ಮುಂಬೈ: ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿದಂತೆಯೇ ತಮ್ಮನ್ನೂ ಸಿಲುಕಿಸಲು ಅ.2ರಂದು ರೇವ್ ಪಾರ್ಟಿ ನಡೆದಿದೆ ಎನ್ನಲಾದ ಐಷಾರಾಮಿ ಹಡಗಿಗೆ ಬರುವಂತೆ ಕರೆದಿದ್ದು ನಿಜ ಎಂದು ಮಹಾರಾಷ್ಟ್ರದ ಸಚಿವರಾದ ಕಾಂಗ್ರೆಸ್ ನಾಯಕ ಅಸ್ಲಾಂ ಶೇಖ್ ಸ್ಪಷ್ಟಪಡಿಸಿದ್ದಾರೆ.
ಖಾಶಿಫ್ ಖಾನ್ ಎಂಬುವರಿಂದ ನನಗೆ ಮತ್ತು ನನ್ನ ಮಗನಿಗೆ ಮುಂಬೈನಿಂದ ಗೋವಾಕ್ಕೆ ಹೋಗುತ್ತಿದ್ದ ವಿಹಾರ ನೌಕೆಗೆ ಬರುವಂತೆ ಆಹ್ವಾನ ಬಂದಿತ್ತು ಎಂದು ಶೇಖ್ ಹೇಳಿದ್ದಾರೆ. ಸಚಿವ ಮತ್ತು ಎನ್ಸಿಪಿಯ ನಾಯಕ ನವಾಬ್ ಮಲಿಕ್ ಎರಡು ದಿನದ ಹಿಂದೆ ಪತ್ರಿಕಾಗೋಷ್ಠಿಯಲ್ಲಿ, ಸಚಿವ ಅಸ್ಲಾಂ ಶೇಖ್ ಮತ್ತು ಅವರ ಮಗನಿಗೂ ರೇವ್ ಪಾಟರ್ಟಿಯಲ್ಲಿ ಭಾಗಿಯಾಗುವಂತೆ ಕರೆಯಲಾಗಿತ್ತು ಎಂದು ಆಪಾದಿಸಿದ್ದರು. ಈ ಕುರಿತು ಮಾಧ್ಯಮವರು ಕೇಳಿದ ಪ್ರಶ್ನೆಗೆ ಶೇಖ್ ಮೇಲಿನಂತೆ ಪ್ರತಿಕ್ರಿಯಸಿದರು.
ಇದು ಮೂಲತಃ ಡ್ರಗ್ಸ್ ಸೇವನೆ ಪ್ರಕರಣ ಅಲ್ಲ, ಆರ್ಯನ್ ಖಾನ್ ಅಪಹರಿಸಲು ಬಿಜೆಪಿಯ ಮೋಹಿತ್ ಕಾಂಬೋಜ್ ನಡೆಸಿದ ಹುನ್ನಾರ. ಇದರಲ್ಲಿ ಯಶಸ್ವಿಯಾಗದ ಕಾರಣ ಮಾದಕವಸ್ತು ನಿಯಂತ್ರಣ ದಳದ (ಎನ್ಸಿಬಿ) ಸಮೀರ್ ವಾಂಖೆಡೆ ಸಹಕಾರದಿಂದ ಮಾದಕವಸ್ತು ಸೇವನೆಯ ಪ್ರಕರಣದಲ್ಲಿ ಸಿಲುಕಿಸಲಾಯಿತು. ಇದರಲ್ಲಿ ಸಚಿವ ಶೇಖ್ ಮತ್ತು ಅವರ ಮಗನನ್ನು ಎಳೆದುತಂದು ಮಹಾರಾಷ್ಟ್ರದ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಸಂಚು ನಡೆಸಿದ್ದರು ಎಂದು ಮಲಿಕ್ ಆಪಾದಿಸಿದ್ದರು.
I Was Invited To Same Cruise Says Maharashtra minister Aslam Shaikh
ಇದನ್ನು ಓದಿ: Sameer transfer: ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಪ್ರಕರಣದ ತನಿಖೆಯಿಂದ ಸಮೀರ್ ಎತ್ತಂಗಡಿ
ಇದನ್ನು ಓದಿ:ಎನ್ಸಿಬಿ ವಿರುದ್ಧ ಸುಶಾಂತ್ ಕುಟುಂಬದ ವಕೀಲರ ಟೀಕಾಪ್ರಹಾರ
Discussion about this post