಳ್ಳಿಯಿಂದ ಪಡಿತರ ವಸ್ತುಗಳನ್ನು ಹೊತ್ತು ಪ್ರತಿದಿನ ಬೆಟ್ಟ-ಗುಡ್ಡಗಳ ಹಾದಿಯಲ್ಲಿ ನಡೆದು 8 ಕಿ.ಮೀ. ದೂರವನ್ನು ಕ್ರಮಿಸಬೇಕಾದ ಪರಿಸ್ಥಿತಿಯಿದ್ದು ಅವರ ಬವಣೆ ಹೇಳತೀರದಾಗಿದೆ.
ತಮ್ಮ ಪ್ರತಿನಿತ್ಯದ ಈ ಬವಣೆಯ ಬಗ್ಗೆ ವಿವರಿಸಿದ ಶಿಕ್ಷಕ ಸುಶೀಲ್ ಯಾದವ್ ಇದು ನಿಜಕ್ಕೂ ಬಹಳ ಕಷ್ಟಕರ ಪರಿಸ್ಥಿತಿಯಾಗಿದ್ದು ದಿನವೂ ನಾವು ಬೆಟ್ಟ-ಗುಡ್ಡಗಳ ಪ್ರದೇಶದಲ್ಲಿ 8 ಕಿ.ಮೀ. ನಡೆಯಬೇಕಾಗಿದೆ ಎಂದರು. ಅದರಲ್ಲೂ ಮಳೆಗಾಲದ ದಿನಗಳಲ್ಲಿ ಈ ಕಷ್ಟ ಇನ್ನೂ ಹೆಚ್ಚಾಗಿದ್ದು ಇದರೊಂದಿಗೆ ಕೆಲವೊಮ್ಮೆ ಕಾಡುಪ್ರಾಣಿಗಳಿಂದ ದಾಳಿಯಾಗುವ ಸಾಧ್ಯತೆಗಳೂ ಇವೆ ಎಂದರು. ನಮಗೆ ಇಷ್ಟೆಲ್ಲ ಕಷ್ಟಗಳಿದ್ದರೂ ಹಸಿದ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ನಾವು ಇಷ್ಟೆಲ್ಲಾ ಇದನ್ನೆಲ್ಲಾ ಅನುಭವಿಸುತ್ತಿದ್ದೇವೆಂದರು.
ಜಿಲ್ಲಾ ವಿದ್ಯಾಧಿಕಾರಿ ಬಿ. ಎಕ್ಕಾರ ಗಮನಕ್ಕೆ ಈ ವಿಷಯವನ್ನು ತಂದಾಗ “ನನಗೂ ಈ ವಿಷಯ ಅರಿವಿಗೆ ಬಂದಿದ್ದು ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಅಭಿನಂದಿಸುತ್ತೇನೆಂದರು.”
ಸರಕಾರ ಶೀಘ್ರವಾಗಿ ಹಳ್ಳಿಯಿಂದ ಶಾಲೆಗೆ ಒಂದು ಉತ್ತಮ ರಸ್ತೆಯನ್ನು ನಿರ್ಮಿಸಿದರೆ ಮಕ್ಕಳ ಹಾಗೂ ಉಪಾಧ್ಯಾಯರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.
Two teachers in rural Chattisgarh carry ration and walk 8 kms in different terrains on a daily basis to ensure mid-day meals for students
ಇದನ್ನೂ ಓದಿ: Schools start: ಇಂದಿನಿಂದದ 1-5ನೇ ತರಗತಿ ಶಾಲೆಗಳು ಆರಂಭ
ಇದನ್ನೂ ಓದಿ: School Survey: ಶಾಲೆಗಳ ಮುಚ್ಚುಗಡೆಯಿಂದ ದುರ್ಬಲ ಸಮುದಾಯಗಳ ಮಕ್ಕಳ ಮೇಲೆ ತೀವ್ರ ದುಷ್ಪರಿಣಾಮ
Discussion about this post