ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಆಚರಿಸುವ ದುರ್ಗಾ ಪೂಜೆಯನ್ನು ಮನುಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ವಿಶ್ವಸಂಸ್ಥೆಯ ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ಗುರುತಿಸಿದೆ. ಡಿ. 13ರಿಂದಿ ಪ್ಯಾರಿಸ್ನಲ್ಲಿ ಶುರುವಾಗಿರುವ 18ರವರೆಗೆ ನಡೆಯುವ 16ನೇ ಅಧಿವೇಶನದಲ್ಲಿ ದುರ್ಗಾ ಪೂಜೆ ಪ್ರದರ್ಶನಕ್ಕೂ ಯುನೆಸ್ಕೊ ಸ್ಥಾನ ಕಲ್ಪಿಸಿದೆ. ಈ ಗೌರವು ದುರ್ಗಾ ಪೂಜೆಗೆ ಬುಧವಾರ ಪ್ರಾಪ್ತವಾದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಹಬ್ಬದ ಆಚರಣೆಗೆ ಟಿಎಂಸಿ ಆಡಳಿತ ಅಡ್ಡಿ ಮಾಡುತ್ತಿದೆ ಎಂದು ಬೊಬ್ಬೆ ಇಟ್ಟವರು ಈಗ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂದು ಹೇಳಿದ್ದಾರೆ.
ಕಳೆದ ಮಾರ್ಚ್/ಏಪ್ರಿಲ್ ವೇಳೆ ನಡೆದ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲವರು ಟಿಎಂಸಿ ಮತ್ತೆ ಅಧಿಕಾರಕ್ಕೆ ಬಂದರೆ ದುರ್ಗಾ ಪೂಜೆಗೆ ಅವಕಾಶ ಇರುವುದಿಲ್ಲ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಈಗ ಅವರಿಗೆ ಮುಖಭಂಗವಾಗಿದೆ. ಅವರ ಇಬ್ಬದಿಯ ನೀತಿ ಬಯಲಾಗಿದೆ. ಯುನೆಸ್ಕೊ ನಮ್ಮ ದುರ್ಗಾ ಮಾತೆಯ ಹಬ್ಬವನ್ನು ಗೌರವಿಸಿರುವುದು ಇಡಿ ನಾಡಿಗೆ ಹೆಮ್ಮೆಯ ವಿಷಯ ಎಂದು ಕೋಲ್ಕತ ನಗರಪಾಲಿಕೆಯ ಚುನಾವಣಾ ಪ್ರಚಾರದಲ್ಲಿ ಮಮತಾ ಹೇಳಿದ್ದಾರೆ.
ಈಗ ದುರ್ಗಾ ಪೂಜೆಗೆ ಯುನೆಸ್ಕೊದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಶ್ರೇಯ ಸಿಗುವುದರೊಂದಿಗೆ ಇಂಥ ಗೌರವ ಭಾರತ 14ನೇ ಸಾಂಪ್ರದಾಯಿಕ ಆಚರಣೆ ಇದಾಗಿದೆ. ಇದಕ್ಕೂ ಮೊದಲು ಕುಂಭ ಮೇಳ (2017), ಯೋಗ (2016)ಗಳು ಈ ಶ್ರೇಯಕ್ಕೆ ಭಾಜನವಾಗಿವೆ.
Should Be Ashamed: Mamata Banerjee’s Jibe At BJP After Durga Puja Gets UNESCO Tag
ಇದನ್ನು ಓದಿ: ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ರಾಜ್ಯಕ್ಕೆ ಸಂಬಂಧಿಸಿದ್ದು: ಮಮತಾ ಬ್ಯಾನರ್ಜಿ
ಇದನ್ನೂ ಓದಿ: ಯುನೆಸ್ಕೊ ಸೃಜನಾತ್ಮಕ ನಗರದ ಪಟ್ಟಿಗೆ ಸೇರಿದ ಶ್ರೀನಗರ
Discussion about this post