ನವದೆಹಲಿ: ವಿರಳವಾಗುತ್ತಿರುವ ಸಂಪನ್ಮೂಲಗಳನ್ನು ಸಮತೋಲಿತವಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳವ ನಿಟ್ಟಿನಲ್ಲಿ ಸರ್ಕಾರಗಳು ನೀಡುವ ಉಚಿತ ಕೊಡುಗೆಗಳು ಎಷ್ಟರ ಮಟ್ಟಿಗೆ ಅಗತ್ಯವಿದೆ ಎಂಬುದರ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕು. ಇವುಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುವ ಈ ಕುರಿತಂತೆ ಸಂಸತ್ನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಪರಿಶೀಲಿಸಬೇಕು ಎಂದು ರಾಜ್ಯಸಭೆಯ ಸಭಾಪತಿಗಳೂ ಆಗಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಪಿಎಸಿಯ ಶತಮಾನೋತ್ಸವದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸದೀಯ ವ್ಯವಸ್ಥೆಯಲ್ಲಿ ಪಿಎಸಿ ಎಲ್ಲ ಸಮಿತಿಗಳಿಗೂ ತಾಯಿ ಸ್ಥಾನದಲ್ಲಿದೆ. ಮನೆಯಲ್ಲಿ ತಾಯಿ ಹೇಗೆ ಖರ್ಚುವೆಚ್ಚದ ಬಗ್ಗೆ ನಿಗಾ ಇರಿಸಿ ಹಣಪೋಲಾಗದಂತೆ ಕಾಪಾಡುತ್ತಾಳೋ ಅದೇ ರೀತಿ ಪಿಎಸಿ ಸರ್ಕಾರದ ಬೊಕ್ಕಸದ ಹಣ ಸಮರ್ಪಕ ವಿನಿಯೋಗ ಆಗುವ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದಿದ್ದಾರೆ.
ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳ ಮೇಲಿನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಉಚಿತ ಕೊಡುಗೆಗಳನ್ನು ನೀಡಲು ತೆರಿಗೆದಾರರ ಹಣವನ್ನು ಬಳಸುವುದು ಸರಿಯೇ ಎಂಬುದರ ಬಗ್ಗೆ ಚರ್ಚೆ ನಡೆಯಬೇಕು. ಸಂಸತ್ತು ಅನುಮೋದಿಸುವ ಪ್ರತಿಯೊಂದು ಪೈಸೆಯನ್ನು ಬಹಳ ಎಚ್ಚರಿಕೆಯಿಂದ ಸಮಾಜೋ ಆರ್ಥಿಕ ಗುರಿಗಳನ್ನು ಸಾಧಿಸಲು ಬಳಕೆ ಮಾಡಬೇಕು ಎಂದಿದ್ದಾರೆ.
ಸರ್ಕಾರದ ಖರ್ಚುವೆಚ್ಚ ಹೆಚ್ಚಿರುವ ಬಗ್ಗೆ ದಿನಾ ಮಾಧ್ಯಮದಲ್ಲಿ ನೋಡುತ್ತಿರುತ್ತೇವೆ. ಸರ್ಕಾರದ ವಿವಿಧ ಅಂಗ ಸಂಸ್ಥೆಗಳು ವೆಚ್ಚ ತಗ್ಗಿಸುವ ಬಗ್ಗೆ ಸಲಹೆ, ಶಿಫಾರಸುಗಳನ್ನು ನೀಡುತ್ತಿರುತ್ತವೆ. ಸದನದಲ್ಲಿ ಸದಸ್ಯರು ಈ ಬಗ್ಗೆ ಧ್ವನಿ ಎತ್ತುತ್ತಿರುತ್ತಾರೆ. ಹೀಗಿರುವಾಗ ಸರ್ಕಾರದ ಖರ್ಚುವೆಚ್ಚದ ಮೇಲೆ ನಿಗಾ ಇರಿಸುವ ಪಿಎಸಿ ಇನ್ನಷ್ಟು ಜಾಗೃತೆಯಿಂದ ಈ ಕಾರ್ಯವನ್ನು ಮಾಡಬೇಕು. ವೆಚ್ಚ ಉಳಿತಾ ಮಾಡುವುದು ಸರ್ಕಾರದ ಬರುವ ವರಮಾನವೇ ಆಗಿದೆ ಎಂದು ಹೇಳಿದ್ದಾರೆ.
ಜನರ ಕಲ್ಯಾಣಕ್ಕೆ ಸರ್ಕಾರ ಒಂದು ರೂಪಾಯಿ ವಿನಿಯೋಗಿಸಿದರೆ 10 ಪೈಸೆ ಮಾತ್ರ ಲಾನುಭವಿಗಳಿಗೆ ತಲುಪತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ 35 ವರ್ಷದ ಹಿಂದೆ ಹೇಳಿದ್ದ ಮಾತನ್ನು ವೆಂಕಯ್ಯನಾಯ್ಡು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.
Vice president calls for a wider debate on freebies
ಇದನ್ನು ಓದಿ: ರಾಜಧಾನಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು: ಸಿಎಂ ಸ್ವಾಗತ
ಇದನ್ನೂ ಓದಿ: ಹಂಪಿ ವೀಕ್ಷಣೆಗೆ ಉಪರಾಷ್ಟ್ರಪತಿ: ಭರದಿಂದ ಸಾಗಿದ ಸಿದ್ಧತೆ
Discussion about this post