ಚಿಕ್ಕಮಗಳೂರು: ಕಾಫಿನಾಡಿನಾದ್ಯಂತ ಅಕಾಲಿಕ ಮಳೆ ಮುಂದೂವರೆದಿದ್ದು ಜಿಲ್ಲಾದ್ಯಂತ ಮೋಡಕವಿದ ವಾತವರಣವಿದ್ದು, ಶೀತಗಾಳಿಯೊಂದಿಗೆ ಜಿಟಿಜಿಟಿ ಮಳೆಯಾಗಿದೆ.
ಮಲೆನಾಡು ತಾಲ್ಲೂಕುಗಳಾದ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಮೂಡಿಗೆರೆ ಭಾ ಗದಲ್ಲಿ ಮೋಡಕವಿದ ವಾತವರಣದೊಂದಿಗೆ ನಿರಂತರವಾಗಿ ಜಿಟಿಜಿಟಿ ಮಳೆಯಾಗಿದೆ. ಬಯಲುಸೀಮೆ ತಾಲ್ಲೂಕು ಕಡೂರು ಸುತ್ತಮುತ್ತ ಬಾರೀ ಮಳೆಯಾಗಿದ್ದು, ಬೀರೂರು ಮತ್ತು ತರೀಕೆರೆ ಭಾಗದಲ್ಲಿ ಜಿಟಿಜಿಟಿ ಸೋನೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲಾದ್ಯಂತ ಭಾರೀ ಮಳೆಯಾಗಿದ್ದು, ಪ್ರತೀನಿತ್ಯ ಬಿಸಿಲು ಮಳೆಯಾಟವಾಗಿತ್ತು. ಶುಕ್ರವಾರ ಇಡೀ ಜಿಲ್ಲಾದ್ಯಂತ ಮೋಡ ಕವಿದಿದ್ದು, ಬಿಸಿಲಿನ ಸು ಳಿವೆ ಇಲ್ಲದೆ ಶೀತ ವಾತವರಣ ನಿರ್ಮಾಣವಾಗಿದ್ದು, ಜನರು ಮನೆಯಿಂದ ಹೊರ ಬಾರದಂತಾಗಿದೆ.
ಹವಮಾನ ಇಲಾಖೆ ಇನ್ನೂ ಮೂನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದು, ಈಗಾಗಲೇ ನಿರಂತರ ಮಳೆಯಿಂದ ಬೆಂದು ಬೇಸತ್ತಿರುವ ರೈತರು ಮತ್ತು ಬೆಳೆಗಾರರು ನಿತ್ಯ ಕಣ್ಣೀರಿಡುವಂತಾಗಿದೆ. ಮಳೆ ನಿಲ್ಲುವಂತೆ ದೇವರನ್ನು ನಿತ್ಯ ಪ್ರಾರ್ಥಿಸುತ್ತಿದ್ದಾರೆ.
ಮಲೆನಾಡಿನಲ್ಲಿ ಕಾಫಿಬೆಳೆ ಕೊಯ್ಲಿಗೆ ಬಂದಿದ್ದು, ಕಾಫಿಹಣ್ಣು ಗಿಡದಿಂದ ಉದುರುತ್ತಿದ್ದು, ಕಾಫಿಹಣ್ಣು ಕೊಯ್ಲು ನಡೆಸಲು ಮತ್ತು ಒಣಗಿಸಿ ಸಂಸ್ಕರಣೆ ಮಾಡಲು ಸಾಧ್ಯವಾಗದೆ ಬೆಳೆಗಾರರು ಪರದಾಡುತ್ತಿದ್ದಾರೆ. ಕೊಯ್ಲು ನಡೆಸಿದ ಕಾಫಿಬೆಳೆಗಾರರು ಕಾಫಿಬೀಜವನ್ನು ಒಣಗಿಸಲು ಸಾಧ್ಯವಾಗದೆ ಮಳೆಯಿಂದ ರಕ್ಷಿಸಿಕೊಳ್ಳಲು ಮನೆಯ ಒಳಗೆಲ್ಲ ಕಾಫಿಜೀಜ ವನ್ನು ಒಣಗಿಸುತ್ತಿದ್ದು ರೈತರ ಪಾಡುನೋಡಿ ಕರಳು ಹಿಂಡುತ್ತಿದೆ ಬೆವರು ಹರಸಿ ಬೆಳೆದ ಬೆಳೆ ಕಣ್ಣಮುಂದೇ ಹಾಳಾಗುತ್ತಿದ್ದು ಚಿಂತೆಯಲ್ಲೆ ದಿನದೂಡುತ್ತಿದ್ದಾರೆ.
