ಪ್ರಯಾಗ್ರಾಜ್: ಉತ್ತರ ಪ್ರದೇಶದಲ್ಲಿ ಮುಂದಿನ ಫೆಬ್ರವರಿ/ಮಾರ್ಚ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಆದರೆ, ಕೊರೊನಾದ ಹೊಸ ಪ್ರಭೇದ ಓಮಿಕ್ರಾನ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗ ಮತ್ತು ಪ್ರಧಾಮಮಂತ್ರಿ ನರೇಂದ್ರ ಮೋದಿಗೆ ಅಲಹಾಬಾದ್ ಹೈಕೋರ್ಟ್ ಮನವಿ ಮಾಡಿದೆ.
ಜಾಮೀನು ಕೋರಿದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್, ಜೀವ ಇದ್ದರೆ ಜಗತ್ತು ಆದ್ದರಿಂದ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮುಂದೂಡಬಹುದೆ ಎಂದು ಕೇಳಿದ್ದಾರೆ. ಚುನಾವಣೆ ಘೋಷಣೆಯಾದರೆ ಪ್ರಚಾರ ಸಭೆಗಳು ನಡೆಯುತ್ತವೆ. ಇದರಿಂದ ಕೋವಿಡ್ ಪರಿಸ್ಥಿತಿ ಹೆಚ್ಚಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಉಚಿತ ಲಸಿಕೆ ನೀಡುತ್ತಿರುವ ನರೇಂದ್ರ ಮೋದಿ ಸರ್ಕಾರವನ್ನು ಹೊಗಳಿದ ಜಸ್ಟಿಸ್, ಚುನಾವಣೆಯನ್ನು ಮುಂದೂಡಲು ಪ್ರಧಾನಿಯವರು ಕೂಡ ಆಸ್ಥೆ ವಹಿಸಬೇಕು ಎಂದು ಹೇಳಿದ್ದಾರೆ.
ಓಮಿಕ್ರಾನ್ ಸೋಂಕು ಅಮೆರಿಕ, ಯುರೋಪ್ನ ಹಲವು ದೇಶಗಳು, ಚೀನಾದಲ್ಲಿ ಹೆಚ್ಚಾಗಿದೆ. ಭಾರತದಲ್ಲೂ ಗಣನೀಯವಾಗಿ ಏರುತ್ತಿದೆ. ಇಂಥ ಸಂದರ್ಭದಲ್ಲಿ ಚುನಾವಣೆ ನಡೆಸಿದರೆ ಕೊರೊನಾ ಮೂರನೇ ಅಲೆಯನ್ನು ಮನೆಬಾಗಿಲಿಗೆ ಬಿಟ್ಟುಕೊಂಡಂತೆ ಆಗುತ್ತದೆ. ಎರಡನೇ ಅಲೆಯಲ್ಲಿ ವೇಳೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಇತರ ಐದು ರಾಜ್ಯಗಳ ಹಾಗೂ ಕೆಲವು ರಾಜ್ಯದಲ್ಲಿ ಪಂಚಾಯಿತಿ ಚುನಾವಣೆ ನಡೆದಿತ್ತು. ಈ ವೇಳೆ ಅನೇಕ ಸಾವು-ನೋವು ಸಂಭವಿಸಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಚುನಾವಣಾ ಆಯೋಗ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.ಈ ಅಭಿಪ್ರಾಯದ ಪ್ರತಿಯನ್ನು ಚುನಾವಣಾ ಆಯೋಗ ಮತ್ತು ಕೇಂದ್ರ ಸಕರ್ಕಾರಕ್ಕೆ ಕಳುಹಿಸುವಂತೆ ನ್ಯಾ. ಯಾದವ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ಗೆ ಸೂಚಿಸಿದ್ದಾರೆ.
Allahabad High Court Asks EC, PM To Consider Deferring UP Polls
ಇದನ್ನು ಓದಿ: ಸಾರ್ವಜನಿಕ ನೈತಿಕತೆಯು ಸಾಂವಿಧಾನಿಕ ನೈತಿಕತೆಯನ್ನು ಮರೆಮಾಡಬಾರದು ಎಂದ ರಾಜಸ್ಥಾನ ಹೈಕೋರ್ಟ್
ಇದನ್ನೂ ಓದಿ: Third wave contusion: ಒಮಿಕ್ರಾನ್ ನಿಂದ ಭಾರತಕ್ಕೆ ಮೂರನೇ ಅಲೆಯ ಕಂಟಕ: ಕೇಂದ್ರ ಸಮಿತಿ ಹೇಳಿದ್ದೇನು..?
Discussion about this post