ಅಮರಾವತಿ: ‘ವೈಎಸ್ಆರ್ ಕಾಂಗ್ರೆಸ್ ಪಕ್ಷದವರು ಪದೇ ಪದೆ ಅವಮಾನ ಮಾಡುತ್ತಿದ್ದಾರೆ. ಪಕ್ಷ ಮತ್ತು ನನ್ನನ್ನು ಟೀಕಿಸಿದ್ದಾರೆ. ಈಗ ನನ್ನ ಕುಟುಂಬದವರನ್ನು ಗುರಿಯಾಗಿಟ್ಟಿಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಇವರ ಕಾಟದಿಂದ ರೋಸಿ ಹೋಗಿದ್ದೇನೆ. ಮುಂದಿನ ಚುನಾವಣೆಯಲ್ಲಿ ಟಿಡಿಪಿ ಗೆದ್ದ ನಂತರವೇ ವಿಧಾನಸಭೆ ಪ್ರವೇಶಿಸುವೆ ಎಂದು’ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ ಮಾಡಿದ್ದಾರೆ.
‘ರಾಜಕೀಯದಲ್ಲಿ ಟೀಕೆ-ಟಿಪ್ಪಣಿ ಸಹಜ ಆದರೆ, ಇದಕ್ಕೆ ಕುಟುಂಬದವರನ್ನು ಎಳೆತರುವುದು ಸಂಸ್ಕಾರವಂತರ ಲಕ್ಷಣ ಅಲ್ಲ. ನನ್ನ ಪತ್ನಿ ಭುವನೇಶ್ವರಿ ವಿರುದ್ಧ ಅಪಮಾನಕರ ಟೀಕೆಗಳನ್ನು ಕೇಳಿದ್ದೇನೆ. ಇದೆಂತಹ ಮೌಲ್ಯಯುತ ರಾಜಕಾರಣ? ನಾನು ಘನತೆಯಿಂದ ಬದುಕಿದವನ್ನು ಮತ್ತು ಅದಕ್ಕಾಗಿಯೇ ಜೀವಿಸುತ್ತಿರುವವನು. ಇನ್ಮುಂದೆ ಇದನ್ನೆಲ್ಲ ಸಹಿಸಲಾಗದು’ ಎಂದು ಶುಕ್ರವಾರ ವಿಧಾನಸಭೆಯಲ್ಲಿ ಹೇಳಿದ್ದ ನಾಯ್ಡು ನಂತರ ಪತ್ರಿಕಾಗೋಷ್ಠಿಯಲ್ಲಿ ಇದೇ ಮಾತನ್ನ ಆಡಿ ಕಣ್ಣೀರು ಹಾಕಿದ್ದಾರೆ.
“ಪತ್ನಿಯ ಬಗ್ಗೆ ಮಾಡಿದ ಟೀಕೆಯ ಕುರಿತು ಮಾತನಾಡುತ್ತಿದ್ದಾಗ ಸ್ಪೀಕರ್ ಟಿ.ಸೀತಾರಾಮ್ ನನ್ನ ಮೈಕ್ ಅನ್ನು ಸ್ಥಗಿತಗೊಳಿಸಿದರು. ಇದಕ್ಕಿಂತ ಅವಮಾನ ಬೇಕಾ? ವಿಧಾನಸಭೆಗೆ ಕಾಲಿಡುವುದಾದರೆ ಸಿಎಂ ಆಗಿಯೇ ಪ್ರವೇಶಿಸುವೆ’ ಎಂದಿದ್ದಾರೆ.
ನಾಯ್ಡು ಈ ಹೇಳಿಕೆಯನ್ನು ಟೀಕಿಸಿರುವ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ನಾಯಕರು, ಪ್ರತಿಪಕ್ಷದ ಮುಖಂಡರು ಇನ್ನೊಂದು ನಾಟಕ ಶುರುಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
‘ಕುಟುಂಬದವರ ವಿರುದ್ಧ ಅಥವಾ ವೈಯಕ್ತಿ ವಾಗ್ದಾಳಿಗೆ ಮೊದಲು ಇಳಿದವರು ಟಿಡಿಪಿ ಮುಖಂಡರು. ಇದಕ್ಕೆ ನಮ್ಮ ಪಕ್ಷದವು ಪ್ರತಿಕ್ರಿಯಸಿದ್ದಾರಷ್ಟೆ’ ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ತಿರುಗೇಟು ನೀಡಿದ್ದಾರೆ.
Chandrababu Naidu Walks Out Of Assembly,Tears Up
ಇದನ್ನು ಓದಿ: ಆಂಧ್ರಪ್ರದೇಶದಲ್ಲಿ ಮಳೆಗೆ 17 ಮಂದಿ ಸಾವು, 100 ಮಂದಿ ಕಣ್ಮರೆ
ಇದನ್ನು ಓದಿ: ಸ್ಥಳೀಯ ಸಂಸ್ಥೆ ಚುನಾವಣೆ: ವೈಎಸ್ಆರ್ ಕಾಂಗ್ರೆಸ್ ಭರ್ಜರಿ ಗೆಲುವು
Discussion about this post