ನವದೆಹಲಿ: ನಾಗಾಲ್ಯಾಂಡ್ನಲ್ಲಿ ಡಿ.5ರಂದು ಗಣಿ ಕಾಮಿರ್ಕರನ್ನು ಬಂಡುಕೋರರೆಂದು ತಪ್ಪಾಗಿ ಭಾವಿಸಿ ಸೇನೆ ಗುಂಡಿಕ್ಕಿ ಕೊಂದ ಘಟನೆಯ ನಂತರ ಪ್ರತಿಭಟನೆ ಹೆಚ್ಚಿರುವುದರಿಂದ ಸೇನಾಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಆಫ್ಸ್ಪಾ) ಹಿಂಪಡೆಯುವ ಬಗ್ಗೆ ಕೇಂದ್ರ ಸರ್ಕಾರ ಐವರು ಸದಸ್ಯರ ಸಮಿತಿಯನ್ನು ಭಾನುವಾರ ರಚಿಸಿದೆ.
ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಗಣತಿ ಆಯುಕ್ತ ವಿವೇಕ್ ಜೋಷಿ ನೇತೃತ್ವದಲ್ಲಿ ರಚನೆಯಾಗಿರುವ ಈ ಸಮಿತಿಗೆ ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಿಯೂಷ್ ಗೋಯಲ್ ಸದಸ್ಯ ಕಾರ್ಯದರ್ಶಿ ಆಗಿದ್ದಾರೆ. ಉಳಿದಂತೆ ನಾಗಾಲ್ಯಾಂಡ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಹಾಗೂ ಅಸ್ಸಾಂ ರೈಫಲ್ಸ್ನ ಮಾಹನಿರ್ದೇಶಕರು ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು 45 ದಿನದಲ್ಲಿ ವರದಿ ಸಲ್ಲಿಸಲಿದೆ. ಈ ಸಮಿತಿಯ ಸಲಹೆಯನ್ನು ಆಧಾರಿಸಿ ಆಫ್ಸ್ಪಾ ಹಿಂಪಡೆಯುವ ಕುರಿತು ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಡಿ.23ರಂದು ನಡೆಸಿದ ಸಭೆಯಲ್ಲಿ ಈ ಸಮಿತಿ ರಚನೆಯ ತೀರ್ಮಾನ ಕೈಗೊಳ್ಳಲಾಗಿತ್ತು ಸಭೆಯಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿ ನಿಫಿಯು ರಿಯೊ ಮತ್ತು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಭಾಗವಹಿಸಿದ್ದರು.
ನಾಗಾಲ್ಯಾಂಡ್ನ ಮೊನ್ ಜಿಲ್ಲೆಯ ಮ್ಯಾನ್ಮಾರ್ ಗಡಿಯ ಅಂಚಿಗೆ ಇರುವ ಕಲ್ಲಿದ್ದಲು ಗಣಿಯಲ್ಲಿ ಡಿ.5ರಂದು ಕೆಲಸ ಮುಗಿಸಿ ಪಿಕ್ಅಪ್ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಕಾಮಿರ್ಕರನ್ನು ಉಲ್ಫಾ ಬಂಡುಕೋರರು ಎಂದು ತಪ್ಪಾಗಿ ಗ್ರಹಿಸಿ ಅವರ ಯೋಧರು ಗುಂಡಿನ ದಾಳಿ ನಡೆಸಿದರು. ಆಕ್ರೋಶಗೊಂಡ ಗ್ರಾಮಸ್ಥರು ಸೇನಾಪಡೆ ಮೇಲೆ ಮುಗಿಬಿದ್ದ ಕಾರಣ ಸಂರ್ಷ ಉಂಟಾಯಿತು. ಈ ಎರಡೂ ಟನೆಯಲ್ಲಿ 14 ನಾಗರಿಕರು ಮತ್ತು ಓರ್ವ ಯೋಧ ಮೃತಪಟ್ಟರು. ಈ ಟನೆಯ ನಂತರ ಆ್ಸ್ಪಾ ರದ್ದುಮಾಡಬೇಕು ಎಂದು ನಾಗಾಲ್ಯಾಂಡ್ ಮತ್ತು ಈಶಾನ್ಯದ ಇನ್ನಿತರ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.
Center Sets Up High Level Committee To Examine Of Lifting AFSPA From Nagaland
ಇದನ್ನು ಓದಿ: ಬಂಡುಕೋರರೆಂದು ತಪ್ಪು ತಿಳಿದು 13 ನಾಗರಿಕರನ್ನು ಕೊಂದ ಸೇನೆ
ಇದನ್ನೂ ಓದಿ: ಭಯೋತ್ಪಾದನೆ ನಿಗ್ರಹಕ್ಕೆ ಏನು ಮಾಡಬೇಕು: ಅಧಿಕಾರಿಗಳಿಗೆ ಅಮಿತ್ ಶಾ ಪ್ರಶ್ನೆ
Discussion about this post