ಬೆಂಗಳೂರು: ಇತ್ತೀಚೆಗೆ ಆರೋಗ್ಯ ಸುಧಾರಣೆಗೆ ಪ್ರಕೃತಿ ಚಿಕಿತ್ಸೆ ಮೊರೆ ಹೋಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹತ್ತು ದಿನಗಳ ಕಾಲ ತಮ್ಮ ಚಿಕಿತ್ಸೆ ಪಡೆದುಕೊಂಡು ಹೊಸ ಹುರುಪಿನೊಂದಿಗೆ ಮರಳಿದ್ದಾರೆ.
ಬೆಂಗಳೂರು ಉತ್ತರ ಭಾಗದಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಆಗಸ್ಟ್ ೨೧ರಂದು ಮಾಜಿ ಸಿಎಂ ಸಿದ್ದರಾಮಯ್ಯ ದಾಖಲಾಗಿದ್ದರು. ಒಟ್ಟು ಹತ್ತು ದಿವಸದ ಚಿಕಿತ್ಸೆ ಮುಗಿಸಿ ಅವರು ಹಿಂತಿರುಗಿದ್ದಾರೆ.
ಈ ಸಂದರ್ಭ ಸುದ್ಧಿಗಾರರೊಂದಿಗೆ ಮಾತನಾಡಿದ್ದು, ನಾನು ಪ್ರತಿ ಭಾರಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋಗುತ್ತಿದ್ದೆ ಆದರೆ ಈ ಬಾರಿ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದಿದ್ದೇನೆ, ಇಲ್ಲಿಯೂ ಉತ್ತಮ ಚಿಕಿತ್ಸೆ ಸಿಕ್ಕಿದೆ, ನಾಳೆ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸುವುದಾಗಿ ತಿಳಿಸಿದರು.
Discussion about this post