ಚಿಕ್ಕಮಗಳೂರು : ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಹೆಚ್.ಎಲ್. ನಾಗರಾಜ್ ಅವರನ್ನು ಪದೋನ್ನತಿ ಮೂಲಕ ಬಡ್ತಿ ನೀಡಿ ಮಂಗಳೂರಿನ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾ ಮಾಡಲಾಗಿದೆ.
ಇಲ್ಲಿನ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೆರೆಗಳ ಸಂರಕ್ಷಣೆ, ಹಾಗೂ ಕಂದಾಯ ಜಮೀನು ಬಾಕಿ ಪ್ರಕರಣಗಳನ್ನು ವಿಶೇಷ ಗಮನ ಹರಿಸಿ ಶೀಘ್ರವಾಗಿ ಇತ್ಯರ್ಥಗೊಳಿಸುವ ಮೂಲಕ ಭಾರೀ ಜನಮನ್ನಣೆ ಗಳಿಸಿದ್ದರು.
ವಿಷನ್ ಚಿಕ್ಕಮಗಳೂರು ಎನ್ನುವ ತಂಡವನ್ನು ರಚಿಸುವ ಮೂಲಕ ಕೆರೆಗಳ ಒತ್ತುವರಿ ತೆರವುಗೊಳಿಸಿ ಜಲಮೂಲಗಳ ಸಂರಕ್ಷಣೆ, ಅಭಿವೃದ್ಧಿ ಆದ್ಯತೆ ನೀಡಿದ್ದರು.
ಇದೀಗ ಮಂಗಳೂರಿನ ಅಪರ ಜಿಲ್ಲಾಧಿಕಾರಿಯಾಗಿ ಬಡ್ತಿ ದೊರಕಿರುವುದು ಸಂತಸ ತಂದಿದೆ. ಆದರೂ ದಕ್ಷ, ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾ ಮಾಡಬಾರದಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ.
Discussion about this post