ಚಿಕ್ಕಮಗಳೂರು: ಸರ್ಕಾರ ಯುವಜನತೆಯನ್ನು ಕೃಷಿಗೆ ಉತ್ತೇಜಿಸುವುದರ ಜೊತೆಗೆ ಕೌಶಲ್ಯಯುತ ತರಬೇತಿ ನೀಡುವ ಮೂಲಕ ವಿವಿಧ ಉದ್ಯಮಗಳಲ್ಲಿಯೂ ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅಭಿಪ್ರಾಯಿಸಿದರು.
ಅವರು ನಗರದ ಎಐಟಿ ಕಾಲೇಜು ಬಿಜಿಎಸ್ ಸಭಾಂಗಣದಲ್ಲಿ ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೂತನ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರವು ಯುವಜನತೆಗೆ ಮನದಲ್ಲಿ ಕೃಷಿಯು ಲಾಭದಾಯಕ ಎಂಬ ಮನೋಭಾವನೆಯನ್ನು ಮೂಡಿಸಬೇಕು, ಕೃಷಿಯಿಂದ ದುಪ್ಪಟ್ಟು ಆದಾಯ ಗಳಿಸಬಹುದು ಎಂಬುದನ್ನು ಮನವರಿಕೆ ಮಾಡಬೇಕು. ಅದಕ್ಕಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಉತ್ತೇಜನ ನೀಡಬೇಕಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಜಿಲ್ಲೆಯು ಪ್ರಾಕೃತಿಕವಾಗಿ, ಭೌಗೋಳಿಕವಾಗಿ ಹಲವು ಸಂಪನ್ಮೂಲಗಳನ್ನು ಒಳಗೊಂಡಿದ್ದು ಸಮರ್ಪಕವಾಗಿ ಬಳಕೆಯಾಗಬೇಕು, ಯುವಜನತೆ ಕೃಷಿ, ಉದ್ಯಮಗಳಲ್ಲಿ ತೊಡಗಲು ಸರ್ಕಾರ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಹೆಚ್ಚಿನ ಪ್ರೇರಣೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಯುವಜನತೆಗೆ ಅನುಕೂಲವಾಗುವಂತೆ ಕೌಶಲ್ಯಯುತ ತರಬೇತಿಗಳನ್ನು ನೀಡಿ ಉದ್ಯೋಗಕ್ಕೆ ಹಣಿಗೊಳಿಸಬೇಕು, ಕೈಗಾರಿಗಳು, ಸಣ್ಣ ಉದ್ಯಮಗಳು ಸ್ಥಾಪನೆಗೊಂಡಲ್ಲಿ ಜಿಲ್ಲೆಯು ಅಭಿವೃದ್ಧಿಯಾಗುವುದರ ಜೊತೆಗೆ ಹೆಚ್ಚಿನ ಉದ್ಯೋಗವಕಾಶಗಳಿಗೆ ದಾರಿಯದಾಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಉದ್ಯಮ ಸ್ಥಾಪನೆಗೆ ಮೂಲ ಕಾರಣ ಜಾಗದ ಸಮಸ್ಯೆ, ಈ ಬಗ್ಗೆ ಸರ್ಕಾರ ಗಮನಹರಿಸಬೇಕು, ಯುವ ಜನತೆಗೆ ಉದ್ಯಮ ನಡೆಸಲು ಜೊತೆಗೆ ಕೃಷಿ ಸಂಸ್ಕರಣ ಘಟಕಗಳ ಸ್ಥಾಪನೆ ಒಳಗೊಂಡಂತೆ ಮತ್ತಿತ್ತರ ಕಾರ್ಯಗಳಿಗೆ ಪ್ರೇರಪಣೆ ನೀಡಿ ಅವಕಾಶ ನೀಡಿದ್ದಲ್ಲಿ ಆರ್ಥಿಕವಾಗಿ ಸದೃಢವಾಗುವುದಲ್ಲದೇ ಹೆಚ್ಚಿನ ಜಿಲ್ಲೆಯು ಪ್ರಗತಿ ಸಾಧಿಸಲಿದೆ ಎಂದರು.
