ಭೋಪಾಲ್: ಪ್ರತಿಭಟನೆ, ಮುಷ್ಕರದ ಮೆರವಣಿಗೆ ವೇಳೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯಾದರೆ ಇದಕ್ಕೆ ತಗುಲುವ ವೆಚ್ಚವನ್ನು ಪ್ರತಿಭಟನಾಕಾರರಿಂದ ಅಥವಾ ಪ್ರತಿಭಟನೆ ಸಂಟಿಸಿದ ಸಂಘ-ಸಂಸ್ಥೆಯಿಂದಲೇ ವಸೂಲು ಅನುಕೂಲ ಕಲ್ಪಿಸುವ ಮಸೂದೆಗೆ ಮಧ್ಯಪ್ರದೇಶದ ವಿಧಾನಸಭೆ ಗುರುವಾರ ಯಾವುದೇ ಚರ್ಚೆ ನಡೆಸದೆ ಅನುಮೋದನೆ ನೀಡಿದೆ. ಈ ವೇಳೆ ವಿರೋಧ ಪಕ್ಷಗಳು ಸಭಾ ತ್ಯಾಗಮಾಡಿದವು. ಈ ಮಸೂದೆಯನ್ನು ಗೃಹ ಮತ್ತು ಸಂಸದೀಯ ಸಚಿವ ನರೋತ್ತಮ ಮಿಶ್ರಾ ಬುಧವಾರ ಮಂಡಿಸಿದ್ದರು.
ಪ್ರತಿಭಟನೆ, ಮುಷ್ಕರ, ಕೋಮು ದಳ್ಳುರಿ ವೇಳೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮದ ಜತೆಗೆ ಈ ಹಾನಿಗೆ ಪರಿಹಾರವನ್ನು ಅವರಿಂದ ವಸೂಲು ಮಾಡಲು ಈ ಮಸೂದೆಯಲ್ಲಿ ಉಲ್ಲೇಖಿವಾಗಿರುವ ಕಾನೂನು ಅವಕಾಶ ಕಲ್ಪಿಸುತ್ತದೆ.
ಉದಾಹರಣೆಗೆ ಉಜ್ಜಯನಿ ಮತ್ತು ಇಂದೋರ್ನಲ್ಲಿ ಕಳೆದ ಏಪ್ರಿಲ್ನಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ಗಳ ಮೇಲೆ ಕಲ್ಲುತೂರಾಟ ನಡೆಸಲಾಯಿತು. ಇದರಿಂದ ಹಲವು ವೈದ್ಯರು ಗಾಯಗೊಂಡರು. ಆಸ್ತಿಗೂ ಹಾನಿ ಆಯಿತು. ಇಂಥ ಸಮಾಜಘಾತುಕರ ವಿರುದ್ಧ ಈ ಕಾನೂನಿನ ಅನ್ವಯ ಕ್ರಮ ಕೈಗೊಳ್ಳುವುದರ ಜತೆಗೆ ಹಾನಿಯ ನಷ್ಟವನ್ನು ಭರಿಸಲು ಹೊಸ ಮಸೂದೆ ಅವಕಾಶ ನೀಡುತ್ತದೆ ಎಂದು ಸಚಿವ ನರೋತ್ತಮ ಮಸೂದೆ ಮಂಡನೆ ವೇಳೆ ಹೇಳಿದ್ದರು.
ಇಂಥದ್ದೇ ಮಸೂದೆಯನ್ನು ಈಗಾಗಲೇ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಅಂಗೀಕರಿಸಿ ಕಾನೂನಾಗಿ ಜಾರಿ ಮಾಡಿವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆದ ವೇಳೆ ಈ ರಾಜ್ಯಗಳು ಈ ಮಸೂದೆಯನ್ನು ಮಂಡಿಸಿದ್ದವು.
MadhyaPradesh Passes Bill To Recover Damages From Protesters
ಇದನ್ನು ಓದಿ: ಭೋಪಾಲ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡಕ್ಕೆ ನಾಲ್ಕು ಶಿಶುಗಳ ಮರಣ
ಇದನ್ನೂ ಓದಿ: Swachh Bharat: ಸ್ವಚ್ಛರಾಜ್ಯಗಳು ಹಾಗೂ ನಗರಗಳ ಹೆಸರುಗಳನ್ನು ಘೋಷಿಸಿದ ಕೇಂದ್ರ ಸರಕಾರ
Discussion about this post