ಬೆಂಗಳೂರು: ಸರ್ಕಾರದ ವಿವಿಧ ನಿಗಮ, ಮಂಡಳಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಒತ್ತಾಯ ನಡೆದಿದ್ದು, ಸಿಎಂ ಬಸವರಾಜ ಬೊಮ್ಮಾಯಿಯವರ ಹೊಣೆ ಇನ್ನಷ್ಟು ಹೆಚ್ಚಿಸಿದೆ. ಸಫಲವಾಗಿ ಸಂಪುಟ ರಚನೆ ಮಾಡಿರುವ ಬೆನ್ನಲ್ಲೇ ಬೊಮ್ಮಾಯಿಯವರಿಗೆ ಮಂಡಳಿ ಮತ್ತು ನಿಗಮಗಳ ಪುನರ್ ರಚನೆ ಮಾಡುವಂತೆ ಹೈಕಮಾಂಡ್ ಸೂಚಿಸಿದೆ.
ಇದೊಂದು ಹೊಸ ಸವಾಲನ್ನು ಹೇಗೆ ನಿಭಾಯಿಸುತ್ತಾರೆ ಎಂದು ಜನತೆ ಸಹ ಕುತೂಹಲದಿಂದ ಕಾದಿದೆ. ಸರಳ ಅಡಳಿತದಲ್ಲಿ ಹೈಕಮಾಂಡ್ ಗಮನ ಸೆಳೆದಿರುವ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನಿಗಮ ಮಂಡಳಿಗಳ ಪುನರ್ರಚನೆ ಯಲ್ಲಿ ಪಕ್ಷದ ನಿಷ್ಠಾತರಿಗೆ, ಪಕ್ಷದ ಕಾರ್ಯಕರ್ತರಿಗೆ, ಸಂಘಟನೆಯಲ್ಲಿ ಸಕ್ರಿಯರಾದವರಿಗೆ ಮಣೆ ಹಾಕಬೇಕೆಂದು ಹೈ ಕಮಾಂಡ್ ನಿಯಮ ರವಾನೆ ಮಾಡಿದೆ.
ಇದೆಲ್ಲದರ ಜೊತೆಗೆ ಮುಂಬರುವ ಚುನಾವಣೆಯ ಹಿತಾಸಕ್ತಿ ಬಹಳ ಮುಖ್ಯವಾದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ನಿಗಮ-ಮಂಡಳಿಗಳಿಗೆ ಸಿಎಂ ಕೆಲವು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅತೃಪ್ತಿ ಹೊಂದಿದ ಶಾಸಕರು, ಹಿರಿಯ ಪಕ್ಷದ ಮುಖಂಡರುಗಳಿಗೆ ಯಡಿಯೂರಪ್ಪನವರ ಕಾಲದಲ್ಲಿ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗಿತ್ತು. ಇದೀಗ ಅವರೆಲ್ಲಾ ಈಗ ಯಡಿಯೂರಪ್ಪನವರ ಬಳಿ ಹೋಗಲಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪನವರ ಬೆಂಬಲಿಗರ ನಿಗಮ-ಮಂಡಳಿಗಳ ನೇಮಕಾತಿ ಪಕ್ಷ ಕೇಂದ್ರಿತ ವ್ಯವಸ್ಥೆ ಗೆ ತರಬೇಕು ಎನ್ನುವ ಚಿಂತನೆ ಮುನ್ನೇಲೆಗೆ ತರಲು, RSS ಕಚೇರಿಯ ನಿರ್ದೇಶನದಂತೆ ಈಗ ಅಸ್ತಿತ್ವದಲ್ಲಿರುನಿಗಮ-ಮಂಡಳಿಗಳಿಂದ ಸದಸ್ಯರ, ಅಧ್ಯಕ್ಷರ ರಾಜಿನಾಮೆ ಪಡೆದು ಪುನರ್ರಚನೆ ಕಾರ್ಯ ಪ್ರಾರಂಭಿಸಬೇಕಿದೆ.
ರಾಜ್ಯದಲ್ಲಿ ೯೮ ನಿಗಮ -ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ, ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ನಾಮ ನಿರ್ದೇಶನ ಗೊಂಡಿರುವ ೧೧೬ ನಿರ್ದೇಶಕರುಗಳಿಗೆ ಈಗ ಪದಚ್ಯುತಿ ಹೊಂದುವ ಭಯವಿದೆ.
ಎಲ್ಲಾ ನಿಗಮ-ಮಂಡಳಿಗಳಲ್ಲಿ ತಕ್ಣಣವೇ ನೇಮಕಾತಿ ತರಲು ಅಸಾಧ್ಯ, ಇದಕ್ಕೆ ಯಡ್ಡಿಯವರ ಅನುಮತಿ ಬೇಕಿದೆ, ಹೀಗಾಗಿ ಯಡಿಯೂರಪ್ಪನವರ ಜೊತೆಗೆ ಸಿಎಂ ಮತ್ತೊಮ್ಮೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.

























Discussion about this post