ಜೋಧಪುರ್: ರಾಜಸ್ಥಾನದ ಜೋಧಪುರ್ದಲ್ಲಿ ಅತಿವೇಗವಾಗಿ ಸಂಚರಿಸುತ್ತಿದ್ದ ಐಷಾರಾಮಿ ಆಡಿ ಕಾರು ಬೈಕ್ ಮತ್ತು ಸ್ಕೂಟರ್ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯಲ್ಲಿದ್ದ ಗುಡಿಸಲಿಗೆ ನುಗ್ಗಿದ್ದರಿಂದ ಓರ್ವ ಸಾವನ್ನಪ್ಪಿದ್ದಾನೆ. ಎಂಟು ಮಂದಿಗೆ ಗಾಯವಾಗಿದೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.
ಬಿಳಿ ಬಣ್ಣದ ಆಡಿ ಕಾರು, ಸಂಚಾರ ನಿಬಿಡ ರಸ್ತೆಯಲ್ಲಿ ಅತಿ ವೇಗವಾಗಿ ಹೋಗುತ್ತಿತ್ತು. ದ್ವಿಚಕ್ರ ವಾಹನಗಳ ಹಿಂಡು ಮುಂದಿದ್ದರೂ ನಿಧಾನ ಮಾಡದೆ ಮುನ್ನುಗ್ಗಿದ್ದರಿಂದ ಒಂದು ಬೈಕ್ ಮತ್ತು ಸ್ಕೂಟರ್ಗಳಿಗೆ ಈ ಕಾರು ಅಪ್ಪಳಿಸಿತು. ಇದರ ರಭಸಕ್ಕೆ ದ್ವಿಚಕ್ರ ವಾಹನದ ಸವಾರ ಹಾರಿಬಿದ್ದ. ಕ್ಷಣಾರ್ಧದಲ್ಲಿ ಈ ಕಾರು ರಸ್ತೆ ಬದಿಯಲ್ಲಿದ್ದ ಗುಡಿಸಲುಗಳ ಸಾಲಿನ ಮೇಲೆ ನುಗ್ಗಿತು. ಬೀದಿ ಬದಿಯ ವ್ಯಾಪಾರಿಗಳು ಚಲ್ಲಾಪಿಲ್ಲಿಯಾಗಿ ಓಡಿದರು. ಇದರಿಂದ ಅನೇಕರು ಗಾಯಗೊಂಡರು. ಗಾಯಗೊಂಡ ಎಂಟು ಪೈಕಿ ಓರ್ವ ಮೃತಪಟ್ಟಿದ್ದು, ಉಳಿದವರನ್ನು ಜೋಧಪುರದ ಭಾರತೀಯ ವೈದ್ಯವಿಜ್ಞಾನ ಕಾಲೇಜಿನ ಆಸ್ಪತ್ರೆಗೆ ಸೇರಿಸಲಾಗಿದೆ. ಸಾವನ್ನಪ್ಪಿದವನನ್ನು ಮುಕೇಶ್ (30) ಎಂದು ಗುರುತಿಸಲಾಗಿದೆ. ಗಾಯಗೊಂಡವರ ಪೈಕಿ ಮೂವರು ಗುಡಿಸಲಿನಲ್ಲಿ ವಾಸಿಸುತ್ತಿದ್ದವರಾಗಿದ್ದು, ಉಳಿದ ನಾಲ್ವರು ಬೈಕ್ ಸವಾರರು ಎಂದು ಪೊಲೀಸರು ತಿಳಿಸಿದ್ದಾರೆ. ಅತಿ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದು ಅಪಘಾತ ಮಾಡಿದವ ಅಮಿತ್ ನಗರ್ ಪೊಲೀಸರಿಗೆ ಶರಣಾಗಿದ್ದಾನೆ.
ಜೋಧಪುರ್ಕ್ಕೆ ಬೇರೊಂದು ಕೆಲಸದ ನಿಮಿತ್ತ ಭೇಟಿ ನೀಡಿದ್ದ ಮುಖ್ಯಮಂತ್ರಿ ಅಶೋಕ್ ಗೆಲ್ಹೋತ್, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಮಾತನಾಡಿಸಿಕೊಂಡು ಬಂದಿದ್ದಾರೆ. ಮೃತ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ಅವರು, ಗಂಭೀರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ. ಮತ್ತು ಇನ್ನಿತರ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
Audi Rams Bikes, Roadside Huts In Jodhpur
ಇದನ್ನು ಓದಿ: ಹೊಂಡಕ್ಕೆ ಬಿದ್ದ ಓಮಿನಿ: ಕೊಟ್ಟಿಗೆಹಾರದ ಸಮೀಪ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ಇದನ್ನು ಓದಿ: ಭೀಕರ ಅಪಘಾತಕ್ಕೆ ಐವರು ವಿದ್ಯಾರ್ಥಿಗಳು ಬಲಿ : REE ಪರೀಕ್ಷೆ ಬರೆಯಲು ಹೋದವರಿಗೆ ಕಾದಿದ್ದ ಜವರಾಯ
Discussion about this post