ಎಲ್ ಪಿ ಜಿ ೧ ಸಾವಿರಕ್ಕೂ ಅಧಿಕ ಆಗುವ ಸಾಧ್ಯತೆ ಇದೆ. ಪೆಟ್ರೋಲ್, ಡಿಸೆಲ್ ಎಲ್ಲವೂ ದುಭಾರಿ ಆಗ್ತಾನೆ ಹೋಗ್ತಾ ಇದೆ. ತರಕಾರಿ, ದಿನಸಿ ಸಾಮಾನು ಸಹ ಏರುತ್ತಲೇ ಇದೆ. ದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಜನಸಾಮಾನ್ಯರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬೆಲೆ ಯದ್ವಾತದ್ವ ಏರಿಕೆ ಆಗ್ತಾ ಇದೆ, ಅಚ್ಚೇ ದಿನ್ ಅಂತ ಈ ರೀತಿ ಏರಿಕೆಯಿಂದ ಜನ ಜೀವನ ಅಸ್ತವ್ಯಸ್ತವಾಗಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಹಲವೆಡೆ ಬೆಲೆ ಏರಿಕೆ ಖಂಡಿಸಿ ಜನರ ಹರತಾಳ ನಡೆದಿದೆ. ಸಿಲಿಂಡರ್ ಇಟ್ಟುಕೊಂಡು ಧರಣಿ ನಡೆಸಲಾಗುತ್ತಿದೆ.
ತಜ್ನರು ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚುತ್ತದೆ, ಅಲ್ಲದೆ ಸಿಲಿಂಡರ್ ಬೆಲೆ ಒಂದು ಸಾವಿರದ ಗಡಿ ದಾಟುವ ಮುನ್ಸೂಚನೆ ಇದೆ ಎಂದಿದ್ದಾರೆ. ಇವತ್ತಿದ್ದ ಬೆಲೆ ನಾಳೆ ಇರಲ್ಲ, ಜೀವನ ಸಾಗಿಸೋದೆ ಕಷ್ಟವಾಗ್ತಿದೆ ಎಂದು ಬಡ ಮತ್ತು ಮಧ್ಯಮ ವರ್ಗದ ಜನರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಅಚ್ಛೇದಿನ್ ಹಣೆಬರಹ ಇಷ್ಟೇನಾ? ಎಂದು ಜನರು ಕನ್ನಡ ನಾಡಿಗೆ ಪ್ರತಿಕ್ರಿಯಿಸಿದ್ದಾರೆ.
ಸಾಲು ಸಾಲು ಹಬ್ಬಗಳ ಹಾವಳಿ ಸಹ ಬೆಲೆ ಏರಿಕೆಗೆ ಅನುಕೂಲ ಮಾಡಿಕೊಡುತ್ತೆ. ಪ್ರೊ. ಎಸ್ ಆರ್. ಕೇಶವ ಆರ್ಥಿಕ ತಜ್ನ ಈ ಕುರಿತು ಪ್ರತಿಕ್ರಿಯಿಸಿದ್ದು, ಎಲ್ ಪಿಜಿ, ಡೀಸಲ್, ಪೆಟ್ರೋಲ್ ಬೆಲೆ ಸಹ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
Discussion about this post