ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25 ಅನ್ನು ಉತ್ತಮ ಆಡಳಿತ ದಿನವನ್ನಾಗಿ ಕೇಂದ್ರ ಸರ್ಕಾರ ಆಚರಿಸುತ್ತಿದೆ. ಇದರ ಜತೆಗೆ ಬಿಜೆಪಿ ವಿಶೇಷ ಕಿರುನಿಧಿ ಸಂಗ್ರಹ ಅಭಿಯಾನವನ್ನು ಈ ವರ್ಷ ಆರಂಭಿಸಿದೆ. ಪಕ್ಷದ ನಿಧಿಗೆ ಕಿರುಕಾಣಿಕೆಯಾಗಿ ಐದು ರೂಪಾಯಿಯಿಂದ ಹಿಡಿದು ಒಂದು ಸಾವಿರ ರೂಪಾಯಿಯವರೆಗೆ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಕಾರ್ಯಕರ್ತರು, ಬೆಂಬಲಿಗರು ಅಭಿಮಾನಿಗಳು ನೆರವು ನೀಡಬಹುದಾಗಿದೆ. ಈ ಅಭಿಯಾನವು ಜನಸಂದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯರ ಪುಣ್ಯ ಸ್ಮರಣೆ ದಿನವಾದ ಫೆ. 22ರವರೆಗೆ ನಡೆಯಲಿದೆ. ನಮೋ ಆ್ಯಪ್ನ ‘ಡೋನೆಷನ್’ ಮೂಲಕವೂ ದೇಣಿಗೆ ನೀಡಬಹುದಾಗಿದೆ.
“ನಾನು ಪಕ್ಷದ ನಿಧಿಗೆ ಒಂದು ಸಾವಿರ ರೂಪಾಯಿ ದೇಣಿಗೆ ನೀಡಿರುವೆ. ನೀವೂ ಕಿರುದೇಣಿಗೆಯನ್ನು ನೀಡಿ. ನಿಮ್ಮ ಸ್ನೇಹಿತರು, ಬಂಧುಗಳಿಗೂ ಹೇಳಿ ನೆರವನ್ನು ಕೊಡಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. “ದೇಶ ಮೊದಲು ಮತ್ತು ನಿಸ್ವಾರ್ಥ ಸೇವೆಯ ಧ್ಯೇಯದೊಂದಿಗೆ ಪಕ್ಷ$ವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ. ಈ ಮೂಲಕ ಭಾರತವನ್ನು ಸಶಕ್ತಗೊಳಿಸೋಣ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ದೇಣಿಗೆ ಸ್ವೀಕೃತಿಯ ರಶೀದಿಯನ್ನು ಹಾಕಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಒಂದು ಸಾವಿರ ರೂಪಾಯಿಯನ್ನು ನಮೋ ಆ್ಯಪ್ ಮೂಲಕ ನೀಡಿದ್ದಾರೆ. ಕಾರ್ಯಕರ್ತರೂ ನೆರವು ನೀಡಬೇಕು. ಪಕ್ಷವನ್ನು ಆಥಿರ್ಕವಾಗಿ ಸ್ವಾವಲಂಬಿಯನ್ನಾಗಿ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವರು, ಪಕ್ಷದ ಪ್ರಧಾನ ಕಾರ್ಯದಶಿರ್ಗಳು, ವಿವಿಧ ಹಂತದ ಪದಾಧಿಕಾರಿಗಳು ಕೂಡ ವಂತಿಗೆ ನೀಡಿದ್ದಾರೆ.
BJP Launches Special Micro-Donation Capmain
ಇದನ್ನು ಓದಿ: ತ್ರಿಪುರಾ ನಗರ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ
ಇದನ್ನೂ ಓದಿ: ನರೇಂದ್ರ ಮೋದಿಯವರ ಆಡಳಿತ ಸಾಧನೆ, ಪತ್ರದ ಮೂಲಕ ಶುಭಾಶಯ ಅಭಿಯಾನ
Discussion about this post