ಹತ್ತು ದಿನಗಳ ಪ್ರಕೃತಿ ಚಿಕಿತ್ಸೆ ಪಡೆದು ರಾಜಕೀಯ ಅಖಾಡಕ್ಕೆ ಇಳಿದಿರುವ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯನವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕೊರೊನಾ ಬಂದ ನಂತರ ತೂಕ ಹೆಚ್ಚಿತ್ತು, ಹೀಗಾಗಿ ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಿದ್ದೆ ಎಂದವರು ಹೇಳಿದರು. ಮೈಸೂರಿನ ಗ್ಯಾಂಗ್ ರೇಪ್ ಕುರಿತು ಕೇಳಿದ ಪ್ರಶ್ನೆಗೆ, ಮೊದಲು ಮೈಸೂರಿಗೆ ಹೋಗಿ, ವಾಸ್ತವ ಅನುಭವ ಏನೆಂದು ಮಾಹಿತಿ ಪಡೆಯುವೆ ಎಂದರು.
ಇತ್ತೀಚೆಗಷ್ಟೇ ಕಾಂಗ್ರೆಸ್ ಫೀಜ್ ಕಿತ್ತು ಹಾಕುತ್ತೇನೆಂದು ಹೇಳಿಕೆ ನೀಡಿದ್ದ ಎಚ್ ಡಿ ಕೆ ಮಾತಿಗೆ, ಮೊದಲು ಅವರು ಚುನಾವಣೆಗೆ ಬರಲಿ, ಜನ ಯಾರ ಫೀಜ್ ಕೀಳುತ್ತಾರೋ ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ನುಡಿದರು.
ಈಶ್ವರಪ್ಪನ ಹೇಳಿಕೆ ವಿರುದ್ಧ್ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ, ಈಶ್ವರಪ್ಪನ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ, ಏಕೆಂದರೆ ಅವರ ಬ್ರೈನ್, ನಾಲಗೆ ಕನೆಕ್ಷನ್ ಕಟ್ ಆಗಿದೆ ಎಂದರು.
ಶಾಲೆ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಕೊರೊನಾ ಸಂಕಷ್ಟದಿಂದ ಶಾಲೆ ನಡೆಯದಿದ್ದರೂ ಕಷ್ಟ, ಪ್ರಾರಂಭ ಮಾಡಿರೋದು ಒಳ್ಳೆಯದು, ಶಾಲೆ ಇಲ್ಲ ಅಂದರೆ ಬಾಲಕಾರ್ಮಿಕ ಸಮಸ್ಯೆ ಹೆಚ್ಚುವುದು ಎಂದು ಇಳಿಸಿದರು.
ಜಾತಿ ಜನಗಣತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿವೇಶನ ನಡೆಸಿ ಹೋರಾಡುವುದಾಗಿ ಇದೇ ವೇಳೆ ತಿಳಿಸಿದರು.
೨ಎ ಪ್ರವರ್ಗದ ಕೆಳಗೆ ಪ್ರಬಲ ಜಾತಿಗಳ ಸೇರಿಸುವ ಬಗ್ಗೆ ತೀರ್ಮಾನ ಮಾಡಬೇಕಾಗಿದೆ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ, ಇತರೆ ಯಾವುದಕ್ಕೂ ಈ ತೀರ್ಮಾನ ಮಾಡಲು ಆಗದು ಜೊತೆಗೆ ಸುಭಾಷ್ ಆಡಿ ನೇತೃತ್ವದ ಸಮಿತಿಗೆ ಯಾವುದೇ ಮಹತ್ವವಿರುವುದಿಲ್ಲ, ಏಕೆಂದರೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅಸ್ತಿತ್ವದಲ್ಲಿದೆ ಎಂದರು.
ಮೀಸಲಾತಿ ಕುರಿತು ಹೇಳುತ್ತಾ, ೯೦ ವರ್ಷಗಳ ಹಿಂದಿನ ಜಾತಿ ಜನಗಣತಿ ಆಧರಿಸಿ ಮೀಸಲಾಗಿ, ಸರ್ಕಾರಿ ಸವಲತ್ತು ಕೊಡಲಾಗುತ್ತಿರುವುದು ಸರಿಯಷ್ಟೆ. ೧೯೩೧ರಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಜಾತಿ ಜನಗಣತಿ ನಡೆದಿತ್ತು, ಈಗಲೂ ಅದನ್ನು ಮಾಡಬೇಕಾಗಿದೆ. ನಮ್ಮ ಸರ್ಕಾರ ನಡೆಸಿರುವ ಜಾತಿ ಜನಗಣತಿ ರಿಪೋರ್ಟ್ ಸರಿ ಇದ್ದು, ಅದನ್ನು ಸರ್ಕಾರ ಅಂಗೀಕರಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
Discussion about this post