ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಎರಡು ಬ್ಯಾಂಕ್ಗಳನ್ನು ಖಾಸಗಿಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಗುರುವಾರದಿಂದ ಎರಡು ದಿನ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಮುಷ್ಕರದಿಂದ ಸೇವೆಗಳು ದೊರೆಯದ ಕಾರಣ ಗ್ರಾಹಕರು ಪರದಾಡುವಂತಾಗಿದೆ. ನಗದು ಹಿಂಪಡೆಯುವಿಕೆ, ಸಾಲ ಬಟವಾಡೆಯಂತಹ ಅತಿ ಮಹತ್ವಕಾರ್ಯಗಳು ಸ್ಥಗಿತವಾಗಿದೆ. ಗುರುವಾರ ಒಂದೇ ದಿನ 18,600 ಕೋಟಿ ರೂಪಾಯಿ ಮೌಲ್ಯದ 20.40 ಲಕ್ಷ ಚೆಕ್ಗಳು ವಿಲೇವಾರಿಗೆ ಅಡಚಣೆ ಆಗಿದೆ. ಶುಕ್ರವಾರ ಕೂಡ ಬ್ಯಾಂಕ್ ಬಂದ್ ಇರುವುದರಿಂದ ಚೆಕ್ ವಿಲೇವಾರಿ ಇನ್ನಷ್ಟು ಜಟಿಲವಾಗಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಬ್ಯಾಂಕ್ ಬಂದ್ ಬಗ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಿ, ಸಹಕರಿಸುವಂತೆ ಕೋರಿದ್ದವು.
ಕೇಂದ್ರ ಸರ್ಕಾರದ ಹಟಮಾರಿತನದಿಂದ ಗ್ರಾಮೀಣ ಬ್ಯಾಂಕ್ ಸೇರಿ 1 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳು ಗುರುವಾರ ಮುಚ್ಚಿದ್ದವು ಎಂದು ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯದತ್ತಾ ತಿಳಿಸಿದ್ದಾರೆ.
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಕಾರ್ಮಿಕರ ಅಸೋಸಿಯೇಷನ್ (ಎಐಬಿಇಎ), ರಾಷ್ಟ್ರೀಯ ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್ಒಬಿಡಬ್ಲ್ಯೂ) ಸೇರಿ ಒಂಬತ್ತು ಸಂಘಟನೆಗಳ ಛಾತ್ರವಾದ ಯುಎಫ್ಬಿಯು ಮುಷ್ಕರಕ್ಕೆ ಕರೆ ನೀಡಿದೆ.
2021-22ರ ಬಜೆಟ್ನಲ್ಲಿ ಎರಡು ಬ್ಯಾಂಕ್ಗಳನ್ನು ಖಾಸಗಿಕರಣ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದನ್ನು ಹಿಂಪಡೆಯುವಂತೆ ಬ್ಯಾಂಕ್ ನೌಕರರು ಒತ್ತಾಯಿಸುತ್ತಿದ್ದಾರೆ.
Two Day Banl Strike, Services Hit Across India
ಇದನ್ನು ಓದಿ: ಹೆಚ್ಚಿನ ಲಾಭಕ್ಕಾಗಿ ಹೂಡಿಕೆ ಮಾಡುವಾಗ ಠೇವಣಿದಾರರು ಎಚ್ಚರ ವಹಿಸಬೇಕು: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್
ಇದನ್ನೂ ಓದಿ: 1300 ಕೋಟಿ ರೂಪಾಯಿ: ಆರ್ಥಿಕ ಸಂಕಷ್ಟದ ಬ್ಯಾಂಕ್ ಗಳ ಠೇವಣಿದಾರರಿಗೆ ಕೇಂದ್ರದಿಂದ ಸಿಕ್ಕ ಹಣ
Discussion about this post