ಚಿಕ್ಕಮಗಳೂರು: ಅಕ್ರಮ ತಡೆಗೆ ದೇಶದಲ್ಲೇ ಇದೇ ಪ್ರಥಮ ಬಾರಿಗೆ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಭಾನುವಾರ ಲಿಖಿತ ಪರೀಕ್ಷೆ ನಡೆಯಿತು. ಜಿಲ್ಲೆಯಲ್ಲಿ ೬ ಸಾವಿರ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆದಿದ್ದು ನಗರದಲ್ಲಿ ೧೨ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು.
ಪರೀಕ್ಷೆಯಲ್ಲಿ ಡಮ್ಮಿ ಅಭ್ಯರ್ಥಿ ಬಂದು ಪರೀಕ್ಷೆ ಬರೆಯುವುದು, ನಕಲು ಮಾಡುವುದು ಮತ್ತಿತರೆ ಅಕ್ರಮ ತಡೆಗಟ್ಟುವ ಉದ್ದೇಶದಿಂದ ದೇಶ ಮತ್ತು ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.
ಬಯೋಮೆಟ್ರಕ್ ದತ್ತಾಂಶವನ್ನು ವ್ಯವಸ್ಥಿತವಾಗಿ ದಾಖಲಿಸಲು ೯೦ ಮಂದಿ ಅಕಾರಿ,ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಭ್ಯರ್ಥಿಗಳ ಭಾವಚಿತ್ರ, ಎಡಗೈ ಮತ್ತು ಬಲಗೈ ಬೆರಳುಗಳ ಅಚ್ಚು ಪಡೆದು ಅವರ ಡಾಟಾ ಬೇಸ್ದಾಖಲಿಸಿದ ನಂತರವೇ ಅಭ್ಯರ್ಥಿಗಳನ್ನು ಕೇಂದ್ರದ ಒಳಬಿಡಲಾಯಿತು. ರಾಜ್ಯಾದ್ಯಂತ ಇಂದು ಪೊಲೀಸ್ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ೪ ಲಕ್ಷ ಮಂದಿ ಪಾಲ್ಗೊಂಡಿದ್ದು ಜಿಲ್ಲೆಯಲ್ಲಿ ೬ ಸಾವಿರ ಮಂದಿ ಪರೀಕ್ಷೆ ಬರೆದರು.
ನಗರದ ಎಐಟಿ ಕಾಲೇಜು, ಎಂಇಎಸ್, ಐಡಿಎಸ್ಜಿ, ಎಸ್ಟಿಜೆ , ಸರಕಾರಿ ಜ್ಯೂನಿಯರ್ ಕಾಲೇಜು,ಸರಕಾರಿ ಜ್ಯೂನಿಯರ್ ಕಾಲೇಜು ಪ್ರೌಢಶಾಲೆ ವಿಭಾಗ, ಟಿಎಂಎಸ್, ಬಸವನಹಳ್ಳಿ ಸರಕಾರಿ ಮಹಿಳಾ ಕಾಲೇಜು, ಸರಕಾರಿ ಮಹಿಳಾ ಪಿಯು ಕಾಲೇಜು, ಸಂತಜೋಸೆಫರ್ ಪ್ರೌಢಶಾಲೆ, ಸಂತಜೋಸೆಫರ ಕಾಲೇಜು, ಜೆವಿಎಸ್ ಪ್ರೌಢಶಾಲೆ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದರು.
ಆಯಾ ಕಾಲೇಜಿನ ಕೊಠಡಿ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭ್ಯರ್ಥಿಗಳನ್ನು ಕೂರಿಸಲಾಗಿತ್ತು. ಕೇಂದ್ರದ ಹೊರಗೆ ಸ್ಯಾನಿಟೈಸರ್ ನೀಡಿ ಮಾಸ್ಕ್ ಹಾಕಿದ ಬಳಿಕವೇ ಕೇಂದ್ರದ ಒಳಗೆ ಬಿಡಲಾಯಿತು. ಪರೀಕ್ಷಾ ಕೊಠಡಿಯಲ್ಲಿ ಪರಸ್ಪರ ೬ ಅಡಿ ಅಂತರದಲ್ಲಿ ಕೂರಿಸುವ ಮೂಲಕ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.
ಕೇಂದ್ರದ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಿತ್ತು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಎಸ್ಪಿ ಎಂ.ಎಚ್.ಅಕ್ಷಯ್ ಮತ್ತು ಇತರೆ ಅಕಾರಿಗಳು ಎಲ್ಲ ಪರೀಕ್ಷಾ ಕೆಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
RSS: ಆರ್.ಎಸ್.ಎಸ್.ನಿಂದ ಆಕರ್ಷಕ ಪಥ ಸಂಚಲನ

























Discussion about this post