ಚಿಕ್ಕಮಗಳೂರು : ದತ್ತು ಕಾರ್ಯಕ್ರಮವು ಅನಾಥ, ಪರಿತ್ಯಕ್ತ, ಒಪ್ಪಿಸಿದ ಮಕ್ಕಳ ಭವಿಷ್ಯಕ್ಕೆ ಉತ್ತಮ ಕಾರ್ಯಕ್ರಮವಾಗಿದೆ. ಅಕ್ರಮವಾಗಿ ಕಾನೂನು ನಿಯಮ ಉಲ್ಲಂಘಿಸಿ ದತ್ತು ಪಡೆದರೆ ಶಿಕ್ಷಾರ್ಹ ಅಪರಾಧ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಹೇಳಿದರು.
ನಗರದ ಹೋಲಿಕ್ರಾಸ್ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಹೋಲಿಕ್ರಾಸ್ ಆಸ್ಪತ್ರೆ, ಚಿಕ್ಕಮಗಳೂರು ಇವರ ಸಂಯಕ್ತಾಶ್ರಯದಲ್ಲಿ ಅಂತರಾಷ್ಟಿçÃಯ ದತ್ತು ಮಾಸಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾನೂನುಬದ್ದ ದತ್ತು ಪ್ರಕ್ರಿಯೆ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ದತ್ತು ಪಡೆಯುವುದು ಅನಾಥ, ಪರಿತ್ಯಕ್ತ, ಒಪ್ಪಿಸಿದ ಮಕ್ಕಳ ಭವಿಷ್ಯಕ್ಕೆ ಉತ್ತಮ ಕಾರ್ಯಕ್ರಮವಾಗಿದೆ. ಆದರೆ ದತ್ತು ಪ್ರಕ್ರಿಯೆಯ ಕಾನೂನು ಬದ್ದವಾಗಿರಬೇಕು. ಅಕ್ರಮವಾಗಿ ದತ್ತು ಪಡೆದರೆ ನಿಯಮ ಉಲ್ಲಂಘನೆಯಾಗಲಿದ್ದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ತಿಳಿಸಿದರು.
ಇರುವ ಕ್ರಮಗಳ ಕುರಿತು ಜನರಿಗೆ ಅರಿವು ಮೂಡಿಸಬೇಕು. ಮುಖ್ಯವಾಗಿ ಆಸ್ಪತ್ರೆಯ ವೈಧ್ಯರು ಹಾಗೂ ಶುಶ್ರೂಷಕಿಯರೊಂದಿಗೆ ಜನರು ಈ ಬಗ್ಗೆ ಒಡನಾಟ/ ನಂಬಿಕೆ ಹೊಂದಿರುವುದರಿAದ ಅವರಿಗೆ ಅಗತ್ಯ ಮಾಹಿತಿಯ ಅವಶ್ಯವಿದೆ ಎಂದು ಅಭಿಪ್ರಾಯಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಅರುಂಧತಿ ‘ಕಾನೂನುಬದ್ದ ದತ್ತು ಪ್ರಕ್ರಿಯೆ ಮಾಹಿತಿ ನೀಡುತ್ತಾ ಮಾತನಾಡಿ ಅನಧಿಕೃತ ದತ್ತು ಪ್ರಕ್ರಿಯೆ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದು ರೂ.೧ಲಕ್ಷ ದಂಡ ಹಾಗೂ ೭ ವರ್ಷದವರೆಗೆ ಜೈಲು ಶಿಕ್ಷೆ ಇರುತ್ತದೆ.