ಅಡಕೆ ಬೆಳೆಕೊಯ್ಲಿಗೆ ಬಂದಿದ್ದು, ಅಕಾಲಿಕ ಮಳೆಯಿಂದ ಗೊನೆ ತೆಗೆಯಲು ಸಾಧ್ಯವಾ ಗದೆ ಅಡಕೆ ಹಣ್ಣಾಗಿ ಉದುರುತ್ತಿದೆ. ಅಡಕೆ ಗೊನೆ ತೆಗೆದವರು ಅಡಕೆ ಒಣಗಿಸಲು ನಿರಂತರ ಮಳೆಯಿಂದ ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಶೆಡ್ಗಳಲ್ಲಿ ಬೆಂಕಿಹಾಕಿ ಅಡಕೆ ಒಣಸುತ್ತಿದ್ದಾರೆ. ಅದು ಸರಿಯಾಗಿ ಒಣಗದೆ, ಕ್ವಾಲೀಟಿಯೂ ಹಾಳಾಗುತ್ತಿದೆ ಬೂಸ್ ಹಿಡಿಯುತ್ತಿದೆ. ಮೂಡಿಗೆರೆ ತಾಲ್ಲೂಕು ನಿಡ್ಗಲ್, ಗಬ್ಗಲ್, ಕೆಳಗೂರು, ಬಾ ಳೂರು, ಸುತ್ತಮುತ್ತ ಬಾರೀ ಮಳೆಯಾಗುತ್ತಿದ್ದು, ಅಕಾಲಿಕ ಮಳೆಯಿಂದ ಬೆಳೆಗಾರರು ಹೈರಾಣಾಗಿದ್ದಾರೆ.
ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಭತ್ತ ಕಟಾವಿಗೆ ಬಂದಿದ್ದು, ಕಟಾವು ಮಾಡಲು ಸಾಧ್ಯವಾಗದೆ ಬೆಳೆ ಭತ್ತದ ಗದ್ದೆಯಲ್ಲೆ ಹಾಳಾಗುತ್ತಿದೆ. ಬಯಲುಸೀಮೆ ಭಾಗದಲ್ಲಿ ತರಕಾರಿ ಬೆಳೆ ಸೇರಿದಂತೆ ಇತರೆ ಬೆಳೆಗಳು ಹಾಳಾಗುತ್ತಿದೆ. ಅಡಕೆ, ತೆಂಗಿನ ತೋಟಗಳಲ್ಲಿ ನೀರು ನಿಂತ್ತಿದ್ದು ಬೆಳೆಗಾರರು ತೋಟಗಳನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಶೀತ ವಾತವರಣ ತೋಟ ಉಳಿಸಿಕೊಳ್ಳುವುದೇ ಸವಾಲು:
ನಿರಂತರ ಮಳೆಯಿಂದ ಶೀತದ ಪ್ರಮಾಣ ಜಾಸ್ತಿಯಾಗಿದ್ದು ಕಾಫಿ, ಅಡಿಕೆ, ಕಾಳುಮೆಣ ಸು ತೋಟಗಳನ್ನು ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಬಾರೀ ಶೀತ ದಿಂದ ತೋಟಗಳಿಗೆ ಕೊಳೆರೋಗ ಭಾದಿಸುವ ಆತಂಕ ರೈತರಲ್ಲಿದೆ. ಶೀತದಿಂದ ಕಾಫಿ ಗಿಡಗಳು, ಅಡಿಕೆ ಗಿಡ, ಕಾಳುಮೆಣಸು ಬಳ್ಳಿಗಳು ಸಾಯುತ್ತಿವೆ. ಅಡಕೆಗೆ ಈಗಾಗಲೇ ಎಲೆಚುಕ್ಕಿರೋಗ, ಹಳದಿ ಎಲೆರೋಗದಿಂದ ತೋಟಗಳು ನಾಶವಾಗಿದ್ದು, ಅಳಿದುಳಿದ ತೋಟಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.
Discussion about this post