ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣ ಸಮೀಪದ ಬಿಳಗುಲದ ಹೊರವಲಯದ ಅಜ್ಞಾತ ಸ್ಥಳದಲ್ಲಿ ನ ಪೊದೆಯೊಂದರಲ್ಲಿ ನವಜಾತ ಶಿಶುವೊಂದು ಅಳುತ್ತಿದ್ದು, ಸ್ಥಳೀಯರು ಮಗುವನ್ನು ರಕ್ಷಿಸಿದ ಘಟನೆ ನಡೆದಿದೆ.
ಮಗುವಿನ ಅಳು ತಾರಕ್ಕೇರಿದಾಗ ಸ್ಥಳೀಯರಾದ ಚಂದ್ರು ಮತ್ತಿತರರು ಹುಡುಕಿ ನೋಡಿದಾಗ ನವಜಾತ ಶಿಶು ಕಂಡಿದೆ. ತಕ್ಷಣ ನಜೀರ್ ಮತ್ತುಹರೀಶ್ ಸಹಾಯದಿಂದ ಆ ಗಂಡು ಮಗುವನ್ನು ಆಸ್ಪತ್ರೆಗೆ ಸೇರಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವ್ಯಕ್ತಿಯೊಬ್ಬನ ಮೇಲೆ ಅನುಮಾನ ಬಂದಿದ್ದು, ಮಗುವಿನ ಮಾಹಿತಿ ಆಧರಿಸಿ ಪಾಲಕರ ಪತ್ತೆ ಹಚ್ಚಲಾಗಿದೆ. ಇದರ ಜೊತೆಗೆ ತನಿಖೆ ಸಹ ಜಾರಿಯಲ್ಲಿದೆ.
Discussion about this post