ಆದ್ದರಿಂದ ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫ರ ಸೆಕ್ಷನ್ ೩೮ರನ್ವಯ ಅಗತ್ಯ ಕಾನೂನು ಪ್ರಕ್ರಿಯೆಗಳನ್ನ ಕೈಗೊಂಡು, ನಂತರ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದ ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳು ಕಾನೂನು ಬದ್ದ ದತ್ತು ನೀಡಲು ಅರ್ಹರಾಗಿರುತ್ತಾರೆಂದು ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಂಗನಾಥ ಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪೋಷಕರು ತಮಗೆ ಬೇಡವಾದ ಮಕ್ಕಳನ್ನು ಅಪಾಯಕಾರಿ ಸ್ಥಳಗಳಲ್ಲಿ ಬಿಟ್ಟು ಹೋಗುವುದು ಅಥವಾ ಬೇರೆಯವರಿಗೆ ಕಾನೂನು ಬಾಹಿರವಾಗಿ ನೀಡುತ್ತಿರುವುದು ಕಂಡು ಬಂದಿರುತ್ತದೆ. ಕಸದ ತೊಟ್ಟಿಗಳಲ್ಲಿ, ಬೀದಿ ಬದಿಯಲ್ಲಿ ಪರಿತ್ಯಜಿಸಲ್ಪಟ್ಟ ಮಕ್ಕಳು ಕ್ರಿಮಿ ಕೀಟಗಳಿಗೆ/ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ/ ಪ್ರಾಣಿಗಳಿಗೆ ಬಲಿಯಾಗುವ ಸಾಧ್ಯತೆಗಳಿರುತ್ತದೆ.
ಇಂತಹ ಅಪಾಯಗಳಿಂದ ಮಕ್ಕಳನ್ನು ರಕ್ಷಿಸಿ ದತ್ತು ನಿಯಮಾವಳಿಯಂತೆ ದತ್ತು ಪ್ರಕ್ರಿಯೆಗೊಳಪಡಿಸಿ ಕುಟುಂಬದ ಆಸರೆ ನೀಡಿ. ಪೋಷಕರ ಪ್ರೀತಿ ವಾತ್ಸಲ್ಯ ದೊರಕುವಂತೆ ನೋಡಿಕೊಳ್ಳಬೇಕಾಗಿರುತ್ತದೆ ಹಾಗೂ ಕಾನೂನು ಬದ್ಧ ದತ್ತು ಪ್ರಕ್ರಿಯೆ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ದತ್ತು ಸಂಬAಧಿತ ಕಾನೂನುಗಳು. ದತ್ತು ಕಾರ್ಯಕ್ರಮದ ಪ್ರಮುಖ ಅಂಶಗಳು, ದತ್ತು ಪ್ರಕ್ರಿಯೆಗೆ ಸಂಬAಧಿಸಿದ ಸಂಸ್ಥೆಗಳು, ಪೋಷಕರು ಮಗುವನ್ನು ದತ್ತು ಪಡೆಯಲು ನಿಗಧಿ ಪಡಿಸಿದ ಕಾಲಾವಧಿ, ಅಕ್ರಮ ದತ್ತು ಪರಿಣಾಮಗಳು, ದತ್ತು ಕಾರ್ಯಕ್ರಮಗಳನ್ನು ಉತ್ತೇಜಿಸಲು ಕೈಗೊಳ್ಳಬೇಕಾದ ಕ್ರಮಗಳು ಕಾನೂನು ಉಲ್ಲಂಘಿಸಿದರೆ ಬಾಲನ್ಯಾಯ ಕಾಯ್ದೆ-೨೦೧೫ರ ಸೆಕ್ಷನ್ ೮೦ ಮತ್ತು ೮೧ರ ಅನ್ವಯ ಅಪರಾಧವಾಗಿದ್ದು, ೧ ಲಕ್ಷ ದಂಡ ಹಾಗೂ ೫ ವರ್ಷದ ವರೆಗೆ ಜೈಲು ವಾಸ ವಿಧಿಸ ಬಹುದಾಗಿದೆ ಎಂದು ತಿಳಿಸಿದರು.
ಹೋಲಿಕ್ರಾಸ್ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಸಿಸ್ಟರ್ ಗ್ಲೋರಿಯ ಪೆರೇರಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಹನುಮಂತಪ್ಪ ಆರ್, ಸ್ವಾಗತಿಸಿ, ಅಭಿಲಾಷ್ ಎಂ ವಂದಿಸಿದರು.
Unauthorized adoption of children is a punishable offence
Discussion about this post