ಕಾನ್ಪುರ: ಕರೊನಾ ಹೊಸ ಪ್ರಭೇದ ಓಮಿಕ್ರಾನ್ನಿಂದ ಆತಂಕಗೊಂಡ ವೈದ್ಯರೊಬ್ಬರು ಪತ್ನಿ ಮತ್ತು ತನ್ನಿಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ರಾಮ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಸುಶೀಲ್ ಕುಮಾರ್ ಆರೋಪಿ ಆಗಿದ್ದು, ಈ ಕೊಲೆಗಳನ್ನು ಮಾಡಿದ ನಂತರ ಅವರು ತಮ್ಮ ಸೋದರಿನಿಗೆ ಕರೆ ಮಾಡಿ; ತಾವೆಸಗಿರುವ ಅಪರಾಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಹೇಳಿ ಪರಾರಿ ಆಗಿದ್ದಾರೆ.
ಓಮಿಕ್ರಾನ್ ಭಾರತದಲ್ಲಿ ಕಾಣಿಸಿಕೊಂಡಿದ್ದರಿಂದ ದಿಗಿಲುಗೊಂಡ ವೈದ್ಯ ತಮ್ಮಪತ್ನಿ ಚಂದ್ರಪ್ರಭಾ (48), ಮಗ ಶಿಖರ್ (18) ಮತ್ತು 10ನೇ ತರಗತಿಯಲ್ಲಿ ಕಲಿಯುತ್ತಿರುವ ಮಗಳನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾರೆ. ಸುಶೀಲ್ ಅವರ ಕುಟುಂಬ ಕಾನ್ಪುರದ ಇಂದಿರಾ ನಗರದಲ್ಲಿನ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ವಾಸವಿತ್ತು.
ಸುಶೀಲ್ ಅವರ ಫ್ಲ್ಯಾಟ್ನಲ್ಲಿ ಪತ್ರವೊಂದು ದೊರಕಿದ್ದು, ಅದರಲ್ಲಿ, ‘ಕೋವಿಡ್ ದುರಿತದ ಕಾಲದಲ್ಲಿ ಶವಗಳನ್ನು ನೋಡಿ ನೋಡಿ ಬೇಸರವಾಗಿದೆ. ಈಗ ಹೊಸ ಪ್ರಭೇದ ಓಮಿಕ್ರಾನ್ ಯಾರನ್ನೂ ಬಿಡುವುದಿಲ್ಲ. ನಾನು ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದೇನೆ. ಓಮಿಕ್ರಾನ್ ತಗುಲಿದರೆ ಕುಟುಂಬದವರು ಅಗಾಧ ನೋವು ಅನುಭವಿಸಬೇಕಾಗುತ್ತದೆ. ಹೀಗಾಗಿ ಅದರ ನೋವಿನಿಂದ ಎಲ್ಲರಿಗೂ ಶಾಶ್ವತ ಬಿಡುಗಡೆ ನೀಡುತ್ತಿದ್ದೇನೆ’ ಎಂದು ಸುಶೀಲ್ ಕುಮಾರ್ ಬರೆದಿದ್ದಾರೆ.
ಸುಶೀಲ್ ಅವರ ಸೋದರ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದು, ಅಣ್ಣನ ಕರೆ ಬಂದ ಕೂಡಲೇ ಪ್ಲ್ಯಾಟ್ಗೆ ಧಾವಿಸಿದರು. ಅತ್ತಿಗೆ, ಇಬ್ಬರು ಮಕ್ಕಳ ಶವ ನೋಡಿ ದಿಗ್ಭ್ರಾಂತರಾದರು.
Kanpur Doctor Bludgeons Wife, Two Children To Death By Hammer
ಇದನ್ನು ಓದಿ: ಓಮಿಕ್ರಾನ್ ಸೋಂಕಿನಿಂದ ಪ್ರವಾಸೋದ್ಯಮಕ್ಕೆ ಹೊಡೆತ
ಇದನ್ನೂ ಓದಿ: ಕೋವಿಡ್ ಸಮಯದಲ್ಲಿ ಡೆಂಘಿ ಹೆಚ್ಚಳದಿಂದ ಸಮಸ್ಯೆ ದ್ವಿಗುಣ; ಎಚ್ಚರ ಎಚ್ಚರ
Discussion about this post