ಬೆಂಗಳೂರು: ಮೈಸೂರು ವಿದ್ಯಾರ್ಥಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಾಗ್ವಾದಗಳಿಗೆ ಈಗ ಮಾಜಿ ಸಂಸದೆ, ನಟಿ ರಮ್ಯಾ ಸಹ ದನಿ ಎತ್ತಿದ್ದಾರೆ. ಪುರುಷರು ಮಾಡೋ ತಪ್ಪಿಗೆ ಮಹಿಳೆಯರನ್ನೇ ಪ್ರತಿಬಾರಿ ಯಾಕೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತೆ ಎಂದವರು ನೈತಿಕವಾಗಿ ಪ್ರಶ್ನಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಮ್ಯ ’ಮಹಿಳೆಯರ ಮೇಲೆ ಪುರುಷರಿಂದಾಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರ, ದೈಹಿಕ ಅಥವಾ ಮಾನಸಿಕ ದೌರ್ಜನ್ಯವೇ ಇರಲಿ.. ಮಹಿಳೆಯರಾದ ನಾವೇ ದೂಷಣೆಗೆ ಒಳಗಾಗುವುದು. ಇದು ನಿನ್ನದೇ ತಪ್ಪು, ನೀನೇ ಹೀಗೆ ಮಾಡಬಾರದಿತ್ತು, ಹಾಗೆ ಮಾಡಬಾರದಿತ್ತು, ಅದನ್ನ ಧರಿಸಬಾರದಿತ್ತು, ನಿನ್ನ ಉಡುಪು ತೀರಾ ಬಿಗಿಯಾಗಿದೆ,
ಚಿಕ್ಕದಾಗಿದೆ.. ನೀನು ಮನೆಯಿಂದ ಹೊರಗೆ ಹೋಗಬಾರದಿತ್ತು, ಮೇಕಪ್ ಧರಿಸಬಾರದಿತ್ತು, ಕೆಂಪು ಲಿಪ್ ಸ್ಟಿಕ್ ಹಾಕಬಾರದಿತ್ತು.. ಇದನ್ನೆಲ್ಲಾ ನಾವು ಆಗಾಗ ಕೇಳುತ್ತಲೇ ಇರ್ತೇವೆ, ಏಕೆ? ಯಾಕಂದ್ರೆ ಪುರುಷರು ಪುರುಷರಾಗೇ ಇರುತ್ತಾರೆ, ನಾವು ಮಾತ್ರ ಬದಲಾಗಬೇಕು, ನಾವು ಮಾತ್ರ ಎಲ್ಲಾ ಅಡ್ಜೆಸ್ಟ್ ಮಾಡಬೇಕು.. ಕಾಂಪ್ರೊಮೈಸ್ ಆಗಬೇಕು.. ಸಹಿಸಿಕೊಳ್ಳಬೇಕು..
ಇಲ್ಲ.. ಇನ್ನ ಆಗಲ್ಲ! ಈ ನಾನ್ ಸೆನ್ಸ್ ಗೆಲ್ಲಾ ಈಗ್ಲೆ ಪೂರ್ಣ ವಿರಾಮ ಇಡಿ.. ಇನ್ಮುಂದೆ ಮಹಿಳೆಯರ ಮೇಲೆ ಆಗುವ ಅಪರಾಧಗಳ ಬಗ್ಗೆ ಕುರುಡರಾಗಬೇಡಿ, ಧ್ವನಿಯೆತ್ತಿ’ ಎಂದು ಬರೆದುಕೊಂಡಿದ್ದಾರೆ. ರಮ್ಯಾ ಪರೋಕ್ಷವಾಗಿ ಗೃಹಸಚಿವರ ಬೇಜವಾಬ್ದಾರಿ ಹೇಳಿಕೆ ವಿರುದ್ಧ ಸಹ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

























Discussion about this post