ಚಿಕ್ಕಮಗಳೂರು: ವಿದ್ಯುತ್ ಕ್ಷೇತ್ರದ ಖಾಸಗೀಕರಣಗೊಳಿಸಿ ಕಾರ್ಪೋರೇಟ್ ವಲಯಕ್ಕೆ ನೀಡುವ ಹುನ್ನಾರಗಳನ್ನು ಬಿಡಬೇಕೆಂದು ಒತ್ತಾಯಿಸಿ ರೈತಸಂಘವು ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾ ರೈತ ಸಂಘದ ಸದಸ್ಯರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಖಾಸಗಿ ವಲಯದಲ್ಲಿ ವಿದ್ಯುತ್ ಪೂರೈಕೆ ನಡೆದರೆ ತೀವ್ರತರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಚಾರಗಳನ್ನು ಕುರಿತು ತಿಳಿಸಿದ್ದಾರೆ.
ಬಡ ರೈತರಿಗೆ ಮೊದಲೇ ಪಾವತಿ ಮಾಡಿ ಮೀಟರ್ ಅಳವಡಿಸಿ ವಿದ್ಯುತ್ ಪಡೆಯಬೇಕಾದಲ್ಲಿ ಬಹಳ ಹೊಡೆತ ಬೀಳಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ನೀಡುತ್ತಿರುವ ರಿಯಾಯಿತಿ ಮುಂದುವರೆಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಡಿ. ಆರ್. ದುಗ್ಗಪ್ಪ ಗೌಡ, ದಯಾಕರ್ ಮೊದಲಾದವರು ರೈತರ ನೇತೃತ್ವ ವಹಿಸಿದ್ದರು.
d
Discussion about this post