ನವದೆಹಲಿ: ನವೆಂಬರ್ 14 ಅನ್ನು ವಿಶ್ವ ಮಧುಮೇಹದ ದಿನವನ್ನಾಗಿ ಆಚರಿಸಲಾಗುತ್ತದೆ. ಮಧುಮೇಹದ ಬಗ್ಗೆ ಜಾಗೃತಿ, ಸಕ್ಕರೆ ಕಾಯಿಲೆ ಇರುವವರು ವಹಿಸಬೇಕಾದ ಕ್ರಮ, ಮಧುಮೇಹ ತಗುಲದಂತೆ ಕೈಗೊಳ್ಳಬೇಕಾದ ಮುಂಜ್ರಾಗೃತ ಕ್ರಮಗಳ ಬಗ್ಗೆ ಈ ದಿನ ಅರಿವು ಮೂಡಿಸಲಾಗುತ್ತದೆ. ಇಂಥದ್ದೆ ಪುಟ್ಟ ಪ್ರಯತ್ನ ಇಲ್ಲಿದೆ. ಈ ಕಾಯಿಲೆ ಬಗ್ಗೆ ಇರುವ ಮಿಥ್ಯೆಯನ್ನು ತೊಡೆದು ಹಾಕಿ ಸರಿಯಾದ ಜಾಗೃತಿ ಮೂಡಿಸಬೇಕಿದೆ.
ಜಾಗತಿಕವಾಗಿ ಅತ್ಯಂತ ವೇಗವಾಗಿ ವೃದ್ಧಿಸುತ್ತಿರುವ ಕಾಯಿಲೆ ಮಧುಮೇಹ. ಮಧುಮೇಹ ತಗುಲಲು ಮುಖ್ಯ ಕಾರಣ ಅಶಸ್ತಿನ ಜೀವನಶೈಲಿ ಮತ್ತು ಹೊಟ್ಟೆಬಾಕತನ ಹಾಗೂ ವಿಪರೀತ ಒತ್ತಡ ಎಂದು ಸಾಮಾನ್ಯವಾಗಿ ವರ್ಗೀಕರಿಸಲಾಗಿದೆ. ಈ ಹಿಂದೆ ಮಧುಮೇಹವು ಸರ್ವೆ ಮಾನ್ಯ 40 ವರ್ಷ ದಾಟಿದವರಿಗೆ ಬರುತ್ತಿತ್ತು. ಈಗ ಇದು 40 ವರ್ಷಕ್ಕಿಂತ ಮೊದಲೇ ಅಮರಿಕೊಳ್ಳುತ್ತಿದೆ. ಮಕ್ಕಳಲೂ ಮಧುಮೇಹ ಕಾಣಿಸಿಕೊಳ್ಳುವುದು ಈಗ ಸಾಮಾನ್ಯವಾಗಿದೆ.
ಭಾರತದಲ್ಲಿ 7.70 ಕೋಟಿ ಮಧುಮೇಹಿಗಳು ಇದ್ದಾರೆ. ಜಾಗತಿಕವಾಗಿ ಎರಡನೇ ದೊಡ್ಡ ರಾಷ್ಟ್ರವೂ ಆಗಿದೆ. 2045ರ ವೇಳೆಗೆ ಭಾರತದಲ್ಲಿ 13.40 ಕೋಟಿ ಮಧುಮೇಹಿಗಳು ಇರಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಅಗತ್ಯಕ್ಕಿಂತ ಕಡಿಮೆ ಇನ್ಸುಲಿನ್ ಬಿಡುಗಡೆ ಅಥವಾ ಇನ್ಸುಲಿನ್ ಪರಿಣಾಮಕಾರಿಯಾಗಿ ಬಳಕೆ ಆಗದಿರುವುದು ಡಯಾಬಿಟಿಸ್ಗೆ ಪ್ರಮುಖ ಕಾರಣ. ಮಧುಮೇಹವನ್ನು ಎರಡು ರೀತಿಯಲ್ಲಿ ವರ್ಗೀಕರಿಸಿದ್ದಾರೆ ಟೈಪ್-1 ಮತ್ತು ಟೈಪ್-2.
ಟೈಪ್-1ನಲ್ಲಿ ದೇಹದಲ್ಲಿ ಇನ್ಸುಲಿನ್ ಬಿಡುಗಡೆಯೇ ಆಗುವುದಿಲ್ಲ. ಇಂಥ ಲಕ್ಷಣ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಟೈಪ್-2ರಲ್ಲಿ ಇನ್ಸುಲಿನ್ಗೆ ದೇಹ ಸ್ಪಂದಿಸುವುದಿಲ್ಲ ಅಥವಾ ಇನ್ಸುಲಿನ್ ಸಾಕುವುದಿಲ್ಲ. ಈ ಮಾದರಿಯ ಸಕ್ಕರೆ ಕಾಯಿಲೆ ಆನುವಂಶೀಯವಾಗಿಯೂ ಬರುತ್ತದೆ. ಮೊದಲೇ ಹೇಳಿದಂತೆ ಅಶಸ್ತಿನಿಂದಲೂ ತಗುಲುತ್ತದೆ. ಆನುವಂಶೀಯವಾಗಿ ಡಯಾಬಿಟಿಸ್ ಇರುವ ಚರಿತ್ರೆ ಇದ್ದರೆ ಅಂತಹವರು ಮೊದಲೇ ಎಚ್ಚುತ್ತುಕೊಂಡು ಆಹಾರ, ವ್ಯಾಯಮ ಶಿಸ್ತನ್ನು ಮಾಡಬೇಕು. ಶಿಸ್ತಿನ ಜೀವನ ಶೈಲಿಗೆ ಆಹಾರ ಕ್ರಮ, ವ್ಯಾಯಮ ತೀರಾ ಅಗತ್ಯ ಎಂಬುದು ನೆನಪಿರಲಿ.
ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ ಅದರಿಂದ ಹೃದ್ರೋಗ ತಗುಲುವ ಸಾಧ್ಯತೆ ಹೆಚ್ಚು, ಕಿಡ್ನಿ ಸಮಸ್ಯೆ ಕಾಡಬಹುದು, ದೃಷ್ಟಿ ನಾಶ, ಪಾರ್ಶ್ವವಾಯುಗೆ ತುತ್ತಾಗಬಹುದು. ಗಾಯಗಳು ಮಾಯದಿದ್ದರೆ ಗ್ಯಾಂಗ್ರೀನ್ ಆಗುತ್ತದೆ. ಹೀಗಾಗಿ ಮಧುಮೇಹಕ್ಕೆ ಆಹ್ವಾನ ನೀಡಬೇಡಿ.
Diabetes Fastest Growing Disease
ಇದನ್ನು ಓದಿ: ದೇಶದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಳ
ಇದನ್ನು ಓದಿ: Heart attack: ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತಡೆಯುವುದು ಹೇಗೆ ?
Discussion about this post