ನವದೆಹಲಿ: ಸ್ವತಂತ್ರ ಸಂಸ್ಥೆಯಾದ ಚುನಾವಣಾ ಆಯೋಗವು ಪ್ರಧಾನಮಂತ್ರಿ ಕಚೇರಿ (ಪಿಎಂಒ)ಜತೆ ಸಭೆ ನಡೆಸಿರುವಾಗ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುತ್ತದೆ ಎಂದು ಹೇಗೆ ನಂಬುವುದು ಎಂದು ಎಂದುರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಎಂ.ಮಲ್ಲಿಕಾರ್ಜುನ ರ್ಖಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಆಯೋಗ ಯಾವುದೇ ಪಕ್ಷಪಾತವಿಲ್ಲದೆ ಚುನಾಣೆಯನ್ನು ನಡೆಸುತ್ತದೆ ಎಂದು ವಿಶ್ವಾಸವನ್ನು ಹೇಗೆ ಇರಿಸುವುದು? ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಂದು ಪಿಎಂಒ ಹೇಳಬಹುದು ಆದರೆ, ಆಯೋಗದ ನಡೆ-ನುಡಿಯಲ್ಲೂ ಅದು ವ್ಯಕ್ತವಾಗಬೇಕು. ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯು ನ್ಯಾಯಸಮ್ಮತವಾಗಿ ನಡೆಯುತ್ತದೆ ಎಂಬುದಕ್ಕೆ ಖಾತ್ರಿ ಏನು? ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗದ ಸ್ವಾಯತ್ತತೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳನ್ನು ಘನತೆಯನ್ನು ನಾಶ ಮಾಡುತ್ತಿರುವ ಸರ್ಕಾರ, ಈಗ ಮತ್ತೂ ಅಧೋಗತಿಗೆ ಇಳಿದಿದೆ. ಚುನಾವಣಾ ಆಯೋಗವನ್ನು ತನ್ನ ಅಧೀನ ಸಾಧನವನ್ನಾಗಿ ಮಾಡಿಕೊಂಡಿದೆ. ದೇಶದಲ್ಲಿ ಈ ರೀತಿಯ ದುರುಪಯೋಗವನ್ನು ಹಿಂದೆಂದೂ ಕೇಳಿರಲಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿರ್ಜೆವಾಲಾ ಟೀಕಿಸಿದ್ದಾರೆ.
ಕಾನೂನು ಸಚಿವಾಲಯದಿಂದ ಬಂದ ಪತ್ರದ ಆಧಾರದ ಮೇಲೆ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ಆಯುಕ್ತರಾದ ರಾಜೀವ್ ಕುಮಾರ್ ಹಾಗೂ ಅನೂಪ್ ಚಂದ್ರ ಪಾಂಡೆ ಪಿಎಂಒ ಜತೆ ನ.16ರಂದು ಆನ್ಲೈನ್ನಲ್ಲಿ ಸಭೆ ನಡೆಸಿದ್ದರು. ಮತದಾರರ ಪಟ್ಟಿ ಕುರಿತಂತೆ ನಡೆದ ಈ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದಶರ್ಶಿ ಪಿ.ಕೆ.ಮಿಶ್ರಾ ವಹಿಸಿದ್ದರು.
EC interaction with PMO: Opposition asks can we expect impartial polls
ಇದನ್ನು ಓದಿ: ಸದನದಲ್ಲಿ ಸಿದ್ದರಾಮಯ್ಯ ಗುಡುಗು: ಚುನಾವಣಾ ಆಯೋಗದ ಅಧಿಕಾರ ಕಸಿಯುವ ಹುನ್ನಾರ
ಇದನ್ನೂ ಓದಿ: Politics: ಬಿಜೆಪಿಯವರು ದೇಶವನ್ನು ಮುಂದಿನ 100 ವರ್ಷಗಳ ಕಾಲ ಆಳುವ ಭ್ರಮೆಲ್ಲಿದ್ದಾರೆ: ಖರ್ಗೆ
Discussion about this post