- ತ್ರಿಕೋನ ಸ್ಪರ್ಧೆಯಲ್ಲಿ ಚುನಾವಣಾ ಅಖಾಡ
- ಭವಾನಿಪುರದ ಮತದಾರ ಯುವಶಕ್ತಿಗೆ ಒಲಿಯುವನೆ?
ಪಶ್ಚಿಮ ಬಂಗಾಳ: ಇಡೀ ದೇಶದ ಗಮನ ಸೆಳೆಯುತ್ತಿರುವ ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ದೀದಿ ತಾಲೀಮು ನಡೆದೇ ಇದೆ. ತೃಣಮೂಲ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ ವಕೀಲೆ ಪ್ರಿಯಾಂಕ ಟಿಬ್ರೂವಾಲ್ ಅಖಾಡಕ್ಕೆ ಇಳಿದಿದ್ದಾರೆ.
ಇದೇ ೩೦ಕ್ಕೆ ಚುನಾವಣೆ, ಅಕ್ಟೋಬರ್ ೩ಕ್ಕೆ ಫಲಿತಾಂಶ. ಮೂರು ಪಕ್ಷಗಳ ಜಿದ್ದಾಜಿದ್ದಿಯಲ್ಲಿ ಯಾರದು ಗೆಲುವು ಎಂದು ದೇಶವೇ ಕುತೂಹಲದಿಂದ ನೋಡುತ್ತಿದೆ. ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡುತ್ತಿದ್ದಂತೆಯೇ ಭವಾನಿಪುರದ ಅಖಾಡದಲ್ಲಿ ಜೋರಾಗೇ ತಾಲೀಮು ನಡೆಯುತ್ತಿದೆ.
ಇದೇ ತಿಂಗಳು ೩೦ರಂದು ನಡೆಯಲಿಯೋ ಚುನಾವಣೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಗೆಲ್ಲದೆ ವಿಧಿಇಲ್ಲ ದೀದಿಗೆ ಬಿಜೆಪಿಯಿಂದ ಅಖಾಡಕ್ಕೆ ಯಾರು ಎಂಬ ಪ್ರಶ್ನೆಗೆ ಈಗ ತೆರೆ ಬಿದ್ದಿದ್ದು, ವಕೀಲೆ ಪ್ರಿಯಾಂಕ ಟಿಬ್ರೂವಾಲ್ ಬಿಜೆಪಿಯಿಂದ ಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
೨೦೧೪ರಲ್ಲಿ ಬಿಜೆಪಿಗೆ ಬಂದ ಪ್ರಿಯಾಂಕ ಪಕ್ಷದ ಬಾಬುಲ್ ಸುಪ್ರಿಯೊ ಅವರ ಕಾನೂನು ಸಲಹೆಗಾರರಾಗಿದ್ದರು. ಕಳೆದ ವರ್ಷ ಬಿಜೆಪಿ ಮಹಿಳಾ ಮೋರ್ಚಾದ ಪಶ್ಚಿಮ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದರು. ಕೋಲ್ಕತಾ ಮಹಾನಗರ ಪಾಲಿಕೆಯ ೨೦೦೧೫ರ ಎಂಟಾಲಿ ವಾರ್ಡ್ ಹಾಗೂ ೨೦೨೧ರ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರೂ, ಮತದಾರರ ಜೊತೆಗೆ ಉತ್ತಮ ಸಂಪರ್ಕ ಹೊಂದಿದ್ದಾರೆ ಎನ್ನುವುದು ಅವರ ಪ್ಲಸ್ ಪಾಯಿಂಟ್ ಆಗಿದೆ.
ಯುವ ನಾಯಕತ್ವದ ನಿರೀಕ್ಷೆಯಲ್ಲಿರೋ ಭವಾನಿಪುರಕ್ಕೆ ಬಿಜೆಪಿ ಯೋಜಿಸಿಯೇ ಪ್ರಿಯಾಂಕ್ ಅವರ ಆಯ್ಕೆ ಮಾಡಿದೆ. ಮಮತಾ ಬ್ಯಾನರ್ಜಿ ವಿದ್ಯುಕ್ತವಾಗಿ ನಾಮಪತ್ರ ಸಲ್ಲಿಸುತ್ತಿದ್ದಂತೆಯೇ ಕಾಂಗ್ರೆಸ್ ಕಣದಿಂದ ಹಿಂದೆ ಸರಿದಿದ್ದು, ಸಿಪಿಐ (ಎಂ) ಮಾತ್ರ ಸ್ಪರ್ಧೆ ಮಾಡಲಿದ್ದು, ವಕೀಲ ಶ್ರೀಜಿಬ್ ಬಿಸ್ವಾಸ್ ಅವರನ್ನು ಕಣಕ್ಕೆ ಇಳಿಸಲು ಯೋಜನೆ ನಡೆಸಿದೆ.
Discussion about this post