ಬೆಂಗಳೂರು: ವಿಪಕ್ಷ ನಾಯಕರಾದ ಸಿದ್ದರಾಮಯ್ಯ ನವರಿಗೆ ಕ್ಲಬ್ ಹೌಸ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳ ಮಹಾಪೂರ ಹರಿದು ಬಂದಿದೆ.
ನಿನ್ನೆಯಷ್ಟೇ ಮಾಧ್ಯಮದ ಮುಂದೆ ’ರಾಜಕಾರ ನಡೆಸಲು ಬೇಕಾಗಿರುವುದು ವಯಸ್ಸಲ್ಲ, ಆರೋಗ್ಯ ಮತ್ತು ದೂರದರ್ಶಿತ್ವ, ನನಗೀಗ ಎಪ್ಪತ್ತೈದು ವರ್ಷ’ ಎಂದು ಹೇಳಿದ್ದರು. ಉತ್ತರ ಕನ್ನಡದ ಅಭಿಮಾನಿಯೊಬ್ಬರು ಅನ್ನದಾನಿ, ಭಾಗ್ಯಗಳ ದಾನಿ’ ಎಂದು ಬಣ್ಣಿಸಿದ್ದಾರೆ.
ಸಾಮಾನ್ಯ ರೈತನ ಮಗನಾಗಿ ಹುಟ್ಟಿ ರಾಜ್ಯದಲ್ಲಿ ಅವರು ಹಿರಿಯ ರಾಜಕಾರಣಿಯಾಗಿ, ಜನರ ನಡುವಿನ ನಾಯಕನಾಗಿ ಬೆಳೆದ ಬಗೆಯನ್ನು ಜನಸಾಮಾನ್ಯರಿಗೂ ಕೊಂಡಾಡಿದ್ದಾರೆ. ಇದೇ ಸಂಧರ್ಭದಲ್ಲಿ ಸಿದ್ದರಾಮಯ್ಯ ನವರು ರಾಷ್ಟ್ರ ರಾಜಕಾರಣದಲ್ಲಿ ಇನ್ನಾದರೂ ದಾಪುಗಾಲು ಇಡಲಿ, ಒಮ್ಮೆ ಮಾಜಿ ಪ್ರಧಾನಿ ದೇವೇಗೌಡರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.
Discussion about this post