ಕನ್ನಡನಾಡಿ ಸುದ್ಧಿಜಾಲ: ನಂಜನಗೂಡಿನಲ್ಲಿ ನಡೆದಿದೆ ಎನ್ನಲಾದ ದೇವಾಲಯ ನೆಲಸಮ ಕಾರ್ಯವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ. ಪುರಾತನ ದೇವಾಲಯ ದ್ವಂಸ ಮಾಡಿದ್ದು ಸರಿಯಲ್ಲ ಎಂದು ಸಹ ಹೇಳಿದ್ದಾರೆ.
ಧರ್ಮ ಸೂಕ್ಷ್ಮ ವಿಚಾರವಾಗಿರೋದ್ರಿಂದ ಸ್ಥಳೀಯರ, ಸಾರ್ವಜನಿಕರ ಅಭಿಪ್ರಾಯ ತೆಗೆದುಕೊಳ್ಳದೇ ಹೀಗೆ ಮಾಡಬಾರದಿತ್ತು, ಕೋರ್ಟು ಆದೇಶ ಇದ್ದರೂ ವಿವೇಚನೆಯಿಂದ ನಡೆಯಬೇಕಿತ್ತು ಎಂದು ಅವರು ಸಲಹೆ ನೀಡಿದ್ದಾರೆ. ತರಾತುರಿಯಲ್ಲಿ ಅನುಷ್ಠಾನಗೊಳಿಸುವ ಮುನ್ನ ಜಿಲ್ಲಾಡಳಿತ ಇದರ ಪರಿಣಾಮದ ಬಗ್ಗೆ ಯೋಚಿಸಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಕುರಿತು ಟ್ವಿಟ್ಟಿಸಿರುವ ಅವರು ಹಿಂದೂ ಧರ್ಮಾದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿ ಕರ್ನಾಟಕ, ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆನಪಾಗಲಿಲ್ಲವೇ? ಎಂದು ಟೀಕಿಸಿ ಬಿಜೆಪಿ ಕರ್ನಾಟಕಕ್ಕೆ ಟ್ವಿಟ್ಟಿಸಿದ್ದಾರೆ.
ಕೆಡವಿದ ಅಧಿಕಾರಿಗಳನ್ನು ಸಹ ಗುರುತಿಸಿ ಕ್ರಮ ಕೈಗೊಳ್ಳಬೇಕೆಂದು ಸಹ ಆಗ್ರಹಿಸಿದ್ದಾರೆ. ಸರ್ಕಾರವೇ ನೂತನ ನಿವೇಶನ ಮಂಜೂರು ಮಾಡಿ ಸರ್ವರನ್ನೂ ವಿಶ್ವಾಸಕ್ಕೆ ಪಡೆದು, ನೂತನ ದೇವಾಲಯ ನಿರ್ಮಿಸಿಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Discussion about this post