ಹುಬ್ಬಳ್ಳಿ: ಮುಂಬೈ ಕರ್ನಾಟಕದ ಅತೀ ದೊಡ್ಡ ಕೈಗಾರಿಕಾ ನಗರವನ್ನಾಗಿ ಹುಬ್ಬಳ್ಳಿಯನ್ನು ರೂಪಿಸಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲು ಚಿಂತನೆ ನಡೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಂತರ ಹಿರಿಯ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಜಗದೀಶ್ ಶೆಟ್ಟರ್ ಜೊತೆ ಈ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿ, ಹುಬ್ಬಳಿ ಬಗ್ಗೆ ವೈಯಕ್ತಿಕ ಅಭಿಮಾನ ವ್ಯಕ್ತಪಡಿಸಿದ ಅವರು, ಹುಬ್ಬಳ್ಳಿ ನನಗೆ ಇಷ್ಟವಾದ ಊರು, ನಾನು ಸಿಎಂ ಆದರೂ ಸಹ ಹುಬ್ಬಳ್ಳಿಯ ಬಗ್ಗೆ ಸದಾ ಚಿಂತಿಸುತ್ತೇನೆ.
ನನ್ನ ಆಪ್ತರೆಲ್ಲಾ ಇಲ್ಲೇ ಇದ್ದಾರೆ. ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಬಹುಮತದಿಂದ ಗೆಲ್ಲುತ್ತದೆ ಎಂಬ ವಿಶ್ವಾಸವಿದ್ದು, ಸ್ಥಳೀಯ ನಾಯಕರು ಈಗಾಗಲೇ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದವರು ಅಭಿಪ್ರಾಯಪಟ್ಟರು. ಆನಂದ್ ಸಿಂಗ್ ಅಸಮಾಧಾನದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ “ಹಾಗೆ ಅಸಮಾಧಾನ ಏನೂ ಇಲ್ಲ, ಅವರು ಸಂಪರ್ಕದಲ್ಲೇ ಇದ್ದಾರೆ” ಎಂದಿದ್ದಾರೆ.
Discussion about this post