ದಾವಣಗೆರೆ: ಕಾಂಗ್ರೆಸ್ ಗೆ ವೈಚಾರಿಕತೆ, ಸಿದ್ಧಾಂತ ದೇಶದ ಬಗ್ಗೆ ಯಾವುದೇ ನಿಖರ ನಿರ್ಣಯಗಳಾಗಲಿ ಇಲ್ಲ. ತೋರಿಕೆಗೆ ಗಾಂಧಿ ಸಿದ್ಧಾಂತ ಇಟ್ಟುಕೊಂಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ತೋರಿಕೆಗಾಗಿ ಗಾಂಧಿ ಸಿದ್ಧಾಂತಗಳನ್ನಿಟ್ಟುಕೊಂಡು ಪ್ರಜಾಪ್ರಭುತ್ವ ಕಾಪಾಡದ ಕಾರಣ ನಾವು ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಕಾಗಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರೂ ಅದರಲ್ಲಿ ಪಾಲ್ಗೊಳ್ಳಬೇಕು. ಜನರ ನಾಡಿಮಿಡಿತ ಅರ್ಥಮಾಡಿಕೊಂಡು, ಸಮಸ್ಯೆಗಳಿಗೆ ಸ್ಪಂಧಿಸಿ, ಜನಪರ ಆಡಳಿತ ನಡೆಸುವ ಉದ್ದೇಶದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿಗೆ ಒಳ್ಳೆಯ ಪರಂಪರೆ ಹಾಕಿದ್ದಕ್ಕಾಗಿ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಬಂಡವಆಳಷಾಹಿಗಳಿಗೆ ಪ್ರೋತ್ಸಾಹ ನೀಡಿದವರು ಕಾಂಗ್ರೆಸ್ ನವರು, ವಾಮ ಮಾರ್ಗದಿಂದ ಕುಟಿಲ ರಾಜಕಾರಾಣ ಮಾಡಿ ಅನ್ಯ ಪಕ್ಷಗಳು ಯಶಸ್ಸು ಕಾಣದಂತೆ ಮಾಡಿದರು. ಬ್ಯಾಂಕ್ ರಾಷ್ಟ್ರೀಕರಣ, ಖಾಸಗೀಕರಣ ಮಾಡಿದ್ದು ಅವರೇ, ದೇಶವನ್ನು ಕಾಪಾಡಲೆಂದು ಬಿಜೆಪಿ ಹುಟ್ಟುಹಾಕಿದ್ದು, ದೇಶಭಕ್ತಿ, ವೈಚಾರಿಕತೆ, ಸಿದ್ಧಾಂತಗಳ ಮೇಲೆ ಜನರಿಗೆ ಸ್ಪಂಧಿಸುವ ಆಡಳಿತ ನೀಡಲು ಪ್ರಧಾನಿ ಮೋದಿಯವರ ನಾಯಕತ್ವ ನಮಗೆ ಲಭ್ಯವಾಗಿದೆ ಎಂದು ಅವರು ಸ್ವಪಕ್ಷದ ಬಗ್ಗೆ ಮೆಚ್ಚಿ ನುಡಿದರು.
ಮೋದಿ ಸರ್ವಸ್ಪರ್ಶಿ ಆಡಳಿತ ನೀಡಿದ್ದಾರೆ. ಪರಿಪಕ್ವ ನಾಯಕತ್ವ ಇದ್ದರೆ ಅದು ಬಿಜೆಪಿಯಲ್ಲಿ ಮಾತ್ರ. ಪ್ರಾದೇಶಿಕ ನಾಯಕತ್ವಕ್ಕೆ ಮನ್ನಣೆ ನೀಡಿರುವ ಪಕ್ಷ ಬಿಜೆಪಿ, ಬಿಜೆಪಿ ಕಟ್ಟಿದ ಬಿಎಸ್ ವೈ ನಮಗೆ ಸಾಕ್ಷಿ, ಯಡಿಯೂರಪ್ಪನವರ ನಾಯಕತ್ವದಲ್ಲಿ ೨ ನೇ ಬಾರಿಗೆ ಅಧಿಕಾರ ಸಾಧ್ಯವಾಯಿತು. ನಮ್ಮ ನೆರೆಹೊರೆ ರಾಜ್ಯದಲ್ಲಿ ಇದು ಆಗಿಲ್ಲ, ರಾಜ್ಯದಲ್ಲಿ ಜನರ ಧ್ವನಿಯಾಗಿ ಬಿಎಸ್ ವೈ ನಿಂತಿದ್ದರು. ಹೀಗಾಗಿ ಕರ್ನಾಟಕದಲ್ಲಿ ಇದು ಸಾಧ್ಯವಾಗಿದೆ. ಜನರ ಭಾವನೆಗಳಿಗೆ ನಾಯಕತ್ವಕ್ಕೆ ಮನ್ನಣೆ ನೀಡಬೇಕು, ಅದು ಕಾಂಗ್ರೆಸ್ ನಲ್ಲಿ ಸಾಧ್ಯವಿಲ್ಲ. ಕಾಂಗ್ರೆಸ್ ಕೇಂದ್ರದಲ್ಲೂ ವೀಕ್, ರಾಜ್ಯದಲ್ಲೂ ವೀಕ್ ಎಂದು ಟೀಕಿಸಿದರು.
ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್, ಮಾಜಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರುಗಳಾದ ಗೋವಿಂದ ಕಾರಜೋಳ, ಆರ್. ಅಶೋಕ್ ಹಾಗೂ ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳು ಸಹ ಉಪಸ್ಥಿತರಿದ್ದರು.

























Discussion about this post