ಬೆಂಗಳೂರು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ,ಸುಂದರ್ ಮಾತನಾಡಿ ಜಿಲ್ಲೆಯು ಪ್ರಾಕೃತಿಕವಾಗಿ ಚಾರಿತ್ರಿಕ ಹಾಗೂ ಐತಿಹಾಸಿಕ ವಿಶೇಷತೆ ಒಳಗೊಂಡಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಿಲ್ಲೆಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ದತ್ತಪೀಠ, ಮುಳ್ಳಯ್ಯನಗಿರಿ, ಕುದುರೆಮುಖ, ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಇದು ಹೊರದೇಶಗಳಿಗಿಂತಲೂ ಭಿನ್ನತೆ ಹೊಂದಿದ್ದು ಇಲ್ಲಿನ ಪ್ರವಾಸೋಧ್ಯಮ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧೀಯಾಗಬೇಕಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಂಬಾರು ಪದಾರ್ಥಗಳನ್ನು ಬೆಳೆಯುವ ಕಾರಣಕ್ಕೆ ಸ್ಪೈಸ್ ಪಾರ್ಕ್ ನಿರ್ಮಾಣ ಸ್ಥಾಪಿಸಲು ಬೇಡಿಕೆ ಇದೆ. ಇದಕ್ಕಾಗಿ ೧೦ ಎಕರೆ ಜಾಗ ಗುರುತಿಸಿದ್ದು ಕಾಮಗಾರಿ ಶೀಘ್ರಗತಿಯಲ್ಲಿ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಆಹಾರ ಸಂಸ್ಕರಣ ಘಟಕಗಳನ್ನು ತೆರೆಯಬೇಕು, ಬೆಳವಾಡಿ, ಅಮೃತಾಪುರ, ಶೃಂಗೇರಿ ಮತ್ತೀತರ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಸಲು ತಜ್ಞರಿಂದ ಯೋಜನಾ ವರದಿ ತಯಾರಿಸಿ ಆದ್ಯತೆ ಮೇರೆಗೆ ಪ್ರವಾಸಿ ಮೂಲ ಸೌಕರ್ಯ ಒದಗಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಾಜಿ ಅಧ್ಯಕ್ಷ ಸುಧಾಕರ್ಶೆಟ್ಟಿ ಮಾತನಾಡಿ ಜಿಲ್ಲೆ ಭೌಗೋಳಿಕ ಬಹಳ ವಿಸ್ತೀರ್ಣವಾಗಿದೆ ಆದರೆ ದುರಾದೃ?ವಶಾತ್ ಇಲ್ಲಿ ಯಾವುದೇ ಬೃಹತ್ ಕೈಗಾರಿಕೆ ಅಥವಾ ತಂತ್ರಜ್ಞಾನ ಕಂಪನಿಗಳಾಗಲಿ ಇಲ್ಲ ಕಾರಣ ಈ ಭಾಗದಲ್ಲಿ ಉದ್ಯಮಿಗಳ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಬಹುದೊಡ್ಡ ಯೋಜನೆಗಳು ಮೆಟ್ರೋ ನಗರಗಳಲ್ಲಿ ಬಂಧಿಯಾಗಿವೆ ಅಲ್ಲದೆ ಸರ್ಕಾರ ತಂದ ಅನೇಕ ಯೋಜನೆಗಳು ಗ್ರಾಮೀಣ ಪ್ರದೇಶವನ್ನು ಮುಟ್ಟದಿರುವುದು ಈ ದೇಶದ ಬಹು ದೊಡ್ಡ ದುರಂತ ಕಥೆಯಾಗಿದೆ. ನಮ್ಮ ಭಾಗದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ ಆದರೆ ಉದ್ಯೋಗವಕಾಶಗಳ ಕೊರತೆ ಇದೆ ಇಂದಿನ ಯುವಕರು ಸರ್ಕಾರದ ಯೋಜನೆಗಳಾದ ಸ್ಟಾಟ್ ಆಫ್ ಇಂಡಿಯಾ, ಸ್ಟ್ಯಾಂಡ್ ಆಫ್ ಇಂಡಿಯಾ, ಮೇಕ್ ಇನ್ ಇಂಡಿಯಾ ಹೀಗೆ ಹಲವಾರು ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಚಿಕ್ಕಮಗಳೂರು ಎಫ್ಕೆಸಿಸಿಸಿ ಅಧ್ಯಕ್ಷ ಮಹೇಶ್ ಕೈಗಾರಿಕೆಗಳ ಸ್ಥಾಪನೆಯಲ್ಲಿ ಜಿಲ್ಲೆಯ ಹಿಂದೆ ಬಿದ್ದಿದೆ, ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಉದ್ಯಮಕ್ಕೆ ಆದ್ಯತೆ ನೀಡಿರುವ ಕಾರಣ ಇತರೆ ಕ್ಷೇತ್ರಗಳನ್ನು ಕಡೆಗಣಿಸಿದಂತೆ ಕಾಣುತ್ತದೆ ಆ ನಿಟ್ಟಿನಲ್ಲಿ ಜಿಲ್ಲೆಯು ಸಮಗ್ರವಾಗಿ ಅಭಿವೃದ್ಧಿ ಸಾಧಿಸಬೇಕು, ಇಲ್ಲಿನ ಯುವಜನತೆಗೆ ಉದ್ಯೋಗವಾಕಾಶಗಳನ್ನು ಹೆಚ್ಚಿಸಬೇಕು, ಅದಕ್ಕಾಗಿ ಕೌಶಲ್ಯಯುತ ತರಬೇತಿ ಕೇಂದ್ರಗಳ ಅಗತ್ಯವಿದೆ ಎಂದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕೈಜೋಡಿಸಬೇಕು, ಸೂಕ್ತ ಸ್ಪಂದನೆ ದೊರೆತಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಐಎಸ್ ಪ್ರಸಾದ್, ಎಫ್ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಗೋಪಾಲ್ ರೆಡ್ಡಿ, ಎಐಟಿ ಕಾಲೇಜು ಪ್ರಾಂಶುಪಾಲ ಜಯದೇವ್, ಶಂಕರಪ್ಪ, , ಶಾಂತಾರಾಮ್ ಹೆಗ್ಡೆ, ಜಂಟಿ ಕಾರ್ಯಾದರ್ಶಿ ಶಿವಣ್ಣ, ಕಾರ್ತಿಕ್ ಕುಮಾರ್, ನಿಂಗೇಗೌಡ್ರು, ಅಕ್ಕಿ ವೆಂಕಟೇಶ್, ರಿಯಾಜ್ ಅಹಮದ್, ಎಂ.ಎಸ್. ವಿಜಯೇಂದ್ರ, ನಿರ್ಮಲ್ಕುಮಾರ್, ಆನಂದ್ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.

























Discussion about this post